ಬೆಂಗಳೂರು ಸಂಸ್ಥೆ ಪಾಲಾದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ
ಬೆಂಗಳೂರು, ಜುಲೈ 28: ವಿಶ್ವದ ಅತಿದೊಡ್ಡ ಚಿನ್ನ ಶುದ್ಧೀಕರಣ ಘಟಕವನ್ನು ಖರೀದಿಸಿರುವುದಾಗಿ ಬೆಂಗಳೂರು ಮೂಲದ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ ಪ್ರಕಟಿಸಿದೆ. ಯುರೋಪಿನ ಚಿನ್ನದ ಶುದ್ಧೀಕರಣ ಘಟಕವನ್ನು ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಸಿಂಗಪುರದ ಅಂಗ ಸಂಸ್ಥೆ ಮೂಲಕ ಖರೀದಿಸಲಾಗಿದೆ.
ವಿಶ್ವದ ಅತಿ ವಿಸ್ತೃತ ಚಿನ್ನದ ಶುದ್ಧೀಕರಣ ಘಟಕ ವಾಲ್ಕಾಂಬಿಯನ್ನು 400 ಮಿಲಿಯನ್ ಯುಎಸ್ ಡಾಲರ್ ನೀಡಿ ನೂರಕ್ಕೆ ನೂರರಷ್ಟು ಖರೀದಿಸಲಾಗಿದೆ ಎಂದು ಷೇರುಪೇಟೆಗೆ ಸೋಮವಾರವೇ ರಾಜೇಶ್ ಎಕ್ಸ್ ಪೋರ್ಟ್ ಮಾಹಿತಿ ನೀಡಿದೆ.

ಜಾಗತಿಕ ಮಟ್ಟದಲ್ಲಿ ರಾಜೇಶ್ ಎಕ್ಸ್ ಪೋರ್ಟ್ ಲಿಮಿಟೆಡ್ (ಆರ್ ಇಎಲ್) ವಿಸ್ತರಿಸಲು ಈ ಖರೀದಿ ಸಹಾಯಕವಾಗಲಿದೆ. ವಾಲ್ಕಂಬಿ ಹಾಗೂ ಆರ್ ಇಎಲ್ ಇನ್ಮುಂದೆ ಆಸ್ಟ್ರೇಲಿಯಾ ಮಾರುಕಟ್ಟೆಯತ್ತ ಗಮನ ಹರಿಸಲಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ಸ್ ಮಾಲೀಕ ರಾಜೇಶ್ ಮೆಹ್ತಾ ಹೇಳಿದ್ದಾರೆ. [ರಾಜೇಶ್ ಎಕ್ಸ್ ಪೋರ್ಟ್ಸ್ ತೆಕ್ಕೆಗೆ 432 ಕೋಟಿ ಡೀಲ್]
ಸ್ವಿಟ್ಜರ್ಲೆಂಡ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಲ್ಕಂಬಿ ಸಂಸ್ಥೆ ಚಿನ್ನ ಸೇರಿದಂತೆ ಅನೇಕ ಲೋಹಗಳ ಶುದ್ಧೀಕರಣ ಘಟಕವನ್ನು ಹೊಂದಿದೆ. ವಾರ್ಷಿಕವಾಗಿ 1,600 ಟನ್ ಗಳಷ್ಟು ಚಿನ್ನ ಹಾಗೂ 2,000 ಟನ್ ಗಳಷ್ಟು ಇತರೆ ಲೋಹಗಳನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.
ರಾಜೇಶ್ ಎಕ್ಸ್ ಪೋರ್ಟ್: ಬೆಂಗಳೂರು ಮೂಲದ ಈ ಸಂಸ್ಥೆ ವಾರ್ಷಿಕವಾಗಿ 250 ಟನ್ ಗಳಷ್ಟು ಚಿನ್ನಾಭರಣವನ್ನು ಮಾರುಕಟ್ಟೆಗೆ ಬಿಡುತ್ತಿದ್ದು, ವಿಶ್ವದ ಅತಿದೊಡ್ಡ ಆಭರಣ ಉತ್ಪಾದನಾ ಸಂಸ್ಥೆಗಳಲ್ಲಿ ಒಂದೆನಿಸಿದೆ. 2014-15ರಲ್ಲಿ 655 ಕೋಟಿ ರು ನಿವ್ವಳ ಲಾಭ, 1,204 ಕೋಟಿ ರು ನಿರ್ವಹಣಾ ಲಾಭ ಪಡೆದುಕೊಂಡಿದ್ದು, ಸಂಸ್ಥೆಯ ಆದಾಯ 50,000 ಕೋಟಿ ರುಗಳಷ್ಟಿದೆ.
ಸಿನಿಮಾ ತಾರೆಗಳಾದ ಜಯಪ್ರದಾ, ದಿವಂಗತ ವಿಷ್ಣುವರ್ಧನ್ ಅವರು ರಾಜೇಶ್ ಎಕ್ಸ್ ಪೋರ್ಟ್ ನ ಶುಭ್ ಜ್ಯುವೆಲ್ಲರ್ಸ್ ನ ರಾಯಭಾರಿಗಳಾಗಿದ್ದಾರೆ.
ರಾಜೇಶ್ ಎಕ್ಸ್ ಪೋರ್ಟ್ ಷೇರುಗಳು ಸೋಮವಾರ ಏರಿಕೆ ಕಂಡರೂ ಮಂಗಳವಾರದಂದು 534.70 ರುನಂತೆ ಕೊಂಚ ಇಳಿಕೆ ಕಂಡಿದೆ. (ಒನ್ ಇಂಡಿಯಾ ಸುದ್ದಿ)
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?











Click it and Unblock the Notifications