ಸಾಲ ಮರುಪಾವತಿ ಮಾಡದೆ ತಲೆಮರೆಸಿಕೊಂಡಿರುವ 25 ಮಂದಿಯ ಪಟ್ಟಿ ಬಿಡುಗಡೆ ಮಾಡಿದ ಸೆಬಿ
ನವದೆಹಲಿ, ಮಾರ್ಚ್ 13: ಕ್ಯಾಪಿಟಲ್ ಮಾರ್ಕೆಟ್ಸ್ ರೆಗ್ಯುಲೇಟರ್ ಸೆಬಿಯು ಸಾಲ ಪಡೆದು ಮರುಪಾವತಿ ಮಾಡದ 25 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವರು ಇನ್ನೂ ಪತ್ತೆಯಾಗಿಲ್ಲ ಎಂದು ಕಂಡುಬಂದಿದೆ. ಈ 25 ಮಂದಿಯು ಹೂಡಿಕೆದಾರರ ಹಣವನ್ನು ಹಿಂದಿರುಗಿಸಲು ವಿಫಲರಾಗಿದ್ದಾರೆ ಅಥವಾ ಸೆಕ್ಯುರಿಟೀಸ್ ಮಾರುಕಟ್ಟೆಗೆ ಸಂಬಂಧಿಸಿದ ವಿವಿಧ ಅಪರಾಧಗಳಿಗಾಗಿ ನಿಯಂತ್ರಕರು ವಿಧಿಸಿದ ದಂಡವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.
ಪತ್ತೆಹಚ್ಚಲಾಗದ ಸುಸ್ತಿದಾರರ ವಿವರಗಳನ್ನು ಬುಧವಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದ ಸೆಬಿ, ಈ ವ್ಯಕ್ತಿಗಳ ವಿರುದ್ಧ ನಿಯಂತ್ರಕ ವಸೂಲಾತಿ ಅಧಿಕಾರಿಯಿಂದ ವಸೂಲಾತಿ ಪ್ರಮಾಣಪತ್ರಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಆದಾಗ್ಯೂ, ಈ ಸೂಚನೆಗಳನ್ನು ಸಾಲ ಮರುಪಾವತಿ ಮಾಡದವರ ವಿಳಾಸಕ್ಕೆ ನೀಡಲು ಸಾಧ್ಯವಾಗಿಲ್ಲ ಎಂಬುವುದನ್ನು ಈ ಪಟ್ಟಿಯಲ್ಲಿ ವಿವರಣೆ ಮಾಡಲಾಗಿದೆ.
ಈ ಸೂಚನೆಗಳನ್ನು ಜುಲೈ 2014 ರಿಂದ ಜನವರಿ 2022 ರವರೆಗೆ ನೀಡಲಾಗಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತಿಳಿಸಿದೆ. ಮಾರ್ಚ್ 24, 2022 ರೊಳಗೆ ಪತ್ರ ಅಥವಾ ಇ-ಮೇಲ್ ಕಳುಹಿಸುವ ಮೂಲಕ ಸೆಬಿಯ ವಸೂಲಾತಿ ಅಧಿಕಾರಿಯನ್ನು ಸಂಪರ್ಕಿಸಲು ನಿಯಂತ್ರಕರು ಈ ಸಾಲ ಪಾವತಿ ಮಾಡದವರಿಗೆ ವಿನಂತಿ ಮಾಡಿದೆ.

ಇದಲ್ಲದೆ, ಯಾವುದೇ ವ್ಯಕ್ತಿಗೆ ಈ ಸಾಲ ಮರುಪಾವತಿ ಮಾಡದ ವ್ಯಕ್ತಿಗಳ ಬಗ್ಗೆ ತಿಳಿದಿದ್ದರೆ, ಅವರ ವಿವರವನ್ನು ಸಾಲ ವಸೂಲಾತಿ ಅಧಿಕಾರಿಗೆ ಪತ್ರವನ್ನು ಕಳುಹಿಸುವ ಮೂಲಕ ಒದಗಿಸಬಹುದು. ಅಥವಾ ಇ-ಮೇಲ್ ಮಾಡಬಹುದು. 2022ರ ಮಾರ್ಚ್ 24 ರೊಳಗೆ ಈ ಪತ್ರವನ್ನು ಕಳುಹಿಸುವಂತೆ ಸೂಚನೆಯನ್ನು ಉಲ್ಲೇಖ ಮಾಡಲಾಗಿದೆ.
ಸಾಲ ಮರುಪಾವತಿ ಮಾಡದವರು ಯಾರ್ಯಾರು?
ಕನೈಯಾಲಾಲ್ ಜೋಶಿ, ಸಂತೋಷ್ ಕೃಷ್ಣ ಪವಾರ್, ಚೇತನ್ ಮೆಹ್ತಾ, ಮುಕುಂದ್ ಯದು ಜಂಭಾಲೆ, ಅಂಕಿತ್ ಕೆ ಅಗರ್ವಾಲ್, ಜಯೇಶ್ ಶಾ, ಸುರೇಶಕುಮಾರ್ ಪಿ ಜೈನ್, ಪ್ರವೀಣ್ ವಸಿಸ್ಠ, ರಾಜೇಶ್ ತುಕಾರಾಂ ದಾಂಬ್ರೆ, ಜಯೇಶ್ ಕುಮಾರ್ ಶಾ, ದಹ್ಯಾಭಾಯಿ ಜಿ ಪಟೇಲ್, ದಲ್ಸುಖಭಾಯ್ ಡಿ ಪಟೇಲ್, ವಿಠಲಭಾಯ್ ವಿ. ಸುಸ್ತಿದಾರರು ಆಗಿದ್ದಾರೆ.
ಅಲ್ಲದೆ ವಿನೋದ್ ಡಿ ಪಟೇಲ್, ಪ್ರವೀಣ್ ಪಿ ಪಟೇಲ್, ನವೀನ್ಕುಮಾರ್ ಪಟೇಲ್, ಸುನೀಲ್ ಕುರಿಲ್, ದಿಲೀಪ್ ಹೇಮಂತ್ ಜಂಭಾಲೆ, ಜಗದೀಶ್ ಜಯಚಂದಭಾಯ್ ಪಾಂಡ್ಯ, ಚಿರಾಗ್ ದಿನೇಶ್ಕುಮಾರ್ ಶಾ, ಪ್ರಶಾಂತ್ ಖಂಕರಿ, ಕೈಲಾಶ್ ಶ್ರೀರಾಮ್ ಅಗರ್ವಾಲ್, ದತ್ತು ಶಿಟೋಲೆ, ಜಿಂತೇಂದ್ರ ಚಂದ್ರಭಾನ್ ಸಿಂಗ್ ಮತ್ತು ಅಂಕಿತ್ ಸಂಚಾರಿಯಾ ಕೂಡಾ ಸಾಲ ಮರುಪಾವತಿ ಮಾಡದವರು ಆಗಿದ್ದಾರೆ. 2013 ರಲ್ಲಿ ವಸೂಲಾತಿ ಅಧಿಕಾರವನ್ನು ಪಡೆದ ನಂತರ, ಸೆಬಿ ಹೆಚ್ಚಿನ ಸಂಖ್ಯೆಯ ಸಾಲ ಮರುಪಾವತಿ ಮಾಡದವರ ಪಟ್ಟಿಯನ್ನು ಮಾಡಿದೆ. (ಒನ್ಇಂಡಿಯಾ ಸುದ್ದಿ)
-
Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications