ಜಿಯೋ ರೀತಿಯಲ್ಲಿ ರಿಟೇಲ್ ವ್ಯಾಪಾರಕ್ಕೂ ದೈತ್ಯ ಕಂಪನಿಗಳನ್ನ ಸೆಳೆಯಲು ರಿಲಯನ್ಸ್ ಯೋಜನೆ
ನವದೆಹಲಿ, ಸೆಪ್ಟೆಂಬರ್ 5: ಟೆಲಿಕಾಂ ವಲಯ ರಿಲಯನ್ಸ್ ಜಿಯೋದಲ್ಲಿ ಹೂಡಿಕೆಗಾಗಿ ವಿಶ್ವದ ದೈತ್ಯ ಕಂಪನಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ರಿಲಯನ್ಸ್ ಇದೀಗ ತನ್ನ ರಿಟೇಲ್ ವಲಯಕ್ಕೂ ಅದೇ ರೀತಿಯ ಯೋಜನೆ ರೂಪಿಸಿಕೊಂಡಿದೆ ಎಂದು ವರದಿಯಾಗಿದೆ.
ರಿಲಯನ್ಸ್ ಜಿಯೋದಲ್ಲಿ ಕಳೆದ ಕೆಲವು ತಿಂಗಳಲ್ಲಿ 13 ಪ್ರಮುಖ ಕಂಪನಿಗಳು 1.52 ಟ್ರಿಲಿಯನ್ ಮೊತ್ತವನ್ನು ಹೂಡಿಕೆ ಮಾಡಿದ್ದವು, ಈ ಹೂಡಿಕೆದಾರರಲ್ಲಿ ಫೇಸ್ಬುಕ್, ಗೂಗಲ್, ಕೆಕೆಆರ್, ಸಿಲ್ವರ್ ಲೇಕ್ ಮತ್ತು ಟಿಪಿಜಿ ಸೇರಿವೆ. ಈ ಎಲ್ಲಾ ಕಂಪನಿಗಳು ಡಿಜಿಟಲ್ ಘಟಕವಾದ ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ ಒಟ್ಟು ಶೇಕಡಾ 33ರಷ್ಟು ಪಾಲನ್ನು ಪಡೆದುಕೊಂಡಿವೆ.

ಚಿಲ್ಲರೆ ವ್ಯಾಪಾರಕ್ಕೂ ಹೂಡಿಕೆದಾರರನ್ನು ಸೆಳೆಯುವ ಯತ್ನ
ಭಾರತದಲ್ಲಿ ಮಲ್ಟಿ-ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿರ್ಬಂಧಿಸಲಾಗಿರುವುದರಿಂದ, ಆಯಕಟ್ಟಿನ ಮತ್ತು ಹಣಕಾಸು ಹೂಡಿಕೆದಾರರು ಆರ್ಐಎಲ್ ತನ್ನ ಚಿಲ್ಲರೆ ವ್ಯಾಪಾರವನ್ನು ಬೆಳೆಸಲು ಹಣವನ್ನು ಸಂಗ್ರಹಿಸಲು ಮತ್ತು ಸಾಲವನ್ನು ಕಡಿಮೆ ಮಾಡುವ ಪ್ರಯತ್ನಗಳಲ್ಲಿ ತೊಡಗಿದೆ ಎನ್ನಲಾಗಿದೆ.

ಅಮೆಜಾನ್, ಗೂಗಲ್ನಂತಹ ದೈತ್ಯ ಕಂಪನಿಗಳ ಸಂಪರ್ಕ
ಕೊರೊನಾವೈರಸ್ ಸಾಂಕ್ರಾಮಿಕವು ಸರಬರಾಜು ಸರಪಳಿಗಳನ್ನು ಅಡ್ಡಿಪಡಿಸಿದೆ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಮಾರಾಟದ ಮೇಲೆ ಪರಿಣಾಮ ಬೀರಿರುವ ಸಂದರ್ಭದಲ್ಲಿ ಆರ್ಆರ್ವಿಎಲ್(ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್) ತನ್ನ ಚಿಲ್ಲರೆ ವ್ಯಾಪಾರವನ್ನು ಬೆಳೆಸಲು ಮತ್ತು ಭಾರತದ ಆನ್ಲೈನ್ ಚಿಲ್ಲರೆ ಮಾರುಕಟ್ಟೆಯಲ್ಲಿ ಅಮೆಜಾನ್ ಮತ್ತು ವಾಲ್ಮಾರ್ಟ್ನಿಂದ ಸ್ಪರ್ಧೆಯನ್ನು ಎದುರಿಸಲು ಫೇಸ್ಬುಕ್ ಮತ್ತು ಗೂಗಲ್ನಂತಹ ತಂತ್ರಜ್ಞಾನ ದೈತ್ಯರನ್ನು ಸಂಪರ್ಕಿಸಬಹುದು.
"ರಿಲಯನ್ಸ್ ರಿಟೇಲ್ ಜಿಯೋ ಪ್ಲಾಟ್ಫಾರ್ಮ್ಗಳ ಮಾದರಿಯನ್ನು ಅನುಸರಿಸಬಹುದು, ಸಂಸ್ಥೆಯಲ್ಲಿ ಪಾಲನ್ನು ಮಾರಾಟ ಮಾಡುವ ಮೂಲಕ ಅನೇಕ ಹೂಡಿಕೆದಾರರನ್ನು ಸೆಳೆಯಬಹುದು" ಎಂದು ಹಿರಿಯ ಚಿಲ್ಲರೆ ಮಾರುಕಟ್ಟೆ ಸಲಹೆಗಾರರು ಹೇಳಿದ್ದಾರೆ.

ರಿಲಯನ್ಸ್ ರೀಟೇಲ್ ಕಾರ್ಯತಂತ್ರದ ಹೂಡಿಕೆ
"ಎಫ್ಡಿಐ(ವಿದೇಶಿ ನೇರ ಹೂಡಿಕೆ) ನಿರ್ಬಂಧಗಳಿಂದಾಗಿ ರಿಲಯನ್ಸ್ ರಿಟೇಲ್ ಈ ವ್ಯವಹಾರಕ್ಕಾಗಿ ಚಿಲ್ಲರೆ ವ್ಯಾಪಾರಿಗಳೊಂದಿಗೆ ಪಾಲುದಾರರಾಗಲು ಸಾಧ್ಯವಿಲ್ಲ. ಆದ್ದರಿಂದ, ಇದು ಜಿಯೋ ಪ್ಲಾಟ್ಫಾರ್ಮ್ಗಳಿಗೆ ಮಾಡಿದಂತೆ ಹಣಕಾಸಿನ ಅಥವಾ ಕಾರ್ಯತಂತ್ರದ ಹೂಡಿಕೆದಾರರನ್ನು ಮಾತ್ರ ಹುಡುಕಬಹುದು. " ಎಂದು ಟೆಕ್ನೊಪಾಕ್ ಸಲಹೆಗಾರರ ಅಧ್ಯಕ್ಷ ಅರವಿಂದ್ ಸಿಂಘಾಲ್ ಹೇಳಿದ್ದಾರೆ.

ಈ ಮೊದಲೇ ಸೂಚನೆ ಕೊಟ್ಟಿದ್ದ ಮುಕೇಶ್ ಅಂಬಾನಿ
ಮುಂದಿನ ತಿಂಗಳು ತ್ರೈಮಾಸಿಕದಲ್ಲಿ ರಿಲಯನ್ಸ್ ರಿಟೇಲ್ ಜಾಗತಿಕ ಪಾಲುದಾರರನ್ನು ಮತ್ತು ಹೂಡಿಕೆದಾರರನ್ನು ಕಂಪನಿಗೆ ಸೇರಿಸಿಕೊಳ್ಳಲಿದೆ ಎಂದು ಆರ್ಐಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
ಆರ್ಐಎಲ್ನ ವಾರ್ಷಿಕ ವರದಿಯ ಪ್ರಕಾರ, ಕಳೆದ ಹಣಕಾಸಿನ ಕೊನೆಯಲ್ಲಿ ಕಂಪನಿಯ ಒಟ್ಟು ಸಾಲವು 3.36 ಟ್ರಿಲಿಯನ್ ಆಗಿತ್ತು. ಇದರಲ್ಲಿ 4,618 ಕೋಟಿ ರಿಲಯನ್ಸ್ ರಿಟೇಲ್ ಸೇರಿದೆ.
ಇಮೇಲ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಿಲಯನ್ಸ್ ರಿಟೇಲ್ ಲಿಮಿಟೆಡ್ ವಕ್ತಾರರು, "ನೀತಿಯಂತೆ, ನಾವು ಮಾಧ್ಯಮ ಊಹಾಪೋಹಗಳು ಮತ್ತು ವದಂತಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ" ಎಂದು ಹೇಳಿದರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications