ಮೈಕ್ರೋಸಾಫ್ಟ್ ಸತ್ಯ ಸಂಬಳದ ಹೋಲಿಕೆ ಪಟ್ಟಿ
ಬೆಂಗಳೂರು, ಫೆ.6: ಹೈದರಾಬಾದ್ ಮೂಲದ, ಮಣಿಪಾಲದಲ್ಲಿ ವ್ಯಾಸಂಗ ಮಾಡಿರುವ ಮೈಕ್ರೋಸಾಫ್ಟ್ ಸಂಸ್ಥೆತ ನೂತನ ಸಿಇಒ ಸತ್ಯ ನಾದೆಳ್ಲ ಅವರ ವಾರ್ಷಿಕ ಸಂಬಳದ ಮೊತ್ತ ಬಹಿರಂಗಗೊಂಡಿದೆ. ಸತ್ಯ ಅವರಿಗೆ ವಾರ್ಷಿಕವಾಗಿ 1.2 ಮಿಲಿಯನ್ ಯುಎಸ್ ಡಾಲರ್ (ಸುಮಾರು 7.50 ಕೋಟಿ) ಸಿಗಲಿದೆ.
ಒಟ್ಟಾರೆ ಪ್ಯಾಕೇಜ್ ನಂತೆ ಬೋನಸ್, ಸ್ಟಾಕ್ ಅವಾರ್ಡ್ ಮತ್ತಿತರ ಸೌಲಭ್ಯ ಸೇರಿ ಲೆಕ್ಕ ಮಾಡಿದರೆ ಒಟ್ಟಾರೆ ವೇತನ 18 ಮಿಲಿಯನ್ ಯುಎಸ್ ಡಾಲರ್ (112 ಕೋಟಿ ರು) ಎಂದು ಹೊಸ ಉದ್ಯೋಗದ ಒಪ್ಪಂದದಲ್ಲಿ ತಿಳಿಸಲಾಗಿದೆ.
ಸುಮಾರು 78 ಬಿಲಿಯನ್ ಯುಎಸ್ ಡಾಲರ್ ತೂಗುವ ಕಂಪನಿಯ ಸಿಇಒ ಆಗಿರುವ 46 ವರ್ಷದ ಸತ್ಯ ಅವರಿಗೆ 'ಸೆಮಿ ಮಂಥ್ಲಿ' ಸೌಲಭ್ಯದಂತೆ ಸಂಬಳ ಸಿಗಲಿದೆಯಂತೆ. ಹೀಗಾಗಿ ತಿಂಗಳ ಸಂಬಳದ ಲೆಕ್ಕ ಸಿಗುವುದಿಲ್ಲ. ಮೈಕ್ರೋಸಾಫ್ಟ್ ನಲ್ಲಿ ಸುಮಾರು 22 ವರ್ಷಗಳ ಕಾಲ ದುಡಿದ ಅನುಭವ ಇರುವ ಸತ್ಯ ಅವರಿಗೆ ನಗದು ರೂಪದಲ್ಲಿ ಬೋನಸ್ ಕೂಡಾ ನೀಡಲಾಗುತ್ತದೆ. ಇದರ ಅನುಪಾತ ಶೂನ್ಯದಿಂದ 300 % ತನಕ ಇದ್ದು 3.6 ಮಿಲಿಯನ್ ಯುಎಸ್ ಡಾಲರ್ ಲಭಿಸಲಿದೆ. ಇನ್ನೂ ಸ್ಟಾಕ್ ಅವಾರ್ಡ್ ವಿಷಯಕ್ಕೆ ಬಂದರೆ 13.2 ಮಿಲಿಯನ್ ಯುಎಸ್ ಡಾಲರ್ ಸಿಗಲಿದ್ದು ಒಟ್ಟಾರೆ 18 ಮಿಲಿಯನ್ ಯುಎಸ್ ಡಾಲರ್ ಲಭಿಸಲಿದೆ. 2015 ರ ಆರ್ಥಿಕ ವರ್ಷದಿಂದ ಸ್ಟಾಕ್ ಅವಾರ್ಡ್ ಮೊತ್ತ ಸಿಗಲಿದೆ. (ಪಿಟಿಐ)

ಮೈಕ್ರೋಸಾಫ್ಟ್ ಸತ್ಯ ಸಂಬಳ ಎಷ್ಟಿದೆ?
ಸತ್ಯ ಅವರು ವಾರ್ಷಿಕ ಸಂಬಳ 675,000 ಯುಎಸ್ ಡಾಲರ್ ಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಮೂರನೇ ಸಿಇಒ ಎನಿಸಿದ್ದಾರೆ. ಈ ಮುಂಚೆ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಬಾಲ್ಮರ್ ಇದೇ ಪ್ರಮಾಣದ ಸಂಬಳ ಎಣಿಸಿದ್ದರು.
ಕಳೆದ ವರ್ಷ ಸತ್ಯ ಅವರಿಗೆ ಕಳೆದ ವರ್ಷದ ಎಣಿಕೆಯಂತೆ 1.6 ಮಿಲಿಯನ್ ಯುಎಸ್ ಡಾಲರ್ ನಗದು ಬೋನಸ್ ಸಿಗಲಿದೆ. ಮೈಕ್ರೋಸಾಫ್ಟ್ ಆರ್ಥಿಕ ವರ್ಷ ಜುಲೈ 1 ರಿಂದ ಜೂ 30 ತನಕ ಇದೆ.

ಟಿಸಿಎಸ್ ಸಂಸ್ಥೆಯ ಎನ್ ಚಂದ್ರಶೇಖರನ್
ಭಾರತೀಯ ಮೂಲದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸಂಸ್ಥೆಯ ಎನ್ ಚಂದ್ರಶೇಖರನ್ ಅವರ 11.6 ಕೋಟಿ ರು ನಷ್ಟಿದೆ.

ಎಂಫಾಸೀಸ್ ನ ಬಾಲು ಗಣೇಶ್ ಅಯ್ಯರ್
ಎಂಫಾಸೀಸ್ ನ ಬಾಲು ಗಣೇಶ್ ಅಯ್ಯರ್ ಸಂಬಳ 7.45 ಕೋಟಿ ರು

ವಿಪ್ರೋ ಸಂಸ್ಥೆ ಕುರಿಯನ್ ಸಂಬಳ
ವಿಪ್ರೋ ಸಂಸ್ಥೆ ಕುರಿಯನ್ ಸಂಬಳ ವಿಪ್ರೋ ಸಂಸ್ಥೆ ಕುರಿಯನ್ ಸಂಬಳ 6.13 ಕೋಟಿ ರು

ಎಚ್ ಸಿಎಲ್ ಟೆಕ್ ಸಂಸ್ಥೆ ವಿನೀತ್ ನಾಯರ್
ಎಚ್ ಸಿಎಲ್ ಟೆಕ್ ಸಂಸ್ಥೆ ವಿನೀತ್ ನಾಯರ್ ಸಂಬಳ 8.42 ಕೋಟಿ ರು

ಐಗೇಟ್ ಸಂಸ್ಥೆ ಅಶೋಕ್ ವೆಮೂರಿ ಸಂಬಳ
ಐಗೇಟ್ ಸಂಸ್ಥೆ ಅಶೋಕ್ ವೆಮೂರಿ ಸಂಬಳ 8.17 ಕೋಟಿ ರು
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications