ಸ್ಟೀವ್ ಜಾಬ್ಸ್ ಕನಸು ನನಸಾಗಿಸಲು ಕಾಯುತ್ತಿರುವ ಕ್ಯಾಂಪಸ್
2011ರಲ್ಲಿ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಅಸುನೀಗಿದ ಸ್ಟೀವ್ ಜಾಬ್ಸ್ ಬದುಕಿದ್ದರೆ ಈ ಕ್ಯಾಂಪಸ್ 2015ರಲ್ಲೇ ತನ್ನ ಕೆಲಸಗಾರರಿಗೆ ಮುಕ್ತವಾಗಬೇಕಿತ್ತು. ಆದರೆ, ಅವರ ನಿಧನದಿಂದಾಗಿ ಈ ವರ್ಷ ಉದ್ಘಾಟನೆಯಾಗುವ ನಿರೀಕ್ಷೆಯಿದೆ.
ಸ್ಯಾನ್ ಫ್ರಾನ್ಸಿಸ್ ಕೋ, ಫೆಬ್ರವರಿ 7: ಪ್ರತಿಷ್ಠಿತ ಆ್ಯಪಲ್ ಕಂಪನಿಯು ಕ್ಯಾಲಿಫ್ ನ ಕ್ಯುಪರ್ಟಿನೊ ಪ್ರಾಂತ್ಯದಲ್ಲಿ 5 ಬಿಲಿಯನ್ ಡಾಲರ್ (ಸುಮಾರು 33,715 ಕೋಟಿ ರು.) ವೆಚ್ಚದಲ್ಲಿ ನಿರ್ಮಿಸಿರುವ ಕ್ಯಾಂಪಸ್ ಅನ್ನು ಶೀಘ್ರವೇ ಉದ್ಘಾಟನೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ, ಮಹಾನ್ ಕನಸುಗಾರ ಸ್ಟೀವ್ ಜಾಬ್ಸ್ ಅವರ ಕೊನೆಯ ಪ್ರಾಜೆಕ್ಟ್ ಇದಾಗಿದ್ದರಿಂದಾಗಿ ಈ ಕ್ಯಾಂಪಸ್ ಅನ್ನು ಅವರಿಗೇ ಸಮರ್ಪಣೆ ಮಾಡಲು ಆ್ಯಪಲ್ ಕಂಪನಿ ಮುಂದಾಗಿದೆ.
ಆ್ಯಪಲ್ ಕಂಪನಿಗಾಗಿ ಹಲವಾರು ಆ್ಯಪ್, ಪರಿಕರಗಳನ್ನು ಸೃಷ್ಟಿಸಿ ಜಗತ್ತಿನ ಇತಿಹಾಸದಲ್ಲೇ ಆ ಕಂಪನಿಗೆ ಚರಿತ್ರಾರ್ಹ ಹೆಗ್ಗುರತನ್ನು ತಂದುಕೊಟ್ಟ ಸ್ಟೀವ್ ಜಾಬ್ಸ್ ಅವರು ಮೇದೋಜೀರಕ ಗ್ರಂಥಿಯ (ಪ್ಯಾಂಕ್ರಿಯಾಸ್) ಕ್ಯಾನ್ಸರ್ ನಿಂದಾಗಿ ಅವರು 2011ರಲ್ಲಿ ಅಸುನೀಗಿದರು.

ಹಾಗಾಗಿ, ಆ ಮಹಾನ್ ಕನಸುಗಾರನ ಕೊನೆಯ ಕನಸೊಂದು ಹಾಗೇ ಬಾಕಿ ಉಳಿದಿತ್ತು. ಅದೇ ಕ್ಯುಪರ್ಟಿನೊ ಪ್ರಾಂತ್ಯದಲ್ಲಿ ನಿರ್ಮಿಸಬೇಕೆಂದು ಉದ್ದೇಶಿಸಲಾಗಿದ್ದ ನೂತನ ಕೇಂದ್ರ ಕಚೇರಿ. ಅಚ್ಚುಕಟ್ಟಾದ ವಿನ್ಯಾಸ, ವೈವಿಧ್ಯಮಯ ಕುಸುರಿ ಕಲೆಯಿಂದ ಕಂಗೊಳಿಸುತ್ತಿರುವ ಈ ಕ್ಯಾಂಪಸ್ ನ ಕಾಮಗಾರಿಯ ಗುಣಮಟ್ಟ ಅತಿ ಉತ್ಕೃಷ್ಟವಾಗಿದೆಯೆಂದು ಮೂಲಗಳು ತಿಳಿಸಿವೆ.
ಪುಟ್ಟ ಪೈಪ್ ಲೈನ್ ಅಳವಡಿಸುವುದರಿಂದ ಹಿಡಿದು ಆ ಕಟ್ಟಡಕ್ಕೆ ನೀಡಲಾಗಿರುವ ವಿದ್ಯುತ್ ಸಂಪರ್ಕ, ವೈಫೈ ನಂಥ ತಂತ್ರಜ್ಞಾನ ಅಳವಡಿಕೆ... ಹೀಗೆ ಯಾವುದೇ ವಿಚಾರದಲ್ಲಿ ಕೂದಲೆಳೆಯಷ್ಟೂ ದೋಷವನ್ನೂ ಹುಡುಕಲು ಸಾಧ್ಯವಿಲ್ಲ ಎಂದು ಈ ಪ್ರಾಜೆಕ್ಟ್ ನಲ್ಲಿ ದುಡಿದಿರುವ ಕೆಲವು ಹಾಲಿ ಹಾಗೂ ಮಾಜಿ ಇಂಜಿಯರ್ ಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ ಭವಿಷ್ಯದ ಎಲ್ಲಾ ತಂತ್ರಜ್ಞಾನಗಳಿಗೂ ಹೊಂದುವಂತೆ ಈ ಕಟ್ಟಡವನ್ನು ವಿಶೇಷವಾಗಿ ವಿನ್ಯಾಸಗೊಳಿಸಿರುವುದೇ ಇದರ ಅತಿ ಮಹತ್ವದ ವಿಶೇಷ ಎಂದಿದ್ದಾರೆ ಅವರು.
ಅಂದಹಾಗೆ, ಸ್ಟೀವ್ ಜಾಬ್ಸ್ ಅವರ ಈ ಕನಸಿನ ಕ್ಯಾಂಪಸ್ ಎಲ್ಲಾ ಅಂದುಕೊಂಡಿದ್ದಂತೆ ನಡೆದಿದ್ದರೆ 2015ರಲ್ಲೇ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಬಾಬ್ಸ್ ಅವರ ನಿಧನ ಹಾಗೂ ಮತ್ತಿತರ ತಾಂತ್ರಿಕ ತೊಂದರೆಗಳಿಂದಾಗಿ ಈ ವರ್ಷ ಕಟ್ಟಡದ ಕಾಮಗಾರಿ ಮುಗಿದಿದ್ದು ಈ ವರ್ಷ ಅದು ಉದ್ಘಾಟನೆಗೊಳ್ಳಬೇಕಿದೆ ಎಂದು ಹೇಳಲಾಗಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications