ದೇಶದಲ್ಲಿ 24 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರ
ನವದೆಹಲಿ, ಫೆಬ್ರವರಿ 11: ದೇಶದ ಪ್ರಮುಖ ವಿಮಾನಯಾನ ಸ್ಪೈಸ್ ಜೆಟ್ ಹೊಸದಾಗಿ 24 ದೇಶಿ ಮಾರ್ಗಗಳ ಪಟ್ಟಿಯನ್ನು ಗುರುವಾರದಂದು ಪ್ರಕಟಿಸಿದೆ. ಫೆಬ್ರವರಿ ತಿಂಗಳಲ್ಲೇ ಈ ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಅಜ್ಮೇರ್, ಜೈಸ್ಮಲೇರ್, ಅಹಮದಾಬಾದ್ ಹಾಗೂ ಬೆಂಗಳೂರು ನಗರಗಳಿಗೆ ಸ್ಪೈಸ್ ಜೆಟ್ ಸಂಪರ್ಕ ಒದಗಿಸಲಿದೆ. ಅಜ್ಮೇರ್ -ಅಹಮದಾಬಾದ್, ಅಹಮದಾಬಾದ್ -ಅಮೃತ್ ಸರ್ ಮಾರ್ಗ ಸ್ಪೈಸ್ ಜೆಟ್ ಮಾತ್ರ ಚಾಲ್ತಿಯಲ್ಲಿರುವ ವಿಮಾನಯಾನ ಸಂಸ್ಥೆಯಾಗಿದೆ.
ಗೋಲ್ಡನ್ ಸಿಟಿ ಜೈಸ್ಮಲೇರ್ ನಿಂದ ದೆಹಲಿ, ಅಹಮದಾಬಾದ್ ನಗರಕ್ಕೆ, ಅಹಮದಾಬಾದ್ -ಬೆಂಗಳೂರು, ಕೋಲ್ಕತಾ- ಗುವಾಹತಿ ಹಾಗೂ ಗುವಾಹತಿ-ದೆಹಲಿ ಮಾರ್ಗದಲ್ಲಿ ಪ್ರತಿ ದಿನ ವಿಮಾನಯಾನ ಇದೀಗ ಸಾಧ್ಯವಾಗಲಿದೆ.

ಅಹಮದಾಬಾದ್-ಬಗ್ದೊಗ್ರಾ ಹಾಗೂ ಚೆನ್ನೈ ಕೋಲ್ಕತಾ ನಡುವೆ ವಿಮಾನಗಳು ವಾರಕ್ಕೆ 3 ದಿನಗಳು, ಪಾಟ್ನಾ -ಬೆಂಗಳೂರು ವಾರಕ್ಕೆ ಎರಡು ಬಾರಿ, ಸೂರತ್ -ಚೆನ್ನೈ ನಡುವೆ ವಾರಕ್ಕೆ ನಾಲ್ಕು ಬಾರಿ ವಿಮಾನಯಾನ ಇರಲಿದೆ ಎಂದು ಸಂಸ್ಥೆ ಹೇಳಿದೆ.
ಇದಲ್ಲದೆ ಕೋಲ್ಕತ್ತಾದಿಂದ ಪಕ್ಯಾಂಗ್ ಮಾರ್ಗ, ದೆಹಲಿ- ಡೆಹ್ರಾಡೂನ್ ಮಾರ್ಗದಲ್ಲಿ ಸಂಚರಿಸಲಿವೆ ಎಂದು ಸ್ಪೈಸ್ ಜೆಟ್ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಹೇಳಿದ್ದಾರೆ.
ಇದಲ್ಲದೆ ಮಾರ್ಚ್ ತಿಂಗಳಿನಿಂದ ಮುಂಬೈ-ಲೆಹ್, ಲೆಹ್-ಶ್ರೀನಗರ ಹಾಗೂ ಶ್ರೀನಗರ -ಮುಂಬೈ ಮಾರ್ಗದಲ್ಲಿ ನಾನ್ ಸ್ಟಾಪ್ ವಿಮಾನ ಸಂಚರಿಸಲಿದೆ. ಮುಂಬೈ -ರಾಜ್ ಕೋಟ್, ದೆಹಲಿ-ಧರ್ಮಶಾಲ, ಬೆಂಗಳೂರು- ವಿಜಯವಾಡ ವಿಭಾಗದಲ್ಲೂ ಹೊಸ ಮಾರ್ಗ ಆರಂಭವಾಗಲಿದೆ. ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 63 ತಾಣಗಳಿಗೆ ಪ್ರತಿದಿನ 600 ವಿಮಾನಗಳನ್ನು ಕಳಿಸುತ್ತಿದ್ದು, ಈ ಪೈಕಿ 54 ದೇಶಿ ನಿಲ್ದಾಣಗಳಿವೆ. (ಪಿಟಿಐ)
Recommended Video
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications