ರುಚಿ ಸೋಯಾ ಇಂಡಸ್ಟ್ರೀಸ್ MDಯಾಗಲಿರುವ ಬಾಬಾ ರಾಮದೇವ್ ಸಹೋದರ
ನವದೆಹಲಿ, ನವೆಂಬರ್ 28: ಪತಂಜಲಿ ಆಯುರ್ವೇದ್ನ ಭಾಗವಾಗಿರುವ ಸೋಯಾ ಫುಡ್ ಬ್ರಾಂಡ್ ನ್ಯೂಟ್ರೆಲಾ ತಯಾರಕ ರುಚಿ ಸೋಯಾ ಮಂಡಳಿಗೆ ಯೋಗಗುರು ಬಾಬಾ ರಾಮದೇವ್ ಸಹೋದರ ರಾಮ್ ಭರತ್ರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಲು ಹೊರಟಿದೆ.
ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ಷೇರುದಾರರಿಗೆ ನೀಡಿದ ನೋಟಿಸ್ನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ರಾಮ್ ಭಾರತ್ (41) ಅವರನ್ನು ನೇಮಕ ಮಾಡಲು ಅನುಮೋದನೆ ಕೋರಿದೆ. ಪತಂಜಲಿ ಆಯುರ್ವೇದವು ಕಳೆದ ವರ್ಷ ರುಚಿ ಸೋಯಾ ಬ್ರ್ಯಾಂಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು.
ಪತಂಜಲಿ ಆಯುರ್ವೇದವು ಕಳೆದ ವರ್ಷ ರುಚಿ ಸೋಯಾ ಕಂಪನಿಯ ದಿವಾಳಿತನದ ಪ್ರಕ್ರಿಯೆಯ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡಿತು. ಪತಂಜಲಿ ಆಯುರ್ವೇದ ಲಿಮಿಟೆಡ್ನ ಒಕ್ಕೂಟದ ನಂತರ, ದಿವ್ಯಾ ಯೋಗ ಮಂದಿರ ಟ್ರಸ್ಟ್ (ಅದರ ವ್ಯವಹಾರ ಸಂಸ್ಥೆ, ದಿವ್ಯಾ ಫಾರ್ಮಸಿ ಮೂಲಕ), ಪತಂಜಲಿ ಪರಿವಾಹನ್ ಪ್ರೈವೇಟ್ ಲಿಮಿಟೆಡ್ ಮತ್ತು ಪತಂಜಲಿ ಗ್ರಾಮಧ್ಯೋಗ್ ಸ್ವಾಧೀನಪಡಿಸಿಕೊಂಡಿತು.

ಈ ಮೂಲಕ ರುಚಿ ಸೋಯಾ ಕಂಪನಿಗೆ ಹೊಸ ನಿರ್ವಹಣೆಯು ಮಂಡಳಿಯನ್ನು ನೇಮಿಸುವ ಹಕ್ಕನ್ನು ಪಡೆದುಕೊಂಡಿತು ಎಂದು ಅನುಮೋದನೆಯಲ್ಲಿ ಹೇಳಿದೆ.
"ಆಗಸ್ಟ್ 19, 2020 ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಶ್ರೀ ರಾಮ್ ಭಾರತ್ ಅವರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ 2020 ರ ಆಗಸ್ಟ್ 19 ರಿಂದ 2022 ರ ಡಿಸೆಂಬರ್ 17 ರವರೆಗೆ ಆಯ್ಕೆ ಮಾಡಿದೆ ಮತ್ತು ಅವರ ಹುದ್ದೆಯನ್ನು ನಿರ್ದೇಶಕರಿಂದ, ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬದಲಾಯಿಸಿದೆ "ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಹುದ್ದೆಗಳ ನೇಮಕಾತಿಗಾಗಿ ಷೇರುದಾರರ ಅನುಮೋದನೆ ಪಡೆಯಲಾಗುತ್ತದೆ. ರಾಮ್ ಭರತ್ಗೆ ವಾರ್ಷಿಕ 1 ರೂಪಾಯಿ ಸಂಬಳ ನೀಡಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಿದೆ. ಅಲ್ಲದೆ ಬಾಬಾ ರಾಮದೇವ್ ಆಪ್ತ 48 ವರ್ಷದ ಆಚಾರ್ಯ ಬಾಲಕೃಷ್ಣರನ್ನು ಕಂಪನಿಯ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿದೆ. ಇವರಿಗೂ ವರ್ಷಕ್ಕೆ 1 ರೂಪಾಯಿ ಸಂಬಳ ನೀಡಲಾಗುವುದು.
ಇನ್ನು ಬಾಬಾ ರಾಮದೇವ್ ಅವರನ್ನು ಕಂಪನಿಯ ಮಂಡಳಿಯಲ್ಲಿ ನಿರ್ದೇಶಕರಾಗಿ ನೇಮಕ ಮಾಡುವಂತೆ ನೋಟಿಸ್ನಲ್ಲಿ ಕೋರಲಾಗಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications