ಗೂಗಲ್ನಲ್ಲಿ ಮತ್ತೆ ಉದ್ಯೋಗ ಕಡಿತ: ಸುಂದರ್ ಪಿಚ್ಚೈ ಸುಳಿವು
ನವದೆಹಲಿ, ಆಗಸ್ಟ್ 08: ಗೂಗಲ್ನ ಅಧಿಕಾರಿಗಳು ಅದರ ಉದ್ಯೋಗಿಗಳಿಗೆ ಶ್ರಮವಹಿಸಿ ಮತ್ತಷ್ಟು ಕೆಲಸ ಮಾಡುವಂತೆ ಎಚ್ಚರಿಕೆ ನೀಡಿದ್ದು, ಗೂಗಲ್ ಸಿಇಒ ಸುಂದರ್ ಪಿಚೈ ಕಂಪನಿಯಲ್ಲಿ ಮತ್ತಷ್ಟು ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸುಂದರ್ ಪಿಚೈ, "ಮುಂದಿನ ತ್ರೈಮಾಸಿಕ ಗಳಿಕೆಯು ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೆ ಕಂಪೆನಿಯು ಅಧಿಕ ಒತ್ತಡಕ್ಕೆ ಸಿಲುಕುತ್ತದೆ. ಹಲವು ವರ್ಷಗಳಿಂದ ಆರ್ಥಿಕ ಸವಾಲುಗಳು ಇವೆ. ಹಾಗಾಗಿ ಉದ್ಯೋಗಿಗಳು ಶೇಕಡ 20 ರಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ತಾನು ಆಶಿಸುತ್ತೇನೆ," ಎಂದು ಹೇಳಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆದ ಕೋಡ್ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಪಿಚೈ, "ಆರ್ಥಿಕ ಅನಿಶ್ಚಿತತೆ ಮತ್ತು ಜಾಹೀರಾತು ವೆಚ್ಚದಲ್ಲಿ ವ್ಯಾಪಕವಾದ ನಿಧಾನಗತಿಯ ನಡುವೆ, ಕಂಪನಿಯು ಹೆಚ್ಚು ಪರಿಣಾಮಕಾರಿ ಕೆಲಸ ಮಾಡಲು ಯೋಜಿಸುತ್ತಿದೆ. ನಾವು ಕಂಪೆನಿಯ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಜಾಗೃತರಾಗಿರುತ್ತೇವೆ. ಅದರ ಬಗ್ಗೆ ನಮಗೆ ತುಂಬಾ ಕಾಳಜಿ ಇರುತ್ತದೆ. ಬೃಹತ್ ಆರ್ಥಿಕ ಕಾರ್ಯಕ್ಷಮತೆಯು ಜಾಹೀರಾತು ಖರ್ಚು, ಗ್ರಾಹಕ ಖರ್ಚು ಮತ್ತು ಮುಂತಾದವುಗಳಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

ಆರ್ಥಿಕ ಅಂಶಗಳು ತನ್ನ ನಿಯಂತ್ರಣದಲ್ಲಿಲ್ಲ
ಒಂದು ಕಂಪನಿಯಾಗಿ ನಾವು ಮುಂದುವರಿಯಲು ಬಯಸುತ್ತೇವೆ. ಮೊದಲಿಗಿಂತ ಕಡಿಮೆ ಸಂಪನ್ಮೂಲಗಳನ್ನು ಹೊಂದಿದ್ದಾಗ ಕೆಲಸ ಮಾಡಲು ಎಲ್ಲಾ ವಿಷಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಉದ್ಯೋಗಿಗಳು ನಿಜವಾಗಿಯೂ ಉತ್ಪಾದಕರಾಗಿದ್ದಾಗ ಅವರು ಕೆಲಸ ಮಾಡುತ್ತಿರುವ ವಿಷಯಗಳ ಮೇಲೆ ಅವರು ನಿಜವಾಗಿಯೂ ಪ್ರಭಾವ ಬೀರಬಹುದು. ಅದಕ್ಕಾಗಿಯೇ ನಾವು ನಮ್ಮ ಸಮಯ ಮೌಲ್ಯವನ್ನು ಅರಿತು ಕೆಲಸ ಮಾಡುತ್ತಿದ್ದೇವೆ ಎಂದು ಪಿಚ್ಚೈ ಅವರು ಹೇಳಿದರು.

ಹೆಚ್ಚು ಉತ್ಪಾದಕವಾಗಿಸುವುದು ಹೇಗೆ
ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಧಾನವಾಗಿರುತ್ತೇವೆ. ನೀವು ಅದನ್ನು ನಮ್ಮ ಅಂತ್ಯದಿಂದ ಕೊನೆಯವರೆಗೆ ನೋಡುತ್ತೀರಿ. ಹೀಗಾಗಿ ಕಂಪನಿಯನ್ನು ಶೇಕಡಾ 20ರಷ್ಟು ಹೆಚ್ಚು ಉತ್ಪಾದಕವಾಗಿಸುವುದು ಹೇಗೆ ಎಂದು ಲೆಕ್ಕಾಚಾರ ಮಾಡಬೇಕಾಗುತ್ತದೆ. ಹಾಗಾಗಿ ಮತ್ತೆ ಉದ್ಯೋಗ ಕಡಿತದಂತ ಕ್ರಮಗಳು ಬರುತ್ತದೆ. ಮುಂದುವರಿದು ಯೂಟ್ಯೂಬ್ ಮ್ಯೂಸಿಕ್ ಮತ್ತು ಗೂಗಲ್ ಪ್ಲೇ ಮ್ಯೂಸಿಕ್ ಅನ್ನು ಒಂದೇ ಬ್ರಾಂಡ್ನಲ್ಲಿ ವಿಲೀನಗೊಳಿಸುವ ಬಗ್ಗೆಯೂ ಅವರು ಉಲ್ಲೇಖಿಸಿದರು.

ಮಾರ್ಕೆಟಿಂಗ್ ಮತ್ತು ಪ್ರೊಡಕ್ಷನ್ ಫಲಿತಾಂಶದ ಎಚ್ಚರಿಕೆ
ಕೆಲವೊಮ್ಮೆ ಪ್ರಗತಿ ಸಾಧಿಸಲು ಅವಕಾಶಗಳು ಇರುತ್ತದೆ. ಮೂರು ಜನರು ನಿರ್ಧಾರಗಳನ್ನು ತೆಗೆದುಕೊಂಡು ಅದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಎರಡು ಅಥವಾ ಒಬ್ಬರಿಗೆ ಇಳಿಸುವುದು ದಕ್ಷತೆಯನ್ನು 20 ಪ್ರತಿಶತದಷ್ಟು ಸುಧಾರಿಸುತ್ತದೆ ಎಂದು ಹೇಳಿದರು. ಆಗಸ್ಟ್ನಲ್ಲಿ ಕಂಪನಿಯ ಮೇಲ್ನಲ್ಲಿ ಗೂಗಲ್ ಉದ್ಯೋಗಿಗಳಿಗೆ ಮಾರ್ಕೆಟಿಂಗ್ ಮತ್ತು ಪ್ರೊಡಕ್ಷನ್ ಸಂಬಂಧದ ಮುಂದಿನ ತ್ರೈಮಾಸಿಕ ಫಲಿತಾಂಶಗಳು ಬರುತ್ತದೆ. ಆಗ ಪರಿಸ್ಥಿತಿ ಇನ್ನು ಬಿಗಡಾಯಿಸುತ್ತದೆ ಎಂದು ಹೇಳಿದರು.

ಲಾಭದ ನಿರೀಕ್ಷೆಗಳನ್ನು ಪೂರೈಸದಿದ್ದರೆ ವಜಾ
ಮೂರನೇ ತ್ರೈಮಾಸಿಕ ಲಾಭಂಶದ ಫಲಿತಾಂಶವು ಕಠಿಣವಾಗಿರಬಹುದು ಎಂದು ಮಾರ್ಕೆಟಿಂಗ್ ತಂಡಕ್ಕೆ ರವಾನಿಸಿದ ಸಂದೇಶದಲ್ಲಿ ತನ್ನ ಉದ್ಯೋಗಿಗಳಿಗೆ ಬೆದರಿಕೆ ಹಾಕಿದ್ದು ಲಾಭದ ನಿರೀಕ್ಷೆಗಳನ್ನು ಪೂರೈಸದಿದ್ದರೆ ವಜಾಗೊಳಿಸಲಾಗುತ್ತದೆ ಎನ್ನಲಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉತ್ಪಾದಕತೆಯನ್ನು ಸುಧಾರಿಸಬೇಕು ಎಂದು ಪಿಚೈ ಜುಲೈನಲ್ಲಿ ಉದ್ಯೋಗಿಗಳಿಗೆ ಹೇಳಿದ್ದರು. ಉತ್ತಮ ಫಲಿತಾಂಶಗಳನ್ನು ಶೀಘ್ರವಾಗಿ ಪಡೆಯಲು ಉದ್ಯೋಗಿಗಳಿಂದ ಆಲೋಚನೆಗಳನ್ನು ಪಡೆಯಲು ಅವರು ಬಯಸಿದ್ದರು ಎಂದು ಅವರು ಹೇಳಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications