ಎಲ್ ಅಂಡ್ ಟಿ ಪಾಲಾಗಲಿರುವ ಮೈಂಡ್ ಟ್ರೀ, ರಾಜೀನಾಮೆಗೆ ಮುಂದಾದ ಸಿಇಒ
ಬೆಂಗಳೂರು, ಜೂನ್ 27: ಪ್ರಮುಖ ಐಟಿ ಕಂಪನಿ ಮೈಂಡ್ ಟ್ರೀಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮೂಲ ಸೌಕರ್ಯ ಸಂಸ್ಥೆ ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಮುಂದಾಗಿದೆ. ಈ ಬೆಳವಣಿಗೆ ನಂತರ ಮೈಂಡ್ ಟ್ರೀ ಸಿಇಒ ರೊಸ್ತೋ ರಾವಣನ್ ಅವರು ರಾಜೀನಾಮೆ ನೀಡುವ ಸುದ್ದಿ ಹಬ್ಬಿದೆ.
ಕಳೆದ ಮಾರ್ಚ್ ನಲ್ಲಿ ಮೈಂಡ್ ಟ್ರೀ ಲಿಮಿಟೆಡ್ ಖರೀದಿ ಮಾತುಕತೆ ನಡೆಸಿದ ಎಲ್ ಅಂಡ್ ಟಿ ಸದ್ಯ ಮುಕ್ತ ಆಫರ್ ಮೂಲಕ ಷೇರು ಮಾರಾಟಕ್ಕೆ ಮುಂದಾಗಿದೆ. ಇದಕ್ಕಾಗಿ ಸಿಂಗಪುರ ಮೂಲದ ಹೂಡಿಕೆದಾರರಾ ನಲಂದಾ ಕ್ಯಾಪಿಟಲ್ ನೆರವು ಪಡೆದಿದೆ. ಮೈಂಡ್ ಟ್ರೀ ಸ್ಥಾಪಕರು, ರಾವಣನ್ ಅವರನ್ನು ಮುಂದುವರೆಸುವಂತೆ ಕೋರಿದ್ದಾರೆ.
ಈ ನಡುವೆ ಮೈಂಡ್ ಟ್ರೀ ಸ್ಥಾಪಕರಾದ ಸುಬ್ರತೋ ಬಾಗ್ಚಿ, ಎನ್ ಎಸ್ ಪಾರ್ಥಸಾರಥಿ ಹಾಗೂ ಕೃಷ್ಣಕುಮಾರ್ ನಟರಾಜನ್ ಅವರು ತಮ್ಮ ಪಾಲಿನ ಶೇ 13ರಷ್ಟು ಪಾಲನ್ನು ಮಾರಾಟ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

ಕೆಫೆ ಕಾಫಿ ಡೇಯ ಸ್ಥಾಪಕ ವಿಜಿ ಸಿದ್ದಾರ್ಥ ಅವರು ಮೈಂಡ್ ಟ್ರೀ ಹಾಗೂ ಕಾಫಿ ಉದ್ಯಮ ಒಂದು ಭಾಗವಾಗಿ ತಮ್ಮ ಬಳಿ ಇದ್ದ ಶೇ 20.32ರಷ್ಟು ಪಾಲನ್ನು ಮಾರ್ಚ್ ತಿಂಗಳಿನಲ್ಲಿ ಸುಮಾರು 3,000 ಕೋಟಿ ರು ಮೌಲ್ಯಕ್ಕೆ ಮಾರಾಟ ಮಾಡಿದ್ದರು.
ಸದ್ಯ ಮೈಂಡ್ ಟ್ರೀಯಲ್ಲಿ ಶೇ 30ರಷ್ಟು ಪಾಲು ಹೊಂದಿರುವ ಎಲ್ ಅಂಡ್ ಟಿ, ಇನ್ನು ಶೇ 31ರಷ್ಟು ಪಾಲು ಪಡೆದು ಸಂಪೂರ್ಣ ಹಿಡಿತ ಹೊಂದಲಿದೆ. 980 ರು ಪ್ರತಿ ಷೇರಿನಂತೆ ಇದ್ದ ಓಪನ್ ಆಫರ್ ಜೂನ್ 17ರಂದು ಆರಂಭವಾಗಿದ್ದು, ಜೂನ್ 28ಕ್ಕೆ ಮುಕ್ತಾಯವಾಗಲಿದೆ. ಒಟ್ಟಾರೆ 5.13 ಕೋಟಿ ಷೇರುಗಳು ಎಲ್ ಅಂಡ್ ಟಿ ಪಾಲಾದರೆ ಮೈಂಡ್ ಟ್ರೀಯಲ್ಲಿ ಒಟ್ಟು 66.32% ಪಾಲು ಹೊಂದಲಿದೆ. ಜೂನ್ 26ರ ಅಂತ್ಯಕ್ಕೆ ಎಲ್ ಅಂಡ್ ಟಿ ಓಪನ್ ಆಫರ್ ಗೆ 4.83ಕೋಟಿ ಷೇರು ಅಥವಾ 94.16% ಗೆ ಬಿಡ್ ಬಂದಿವೆ.(ಪಿಟಿಐ)
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications