ಗಳಿಕೆಯಲ್ಲಿ ಜಿಂದಾಲ್ ಹಿಂದಿಕ್ಕಿದ್ದ ಮಾರನ್

ಸನ್ ಟಿವಿಯ ಕಲಾನಿಧಿ ಮಾರನ್ ಹಾಗೂ ಅವರ ಪತ್ನಿ ಕಾವೇರಿ ಪ್ಯಾಕೇಜ್ ವರ್ಷಕ್ಕೆ ತಲಾ 56.25 ಕೋಟಿ. 3ನೇ ಸ್ಥಾನದಲ್ಲಿ 54.98 ಕೋಟಿ ಪಡೆಯುವ ಜಿಂದಾಲ್ ಅವರಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಅತಿ ಹೆಚ್ಚು ವೇತನ ಪಡೆಯುವವರ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಮಾರನ್ ದಂಪತಿ ಹಾಗೂ ಜಿಂದಾಲ್ ಅವರೇ ಪಡೆಯುತ್ತಿದ್ದಾರೆ.
ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಕಾರ್ಪೊರೇಟ್ ಗಳ ಪೇ ಪ್ಯಾಕೇಜ್ ನ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡು ಬಂದಿದೆ. 2011-12ರಲ್ಲಿ 74.32 ಕೋಟಿ ರು ಪ್ಯಾಕೇಜ್ ಪಡೆಯುತ್ತಿದ್ದ ಜಿಂದಾಲ್ ಅವರು ಈಗ 54.98 ಕೋಟಿ ರು ಪ್ಯಾಕೇಜ್ ಪಡೆಯುತ್ತಿದ್ದಾರೆ.
ಉಳಿದಂತೆ ಆದಿತ್ಯಾ ಬಿರ್ಲಾ ಸಮೂಹಸ ಸಂಸ್ಥೆ ಚೇರ್ಮನ್ ಮಂಗಳಂ ಬಿರ್ಲಾ ಅವರು ಮೊದಲ ಐವರಲ್ಲಿ ಸೇರಿದ್ದಾರೆ. ಇವರ ಗಳಿಕೆ 49.62 ಕೋಟಿ ರು ಪ್ಯಾಕೇಜ್, ಹೀರೋ ಮೋಟೋಕಾರ್ಪ್ ನ ತಂದೆ ಮಕ್ಕಳು ಬ್ರಿಜ್ ಮೋಹನ್ ಲಾಲ್ ಮುಂಜಾಲ್ (32.72 ಕೋಟಿ ರು), ಪವನ್ ಮುಂಜಾಲ್ (32.80 ಕೋಟಿ ರು) ಹಾಗೂ ಸುನಿಲ್ ಕಾಂತ್ ಮುಂಜಾಲ್ (31.51 ಕೋಟಿ ರು) ಪಡೆದು ನಂತರದ ಸ್ಥಾನದಲ್ಲಿದ್ದಾರೆ.
ಟಾಪ್ 10 ಅಧಿಕಾರಿಗಳ ಸಂಬಳ ಕೇವಲ 15 ಕೋಟಿ ರು (ಶೇ 4) ಏರಿಕೆಯಾಗಿದ್ದು, ಪ್ಯಾಕೇಜ್ ನಲ್ಲಿ ಭಾರಿ ಇಳಿಮುಖ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 402 ಕೋಟಿ ರು ಏರಿಕೆ ಕಂಡು ಬಂದಿತ್ತು.
ಉಳಿದಂತೆ ಪಟ್ಟಿಯಲ್ಲಿ ರಾಮ್ಕೊ ಸಿಮೆಂಟ್ಸ್ (ಈ ಇಂದಿನ ಮದ್ರಾಸ್ ಸಿಮೆಂಟ್ಸ್)ನ ಪಿ ಆರ್ ಆರ್ ರಾಜಾ (30.96 ಕೋಟಿ ರು) 8ನೇ ಸ್ಥಾನದಲ್ಲಿದ್ದಾರೆ. ಮಾರುತಿ ಸುಜುಕಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಶಿನ್ಜೊ ನಕಾನಿಶಿ(30.90 ಕೋಟಿ ರು), ದಿವಿಸ್ ಲ್ಯಾಬ್ಸ್ ಮುರಳಿ ಕೆ ದಿವಿ (26.46 ಕೋಟಿ ರು). ಬಿಜಿಆರ್ ಎನರ್ಜಿಯ ಬಿಜಿ ರಘುಪತಿ (13.19 ಕೋಟಿ ರು), ಟಾಟಾ ಮೋಟರ್ಸ್ ಕಾರ್ಲ್ ಪೀಟರ್ ಫೋಸ್ಟರ್ ನಂತರದ ಸ್ಥಾನದಲ್ಲಿದ್ದಾರೆ. ಈ ಪೈಕಿ ಫೋಸ್ಟರ್ 2011ರಲ್ಲಿ ಟಾಟಾ ಮೋಟರ್ಸ್ ತೊರೆದಿದ್ದಾರೆ. ರಘುಪತಿ ಪ್ಯಾಕೇಜ್ ಶೇ 50ರಷ್ಟು ಕುಸಿತ ಕಂಡಿದೆ.
ವಿಶೇಷವೆಂದರೆ ಜಾಗತಿಕವಾಗಿ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಅಜೀಂಪ್ರೇಂಜಿ, ಆನಂದ್ ಮಹೀಂದ್ರಾ ಹಾಗೂ ಸುನಿಲ್ ಮಿತ್ತಲ್ ಅವರು ಈ ಟಾಪ್ 10 ಪಟ್ಟಿಯಲ್ಲಿಲ್ಲ.
ಮಿತ್ತಲ್(24.33 ಕೋಟಿ ರು), ಅಮರ ರಾಜಾ ಬ್ಯಾಟರೀಸ್ ಜಯದೇವ್ ಗಲ್ಲ( 23.48 ಕೋಟಿ ರು), ಲಾರ್ಸೆನ್ ಅಂಡ್ ಟ್ರೋಬ್ರೊ ಎಎಂ ನಾಯಕ್ (21.06 ಕೋಟಿ ರು) ಹಿಂಡಲ್ಕೋದ ಡಿ ಭಟ್ಟಾಚಾರ್ಯ (20.61 ಕೋಟಿ ರು) ಜೆಎಸ್ ಡಬ್ಲ್ಯೂ ಸ್ಟೀಲ್ಸ್ ಸಜ್ಜನ್ ಜಿಂದಾಲ್ (20.25 ಕೋಟಿ ರು) ಗಳಿಸಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಗಳಿಕೆ ವಾರ್ಷಿಕ 15 ಕೋಟಿ ಎಂದು ಹೇಳಲಾಗಿದೆ. (ಪಿಟಿಐ)
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications