ನವೆಂಬರ್ ತಿಂಗಳಲ್ಲಿ 11 ದಿನಗಳ ಕಾಲ ಬ್ಯಾಂಕ್ ಬಂದ್
Recommended Video

ಬೆಂಗಳೂರು, ಅಕ್ಟೋಬರ್ 26: ದಸರಾ ಹಬ್ಬಕ್ಕೆ ಹೊಂದಿಕೊಂಡಂತೆ ದೀಪಾವಳಿ ಹಬ್ಬವೂ ಬರುತ್ತಿದೆ. ಈ ಸಂದರ್ಭದಲ್ಲಿ ನವೆಂಬರ್ ತಿಂಗಳಿನಲ್ಲಿ ಸುಮಾರು 11 ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರಲಿವೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಏನಿದರ ಸತ್ಯಾಸತ್ಯತೆ?
ನವೆಂಬರ್ ತಿಂಗಳಿನಲ್ಲಿ ದೀಪಾವಳಿ ಜೊತೆಗೆ ಇನ್ನೂ ಅನೇಕ ಹಬ್ಬಗಳಿರುವ ಕಾರಣ, ಸರಣಿ ರಜೆ ಸಿಗಲಿದೆ. ಅನೇಕ ರಾಜ್ಯಗಳಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಾಗಿಲು ಮುಚ್ಚುವ ಸಾಧ್ಯತೆಯಿದೆ. ಆದರೆ, ಕಡ್ಡಾಯ ರಜೆಗಳು ಕಡಿಮೆಯಿವೆ.
ಆದರೆ, ಯಾವುದಕ್ಕೂ ಹಬ್ಬಕ್ಕೂ ಮುನ್ನವೇ ಹಣ ಹೊಂದಿಸಿಕೊಳ್ಳುವುದು, ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಎಟಿಎಂ ಮುಂದೆ ಪರದಾಡಬೇಕಾಗುತ್ತದೆ.
ಸರಣಿ ರಜೆ ಇರುವ ಹಿನ್ನಲೆಯಲ್ಲಿ ಎಟಿಎಂಗಳಿಗೆ ಅಗತ್ಯ ಹಣವನ್ನು ಜಮೆ ಮಾಡಲಾಗುವುದು ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಎಸ್ ಬಿಐ ಬ್ಯಾಂಕ್ ವಕ್ತಾರರು ಹೇಳಿದ್ದಾರೆ. ದಕ್ಷಿಣ ಭಾರತಕ್ಕೂ ಹಾಗೂ ಉತ್ತರ ಭಾರತಕ್ಕೂ ರಜೆ ದಿನಗಳಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದರೂ ಬಹುತೇಕ ಎಲ್ಲೆಡೆ 11 ದಿನಗಳ ಕಾಲ ಬ್ಯಾಂಕ್ ವ್ಯವಹಾರ ಇರುವುದಿಲ್ಲ.

ಕರ್ನಾಟಕ ಹಾಗೂ ಕೇರಳದಲ್ಲಿ ಹೆಚ್ಚುವರಿ ರಜೆ
ಕರ್ನಾಟಕದಲ್ಲಿ ನವೆಂಬರ್ 01(ರಾಜ್ಯೋತ್ಸವ), 04,11,18,25 ಭಾನುವಾರ, 06 ಹಾಗೂ 08 ದೀಪಾವಳಿ, 10 ಎರಡನೇ ಶನಿವಾರ, 21 ಈದ್ ಮಿಲಾದ್, 23 ಗುರುನಾನಕ್ ಜಯಂತಿ, 24 ನಾಲ್ಕನೇ ಶನಿವಾರ ಹಾಗೂ 26ರಂದು ಕನಕದಾಸ ಜಯಂತಿ ರಜೆ ಇರುತ್ತದೆ. ಕೇರಳದಲ್ಲೂ ನವೆಂಬರ್ 01ರಂದು ರಾಜ್ಯ ಸಂಸ್ಥಾಪನಾ ದಿನಾಚರಣೆ ಇರುವುದರಿಂದ ಹೆಚ್ಚುವರಿ ರಜೆ ಸಿಗಲಿದೆ.

ನಾಲ್ಕು ಭಾನುವಾರ, 2 ಶನಿವಾರ
ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ 5 ರಿಂದ 9ರವರೆಗೂ ಸರ್ಕಾರಿ ರಜೆಯಿರಲಿದೆ. ನವೆಂಬರ್ 4, 11, 18 ಹಾಗೂ 25 ಭಾನುವಾರದಂದು ಬ್ಯಾಂಕ್ ರಜೆ. ನವೆಂಬರ್ 10 ರಂದು ಎರಡನೇ ಶನಿವಾರ, 24ರಂದು ನಾಲ್ಕನೇ ಶನಿವಾರ ಹೀಗಾಗಿ ರಜೆ ಸಿಗಲಿದೆ.

ಸರ್ಕಾರಿ ರಜೆ ದಿನಗಳು
* ಅಕ್ಟೋಬರ್ 27 : ನಾಲ್ಕನೇ ಶನಿವಾರ
* ನವೆಂಬರ್ 06 : ದೀಪಾವಳಿ ನರಕ ಚತುರ್ದಶಿ (ಕೆಲ ರಾಜ್ಯಗಳಿಗೆ ಸೀಮಿತ)
* ನವೆಂಬರ್ 07 : ದೀಪಾವಳಿ ಅಮಾವಾಸ್ಯೆ (ಬಹುತೇಕ ಎಲ್ಲಾ ರಾಜ್ಯಗಳಿಗೆ ಅನ್ವಯ)
* ನವೆಂಬರ್ 08: ದೀಪಾವಳಿ ಬಲಿಪಾಡ್ಯಮಿ (ಕೆಲ ರಾಜ್ಯಗಳಲ್ಲಿ ರಜೆ)
* ನವೆಂಬರ್ 21 : ಈದ್ ಇ ಮಿಲಾದ್
* ನವೆಂಬರ್ 23 : ಗುರು ನಾನಕ್ ಜಯಂತಿ (ಕೆಲ ರಾಜ್ಯಗಳಿಗೆ ಅನ್ವಯ)
ಬ್ಯಾಂಕ್ ರಜೆ ದಿನಗಳ ಪಟ್ಟಿಯನ್ನು ಇಲ್ಲಿ ನೋಡಿ

ಸರ್ಕಾರಿ ಜತೆಗೆ ಖಾಸಗಿ ಬ್ಯಾಂಕ್ ಗಳು ಬಂದ್
ನವೆಂಬರ್ 13, 14 ರಂದು ಬಿಹಾರ, ಜಾರ್ಖಂಡದಲ್ಲಿ ಛತ್ ಪೂಜೆ ಸಂಭ್ರಮದ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ. ನವೆಂಬರ್ 21 ರಂದು ಈದ್ -ಎ-ಮಿಲಾದ್, ನವೆಂಬರ್ 23 ರಂದು ಗುರುನಾನಕ್ ಜಯಂತಿ. ಹಾಗಾಗಿ ಕೆಲ ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್ ಗಳಿಗೆ ರಜೆಯಿರಲಿದೆ.
-
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications