ಒಎನ್ ಜಿಸಿ ತೆಕ್ಕೆಗೆ ಎಚ್ ಪಿಸಿಎಲ್- ಇದು 44 ಸಾವಿರ ಕೋಟಿ ವ್ಯವಹಾರ
ಒಎನ್ ಜಿಸಿ ತೆಕ್ಕೆಗೆ ಎಚ್ ಪಿಸಿಎಲ್ ಬರಲಿದೆ ಎಂಬುದು ಸದ್ಯಕ್ಕೆ ವ್ಯವಹಾರ ಜಗತ್ತಿನ ಅತಿದೊಡ್ಡ ಸುದ್ದಿ. ಏಕೆಂದರೆ ಇದು ನಲವತ್ನಾಲ್ಕು ಸಾವಿರ ಕೋಟಿ ರುಪಾಯಿಗಳ ವ್ಯವಹಾರ. ಅದರ ಸುತ್ತಲಿನ ಲೆಕ್ಕಾಚಾರಗಳು ಇಲ್ಲಿವೆ
ನವದೆಹಲಿ, ಫೆಬ್ರವರಿ 27: ಭಾರತದ ಅತಿದೊಡ್ಡ ತೈಲ ಹಾಗೂ ಅನಿಲ ಉತ್ಪಾದನಾ ಕಂಪೆನಿ ಒಎನ್ ಜಿಸಿ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಎಚ್ ಪಿಸಿಎಲ್ ನಲ್ಲಿ ಸರಕಾರ ಹೊಂದಿರುವ ಶೇ 51.11 ರಷ್ಟು ಪಾಲನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಭಾರತದಲ್ಲೇ ಮೂರನೇ ಅತಿದೊಡ್ಡ ತೈಲ ಚಿಲ್ಲರೆ ಮಾರಾಟಗಾರ ಕಂಪನಿ. ಇದರ ಜತೆಗೆ ಹೆಚ್ಚುವರಿಯಾಗಿ ಶೇ 26ರಷ್ಟು ಷೇರುಗಳನ್ನು ಷೇರುದಾರರಿಂದಲೂ ಖರೀದಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಇದರಿಂದ ಒಟ್ಟಾರೆಯಾಗಿ ಶೇ 77.11ರಷ್ಟು ಎಚ್ ಪಿಸಿಎಲ್ ಷೇರುಗಳನ್ನು ಒಎನ್ ಜಿಸಿ ಪಡೆಯಲಿದೆ.[ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಅದೆಂಥ ಮಿಂಚು, ಇದೆಂಥ ತಲ್ಲಣ?]

ಇವೆಲ್ಲ ಶೇಕಡಾವಾರಿನ ಲೆಕ್ಕಾಚಾರ ಆಯಿತು. ಒಟ್ಟಾರೆ ಇದು 44 ಸಾವಿರ ಕೋಟಿ ರುಪಾಯಿಗಳ ವ್ಯವಹಾರ. ಈಗಿನ ಮಾರುಕಟ್ಟೆ ದರದಲ್ಲಿ ಹೇಳಬೇಕೆಂದರೆ 6.6 ಬಿಲಿಯನ್ ಅಮೆರಿಕನ್ ಡಾಲರ್ ಆಗುತ್ತದೆ. ಸರಕಾರದ ಉದ್ದೇಶ ಏನೆಂದರೆ ತೈಲ ಉತ್ಪಾದನೆ ಮಾಡುವಂಥ ಕಂಪನಿ ಹಾಗೂ ರಿಫೈನರಿ ಕಂಪನಿ ಎರಡೂ ಒಟ್ಟಾಗಬೇಕು ಎಂದು ಉನ್ನತ ಮೂಲಗಳು ತಿಳಿಸಿವೆ.[ಏ.1ರಿಂದಲೇ ಎಸ್ ಬಿಐ ಜತೆ 5 ಸಹವರ್ತಿ ಬ್ಯಾಂಕ್ ಗಳ ವಿಲೀನ]
ಇಲ್ಲಿ ಆಯ್ಕೆಗಳು ಬಹಳ ಸೀಮಿತ ಎಚ್ ಪಿಸಿಎಲ್ ಹಾಗೂ ಬಿಪಿಸಿಎಲ್ ನ ಒಎನ್ ಜಿಸಿ ಜೊತೆಗೆ ಸೇರಿಸಬೇಕು ಹಾಗೂ ಐಒಸಿ ಮತ್ತು ಒಐಎಲ್ ಅನ್ನು ಒಂದಾಗಿ ಮಾಡಬೇಕು. ಇದರಿಂದ ಗ್ರಾಹಕರಿಗೆ ಕೂಡ ಎರಡೇ ಆಯ್ಕೆ ಉಳಿಯುತ್ತವೆ. ಎಚ್ ಪಿಸಿಎಲ್ ಅನ್ನು ಒಎನ್ ಜಿಸಿ ಜತೆಗೆ ಸೇರಿಸಬಹುದು. ಆದರೆ ಬಿಪಿಸಿಎಲ್ ಪ್ರತ್ಯೇಕವಾಗಿಯೇ ಉಳಿಯುವ ಸಾಧ್ಯತೆ ಇದೆ.
ಆ ಮೂಲಕ ಗ್ರಾಹಕರಿಗೆ ಮೂರು ಆಯ್ಕೆ ಉಳಿಯುತ್ತವೆ. ಐಒಸಿ, ಒಎನ್ ಜಿಸಿ-ಎಚ್ ಪಿಸಿಎಲ್ ಹಾಗೂ ಬಿಪಿಸಿಎಲ್- ಈ ಮೂರರ ಪೈಕಿ ಎಲ್ಲಾದರೂ ಪೆಟ್ರೋಲ್-ಡೀಸೆಲ್ ಖರೀದಿಸಬಹುದು. ಇದು ಹನ್ನೆರಡು ವರ್ಷಗಳ ಹಿಂದಿನ ಪ್ರಸ್ತಾವ. ಆಗಿನ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಈ ರೀತಿ ಪ್ರಸ್ತಾವ ಮಾಡಿದ್ದರು. ಈ ಬಾರಿ ಬಜೆಟ್ ನಲ್ಲಿ ಅರುಣ್ ಜೇಟ್ಲಿ ಮತ್ತೊಮ್ಮೆ ಹೇಳಿದ್ದರು.['ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು']
ಇದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಬಹುದು ಎಂಬುದು ಮಾತ್ರವಲ್ಲ, ಪೆಟ್ರೋಲ್-ಡೀಸೆಲ್ ಬೆಲೆ ಏರಿಳಿತದ ಮಧ್ಯೆ ಆಗುವ ನಷ್ಟವನ್ನು ಸರಿದೂಗಿಸಿಕೊಂಡು ಹೋಗಲು ಕೂಡ ಅನುಕೂಲ ಆಗುತ್ತದೆ.
-
ಅಯ್ಯಯ್ಯೋ.. 93 ರೂಪಾಯಿಗೆ ಕುಸಿತ ಕಂಡ ಭಾರತದ ಕರೆನ್ಸಿ, ಡಾಲರ್ ಎದುರು ಮಹಾ ಪತನ.. Rupee And Dollar -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications