ಬಿ.ಎಸ್.ಎನ್.ಎಲ್.ಗ್ರಾಹಕರಿಗೆ ಧನಲಕ್ಷ್ಮಿಕೊಡುಗೆ ರಿಯಾಯಿತಿ
ಬೆಂಗಳೂರು, ಅಕ್ಟೋಬರ್ 25: ಬಿ.ಎಸ್.ಎನ್.ಎಲ್ ಧನಲಕ್ಷ್ಮಿ ಯೋಜನೆಯಡಿ ತನ್ನ ಗ್ರಾಹಕರಿಗೆ ರಿಯಾಯಿತಿ ಕೊಡುಗೆ ಘೋಷಿಸಿದೆ.
ಪ್ರಸ್ತುತ ಬಿಲ್ ಪಾವತಿಸುವ ಅಥವಾ ಒಂದೇ ತಿಂಗಳು ಬಾಕಿ ಉಳಿದ ಎಲ್ಲಾ ಸೇವೆಗಳ ಬಿಲ್ ಪಾವತಿಸುವ ಗ್ರಾಹಕರಿಗೆ ಶೇ 1 ರಷ್ಟು (ಜಿ.ಎಸ್.ಟಿ ಹೊರತುಪಡಿಸಿ) ರಿಯಾಯಿತಿ ಸಿಗಲಿದೆ.
ಅಕ್ಟೋಬರ್ 18 ರಿಂದ ನವೆಂಬರ್ 7ರೊಳಗಿನ ಬಿಲ್ ಪಾವತಿಸುವ ವಾಣಿಜ್ಯ ಗ್ರಾಹಕರಿಗೆ ಶೇ.2 ಹಾಗು 5 ತಿಂಗಳುಗಳ ಬಿಲ್ ಮುಂಚಿತವಾಗಿ ಪಾವತಿಸುವ ಗ್ರಾಹಕರಿಗೆ ಶೇ.3 ರಷ್ಟು ರಿಯಾಯಿತಿ ಸಿಗಲಿದೆ ಎಂದು ಬಿ.ಎಸ್.ಎನ್.ಎಲ್ ಸಹಾಯಕ ಮುಖ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಆಯುಧಪೂಜೆಯಿಂದ ದೀಪಾವಳಿ ತನಕದ ಧನಲಕ್ಷ್ಮಿ ಯೋಜನೆಯ ಲಾಭವು ಲ್ಯಾಂಡ್ ಲೈನ್, ಮೊಬೈಲ್ ಫೋನ್ ಇನ್ನಿತರ ಸೇವೆಗಳಿಗೂ ಅನ್ವಯವಾಗಲಿದೆ. ಮುಂಬರುವ ಬಿಲ್ ಗಳನ್ನು ಮುಂಚಿತವಾಗಿ ಪಾವತಿಸಿದರು ಡಿಸ್ಕೌಂಟ್ ಸಿಗಲಿದೆ.












Click it and Unblock the Notifications