ಶೇ33ರಷ್ಟು ಸೇಲ್ಸ್ ಕುಸಿತ, 2 ದಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ
ನವದೆಹಲಿ, ಸೆ. 04: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ(ಎಂಎಸ್ ಐ)ಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ. ಗುರುಗ್ರಾಮ ಹಾಗೂ ಮಾನೇಸರ್ ಘಟಕದಲ್ಲಿನ ಉತ್ಪಾದನೆಯನ್ನು ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಳಿಸುತ್ತಿರುವುದಾಗಿ ಸೆ.4ರಂದು ಪ್ರಕಟಿಸಿದೆ.
"ಸೆ. 7 ಹಾಗೂ 9ರಂದು ಟೂಲ್ಸ್ ಡೌನ್ ಡೇ ಆಗಲಿದೆ, ಎರಡು ಘಟಕಗಳಲ್ಲಿ ಯಾವುದೇ ಕಾರು ಉತ್ಪಾದನೆ ನಡೆಸುವುದಿಲ್ಲ" ಎಂದು ಎಂಎಸ್ ಐ ಹೇಳಿದೆ.

ಆಗಸ್ಟ್ ತಿಂಗಳಿನಲ್ಲಿ ಶೇ33.99ರಷ್ಟು ಉತ್ಪಾದನೆ ಕುಸಿತ ಕಂಡಿತ್ತು. ಆಗಸ್ಟ್ ನಲ್ಲಿ 1,11,370 ಕಾರು ಉತ್ಪಾದನೆ ಮಾಡಲಾಗಿತ್ತು. ವರ್ಷದ ಹಿಂದೆ ಇದೇ ಅವಧಿಯಲ್ಲಿ 1,68,725 ಕಾರು ಉತ್ಪಾದನೆ ಮಾಡಲಾಗಿತ್ತು.
ಪ್ರಯಾಣಿಕರ ವಾಹನ ಉತ್ಪಾದನೆಯಲ್ಲೂ ಕುಂಠಿತವಾಗಿದ್ದು, 2018ರ ಆಗಸ್ಟ್ ತಿಂಗಳಿನಲ್ಲಿ 1,66,161 ವಾಹನ ಉತ್ಪಾದನೆಯಾಗಿತ್ತು. 2019ರ ಆಗಸ್ಟ್ ನಲ್ಲಿ 1,10,214 ವಾಹನ ಉತ್ಪಾದನೆ ಮಾತ್ರ ಸಾಧ್ಯವಾಗಿ 33.67% ಕುಸಿತ ಕಂಡಿದೆ.
ಜುಲೈ ತಿಂಗಳಿನಲ್ಲೂ ಉತ್ಪಾದನೆ 25.15% ಕುಸಿತ ಕಂಡು 1,33,625 ಕಾರು ಮಾತ್ರ ಉತ್ಪಾದನೆ ಮಾಡಲಾಗಿತ್ತು. ಸೆ.01ಕ್ಕೆ ಬಂದಿರುವ ಮಾರಾಟ ವರದಿಯಂತೆ ಒಟ್ಟಾರೆ ಮಾರಾಟದಲ್ಲಿ 33% ಕುಸಿತ ಕಂಡು 1,06,413 ವಾಹನ ಮಾತ್ರ ಮಾರಾಟವಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 1,58,189 ವಾಹನ ಮಾರಾಟ ಕಂಡಿತ್ತು. ಷೇರುಪೇಟೆಯಲ್ಲಿ ಇಂದು ಮಾರುತಿ ಸುಜುಕಿ ಷೇರುಗಳು ಶೇ 3ರಷ್ಟು ಕುಸಿತ ಕಂಡಿವೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications