4ಜಿ ಮೊಬೈಲ್ ವೇಗ -ಜೂನ್ ತಿಂಗಳಿನಲ್ಲೂ ಜಿಯೋ ಪ್ರಥಮ
ನವದೆಹಲಿ, ಜುಲೈ 4 : ರಿಲಯನ್ಸ್ ಜಿಯೋ, ಜೂನ್ ತಿಂಗಳಿನಲ್ಲಿ 18.8 ಮೆಗಾಬಿಟ್ ಪ್ರತಿ ಸೆಕೆಂಡ್ (ಎಂಬಿಪಿಎಸ್) ಸರಾಸರಿ ಡೌನ್ಲೋಡ್ ವೇಗ ದಾಖಲಿಸಿದೆ. ಈ ಮೂಲಕ ಮತ್ತೊಮ್ಮೆ ಅತಿವೇಗದ 4ಜಿ ಮೊಬೈಲ್ ಜಾಲವಾಗಿ ಹೊರಹೊಮ್ಮಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ಮಾಡಿದೆ.
ಜಿಯೋ ಜಾಲದ ಸರಾಸರಿ ಡೌನ್ಲೋಡ್ ವೇಗ ಮೇ ತಿಂಗಳಿನ 19.12 ಎಂಬಿಪಿಎಸ್ ಹೋಲಿಕೆಯಲ್ಲಿ ಈ ಬಾರಿ ಕೊಂಚ ಕಡಿಮೆಯಾಗಿದೆ. ಆದರೆ, ಇತರೆ ಸಂಸ್ಥೆಗಳ ವೇಗಕ್ಕೆ ಹೋಲಿಸಿದರೆ, ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇದರೊಂದಿಗೆ ಜಿಯೋ ಸತತವಾಗಿ ಕಳೆದ ಏಳು ತಿಂಗಳಿನಿಂದ ಭಾರತದ ಅತಿವೇಗದ 4ಜಿ ಮೊಬೈಲ್ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

12.29 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಡನೆ ಈ ಬಾರಿಯ ಎರಡನೇ ಸ್ಥಾನವನ್ನು ವೋಡಾಫೋನ್ ಪಡೆದುಕೊಂಡಿದೆ. 11.68 ಎಂಬಿಪಿಎಸ್ ವೇಗದೊಡನೆ ಐಡಿಯಾ ಹಾಗೂ 8.23 ಎಂಬಿಪಿಎಸ್ ನೊಂದಿಗೆ ಭಾರ್ತಿ ಏರ್ಟೆಲ್ ಮೂರು-ನಾಲ್ಕನೇ ಸ್ಥಾನದಲ್ಲಿವೆ.
ವಿವಿಧ ಜಾಲಗಳಿಂದ ಮಾಹಿತಿ ಸಂಗ್ರಹಿಸುವ ಟ್ರಾಯ್ 'ಮೈಸ್ಪೀಡ್' ತಂತ್ರಾಂಶದ ನೆರವಿನಿಂದ ವಿಶ್ಲೇಷಿಸಿ ಸರಾಸರಿ ಡೌನ್ಲೋಡ್ ವೇಗವನ್ನು ಲೆಕ್ಕಹಾಕುತ್ತದೆ. ಇನ್ನುಳಿದ ಜಾಲಗಳ 4ಜಿ ಮೊಬೈಲ್ ವೇಗದ ಕುರಿತ ವಿವರಗಳು ಈ ಬಾರಿ ಪ್ರಕಟವಾಗಿಲ್ಲ.
3ಜಿ ಜಾಲಗಳ ಪೈಕಿ 5.65 ಎಂಬಿಪಿಎಸ್ ಡೌನ್ಲೋಡ್ ವೇಗದೊಡನೆ ವೋಡಾಫೋನ್ ಜೂನ್ ತಿಂಗಳ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ 3.59 ಎಂಬಿಪಿಎಸ್ 3ಜಿ ಡೌನ್ಲೋಡ್ ವೇಗದೊಡನೆ ಐಡಿಯಾ, 3.37 ಎಂಬಿಪಿಎಸ್ ವೇಗದೊಡನೆ ಏರ್ಟೆಲ್, 2.36 ಎಂಬಿಪಿಎಸ್ನೊಡನೆ ಏರ್ಸೆಲ್ ಹಾಗೂ 1.59 ಎಂಬಿಪಿಎಸ್ನೊಡನೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇವೆ. (ಪಿಟಿಐ)
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications