Meta layoffs: ಫೇಸ್ಬುಕ್ನಿಂದ ಭಾರತದಲ್ಲಿನ ಉನ್ನತ ಅಧಿಕಾರಿಗಳು ಔಟ್- 10,000 ಉದ್ಯೋಗ ಕಡಿತದ ಪರಿಣಾಮ
ಫೇಸ್ಬುಕ್ನ ಮಾತೃಸಂಸ್ಥೆಯಾಗಿರುವ ಮೆಟಾ ಪ್ಲಾಟ್ಫಾರ್ಮ್ಸ್, ಉದ್ಯೋಗ ಕಡಿತದ ಅಂತಿಮ ಹಂತವನ್ನು ಜಾರಿಗೆ ತಂದಿದೆ. ಇದು ವಿವಿಧ ಇಲಾಖೆಗಳು ಮತ್ತು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಲಿದೆ. ಇದು 10,000 ಉದ್ಯೋಗಗಳನ್ನು ವಜಾಗೊಳಿಸುವ ಪ್ರಕ್ರಿಯೆಯ ಅಂತಿಮ ಹಂತವಾಗಿದೆ. ಹತ್ತು ಸಾವಿರ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಮೆಟಾ ಕಂಪನಿಯು ಮಾರ್ಚ್ನಲ್ಲಿ ಘೋಷಣೆ ಮಾಡಿತ್ತು.
ಬಾಧಿತ ಉದ್ಯೋಗಿಗಳಲ್ಲಿ ಭಾರತದ ಮಾರ್ಕೆಟಿಂಗ್ ನಿರ್ದೇಶಕ ಅವಿನಾಶ್ ಪಂತ್ ಮತ್ತು ಮಾಧ್ಯಮ ಪಾಲುದಾರಿಕೆಯ ನಿರ್ದೇಶಕ ಮತ್ತು ಮುಖ್ಯಸ್ಥ ಸಾಕೇತ್ ಝಾ ಸೌರಭ್ ಸೇರಿದ್ದಾರೆ. ಈ ಉನ್ನತ ಅಧಿಕಾರಿಗಳು ತಮ್ಮ ಉದ್ಯೋಗ ಕಡಿತದ ಬಗ್ಗೆ ಇಲ್ಲಿಯವರಿಗೂ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ.

ಮಾರ್ಕೆಟಿಂಗ್, ಸೈಟ್ ಸೆಕ್ಯುರಿಟಿ, ಎಂಟರ್ಪ್ರೈಸ್ ಇಂಜಿನಿಯರಿಂಗ್, ಪ್ರೋಗ್ರಾಂ ಮ್ಯಾನೇಜ್ಮೆಂಟ್, ಕಂಟೆಂಟ್ ಸ್ಟ್ರಾಟಜಿ ಮತ್ತು ಕಾರ್ಪೊರೇಟ್ ಸಂವಹನಗಳಂತಹ ತಂಡಗಳಲ್ಲಿನ ಹಲವಾರು ಉದ್ಯೋಗಿಗಳು ತಮ್ಮ ವಜಾಗಳ ಸುದ್ದಿಯನ್ನು ಹಂಚಿಕೊಳ್ಳಲು ಲಿಂಕ್ಡ್ಇನ್ ಪ್ಲಾಟ್ಪಾರ್ಮ್ ಅನ್ನು ಬಳಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಗೌಪ್ಯತೆ ಮತ್ತು ಸಮಗ್ರತೆಗೆ ಮೀಸಲಾದ ಘಟಕಗಳಲ್ಲಿ ಮೆಟಾ ಸಿಬ್ಬಂದಿಯನ್ನು ಕಡಿಮೆ ಮಾಡಿದೆ.
2023 ರಲ್ಲಿ, ಮೆಟಾ ಎರಡನೇ ಸುತ್ತಿನ ಸಾಮೂಹಿಕ ವಜಾಗಳನ್ನು ಪ್ರಾರಂಭಿಸಿದ ಮೊದಲ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿದೆ. ಕಂಪನಿಯು ಈ ಹಿಂದೆ 11,000 ಉದ್ಯೋಗಿಗಳನ್ನು ಕೈಬಿಟ್ಟ ನಂತರ ಇದು ಸಂಭವಿಸಿದೆ. ಕಡಿಮೆಗೊಳಿಸುವಿಕೆಯ ಹೊರತಾಗಿಯೂ, ವೆಚ್ಚ ಕಡಿತದ ಕ್ರಮಗಳು ಮತ್ತು ಕಂಪನಿಯು ಕೃತಕ ಬುದ್ಧಿಮತ್ತೆಯತ್ತ ಗಮನಹರಿಸಿದ್ದರಿಂದ ಮೆಟಾ ಷೇರು ಮೌಲ್ಯವು ಈ ವರ್ಷ ದ್ವಿಗುಣಗೊಂಡಿದೆ.
ಸಾಂಕ್ರಾಮಿಕ ಸಮಯದಲ್ಲಿ ಇ-ಕಾಮರ್ಸ್ನಲ್ಲಿನ ನಿಧಾನಗತಿಯ ಕಾರಣದಿಂದಾಗಿ ಹಣದುಬ್ಬರ ಮತ್ತು ಡಿಜಿಟಲ್ ಜಾಹೀರಾತಿನಲ್ಲಿನ ಕಡಿತದಿಂದ ನಡೆಸಲ್ಪಡುವ ಆದಾಯದ ಬೆಳವಣಿಗೆಯ ಕುಸಿತದ ಅವಧಿಯನ್ನು ಕಡಿಮೆ ಮಾಡಲು ಮೆಟಾ ನಿರ್ಧಾರಿಸಿದೆ.

ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ಈ ಹಿಂದೆ ಎರಡನೇ ಸುತ್ತಿನ ವಜಾಗೊಳಿಸುವಿಕೆಯು ಹಲವಾರು ತಿಂಗಳುಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಸಂಭವಿಸುತ್ತದೆ ಎಂದು ಮಾಹಿತಿ ನೀಡಿದ್ದರು. ಹೆಚ್ಚಿನವು ಮೇ ವೇಳೆಗೆ ಪೂರ್ಣಗೊಳ್ಳುತ್ತವೆ. ಮತ್ತಷ್ಟು ಸಣ್ಣ ಸುತ್ತಿನ ಕಡಿತಗಳು ನಂತರ ನಡೆಯಬಹುದು ಎಂದೂ ತಿಳಿಸಿದ್ದರು.
ಇತ್ತೀಚಿನ ನೌಕರಿ ಕಡಿತಗಳು ಪ್ರಧಾನವಾಗಿ ಇಂಜಿನಿಯರಿಂಗ್ ಅಲ್ಲದ ಉದ್ಯೋಗಗಳ ಮೇಲೆ ಪರಿಣಾಮ ಬೀರಿವೆ. ಮೆಟಾದಲ್ಲಿ ಇಂಜಿನಿಯರಿಂಗ್ ಹುದ್ದೆಗಳ ಮಹತ್ವವನ್ನು ಮತ್ತೆ ತಿಳಿಸಿಕೊಟ್ಟಿವೆ. ಜುಕರ್ಬರ್ಗ್ ಅವರು ವ್ಯಾಪಾರ ತಂಡಗಳನ್ನು ಗಣನೀಯವಾಗಿ ಪುನರ್ರಚಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಇತ್ತೀಚಿನ ಸುತ್ತಿನ ವಜಾಗೊಳಿಸುವಿಕೆಯು ಡಬ್ಲಿನ್ನಲ್ಲಿರುವ ಮೆಟಾದ ಅಂತರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿ ಸುಮಾರು 490 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಇದು ಅದರ ಐರಿಶ್ ಉದ್ಯೋಗಿಗಳ ಸುಮಾರು ಶೇ 20 ರಷ್ಟಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications