ನೋಕಿಯಾ ಸಿಬ್ಬಂದಿಗಳಿಗೆ ಕೊವಿಡ್ 19 ಸೋಂಕು, ಘಟಕ ಬಂದ್
ಚೆನ್ನೈ, ಮೇ 27: ಶ್ರೀಪೆರಂಬುದೂರು ಬಳಿಯ ನೋಕಿಯಾ ಕಚೇರಿ ಉತ್ಪಾದನಾ ಘಟಕಕ್ಕೆ ಬಾಗಿಲು ಹಾಕಲಾಗಿದೆ. ನೋಕಿಯಾ ಟೆಲಿಕಾಂ ಗೇರ್ ಉತ್ಪಾದನಾ ಘಟಕದಲ್ಲಿ ಹಲವು ಉದ್ಯೋಗಿಗಳಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿರುವ ಸುದ್ದಿಯಿದೆ.
ಈ ಘಟಕದಲ್ಲಿ ಕನಿಷ್ಠ 42 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸಂಸ್ಥೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಭಾರತದಲ್ಲಿ ಸೋಂಕು ಹರಡದಂತೆ ಲಾಕ್ ಡೌನ್ ಹೇರಿದ ಬಳಿಕ ನೋಕಿಯಾ ಘಟಕ ಕೂಡಾ ಸ್ಥಗಿತಗೊಂಡಿತ್ತು. ಕಂಪನಿಯಲ್ಲಿ ಸಾಮಾಜಿಕ ದೂರ ಮತ್ತು ಕ್ಯಾಂಟೀನ್ ಸೌಲಭ್ಯಗಳಿಗೆ ಬದಲಾವಣೆಳನ್ನು ಜಾರಿಗೆ ತಂದು ಕಾರ್ಯ ನಿರ್ವಹಿಸಲಾಗುತ್ತಿತ್ತು. ಕಳೆದ ವಾರ ಆರಂಭವಾದ ಕಾರ್ಖಾನೆಯನ್ನು ಈಗ ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಕೆಲವೇ ಕೆಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ವ್ಯವಸ್ಥೆಯೊಂದಿಗೆ ಮತ್ತೆ ಘಟಕ ಆರಂಭಿಸುವ ಭರವಸೆಯನ್ನು ಸಂಸ್ಥೆ ನೀಡಿದೆ.

ಒಂದೊಮ್ಮೆ ಚೆನ್ನೈ ಘಟಕದಲ್ಲಿ ಮೂರೂ ಶಿಫ್ಟ್ ಮುಖಾಂತರ 16-20 ದಶಲಕ್ಷ ಮೊಬೈಲ್ ಸೆಟ್ ಗಳನ್ನು ಉತ್ಪಾದಿಸಲಾಗುತ್ತಿತ್ತು. ಕೊನೆ ಕೊನೆಗೆ ಅದೀಗ 40 ಲಕ್ಷಕ್ಕೆ ಕುಸಿದಿತ್ತು. ನೋಕಿಯಾವನ್ನು ಮೈಕ್ರೋಸಾಫ್ಟ್ ಸಂಸ್ಥೆ ಖರೀದಿಸಿದ ಬಳಿಕ ಈ ಘಟಕದಲ್ಲಿದ್ದ ಸಾವಿರಾರು ಸಿಬ್ಬಂದಿಗೆ ಲಕ್ಷಾಂತರ ರುಪಾಯಿ ಪ್ಯಾಕೇಜ್ ನೀಡಿ ಸ್ವಯಂ ನಿವೃತ್ತಿ ಪಡೆಯಲು ಉತ್ತೇಜಿಸಲಾಯಿತು. ಮೈಕ್ರೋಸಾಫ್ಟ್ ಕೈಬಿಟ್ಟು ತೆರಳಿದ ಬಳಿಕ ಮತ್ತೆ ಸ್ವತಂತ್ರವಾಗಿ ಬೆಳೆದ ನೋಕಿಯಾ ಈ ಘಟಕವನ್ನು ಉಳಿಸಿಕೊಂಡು ಬಂದಿದೆ.
ದೆಹಲಿಯಲ್ಲಿರುವ ಒಪ್ಪೋ ಮೊಬೈಲ್ ಉತ್ಪಾದನಾ ಘಟಕ ಕೂಡಾ ಕೊರೊನಾ ಸೋಂಕಿಗೆ ಸಿಲುಕಿ ಬಂದ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications