ಟಾಪ್ 05 ಕಡಿಮೆದರ ವಿಮಾನಯಾನ ಪಟ್ಟಿಯಲ್ಲಿ ಇಂಡಿಗೋ
ಬೆಂಗಳೂರು, ಮೇ 28: ಅತ್ಯಂತ ಕಡಿಮೆ ದರದ ವಿಮಾನಯಾನ ಸಂಸ್ಥೆಗಳ ಟಾಪ್ 05 ಪಟ್ಟಿಯಲ್ಲಿ ಭಾರತದ ಇಂಡಿಗೋ(ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್) ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆಗಳ ಹೆಸರು ಕಾಣಿಸಿಕೊಂಡಿದೆ.
ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಅಧೀನದಲ್ಲಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂಡಿಗೋ ಐದನೇ ಸ್ಥಾನದಲ್ಲಿದೆ ಎಂದು ಮೆಲ್ಬೋರ್ನ್ ಮೂಲದ ರೋಮ್ 2ರಿಯೋ ಸಂಸ್ಥೆ ಗ್ಲೋಬಲ್ ಫ್ಲೈಟ್ ಪ್ರೈಸಿಂಗ್ ರಿಪೋರ್ಟ್ ಆಧಾರದ ಮೇಲೆ ವಿಮಾನಯಾನ ಸಂಸ್ಥೆಗಳ ಪಟ್ಟಿ ಮಾಡಲಾಗಿದೆ.
ಪ್ರತಿ ಕಿಲೋಮೀಟರ್ ಮೇಲೆ ತಗುಲುವ ವೆಚ್ಚದ ಆಧಾರ ಮೇಲೆ ವಿಶ್ವದ 200ಕ್ಕೂ ಅಧಿಕ ಏರ್ ಲೈನ್ಸ್ ಬಗ್ಗೆ ಮಾಹಿತಿ ಕಲೆ ಹಾಕಿ ಈ ವರದಿ ನೀಡಲಾಗಿದೆ.

ಮಧ್ಯಪ್ರಾಚ್ಯ ದೇಶಗಳು ಹಾಗೂ ಸಿಂಗಪುರಕ್ಕೆ ಸಂಪರ್ಕ ಒದಗಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸರಾಸರಿ ಪ್ರತಿ ಕಿ.ಮೀಗೆ 0.08ಯುಎಸ್ ಡಾಲರ್ ವೆಚ್ಚ ತಗುಲುತ್ತಿದೆ. ಇಂಡಿಗೋ ಅಂತಾರಾಷ್ಟ್ರೀಯ ವಿಮಾನಯಾನ ಪ್ರತಿ ಕಿ.ಮೀಗೆ 0.10 ಯುಎಸ್ ಡಾಲರ್ ವೆಚ್ಚವಾಗುತ್ತಿದೆ.
ಭಾರತದ ನಗರಗಳ ಜತೆ ಗಲ್ಫ್ ದೇಶಗಳು, ಬ್ಯಾಂಕಾಕ್, ಕೊಲಂಬೋ ಹಾಗೂ ಕಠ್ಮಂಡುಗೆ ಇಂಡಿಗೋ ಸಂಪರ್ಕ ಒದಗಿಸುತ್ತಿದೆ.
ಏಷ್ಯಾದಲ್ಲಿ ಇಂಡೋನೇಷಿಯಾ ಏರ್ ಏಷ್ಯಾ ಹಾಗೂ ಪ್ರೈಮೆರಾ ಏರ್ ಟಾಪ್ 5ರಲ್ಲಿ ಸ್ಥಾನ ಗಳಿಸಿವೆ. ಮಿಕ್ಕಂತೆ ಎಟಿಹಾಡ್, ರಾಯಾನಾರ್, ಕ್ವಾಂಟಾಸ್, ವಾವ್ ಏರ್ ಹಾಗೂ ವರ್ಜಿನ್ ಆಸ್ಟ್ರೇಲಿಯಾ ಟಾಪ್ 10 ಪಟ್ಟಿಯಲ್ಲಿವೆ. ದೆಹಲಿಯಿಂದ ಯುರೋಪ್ ಹಾಗೂ ಯುಎಸ್ ನಗರಗಳಿಗೆ ವಾವ್ ಏರ್ ಸಂಪರ್ಕ ಒದಗಿಸುತ್ತಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications