'ಉದ್ಯಮ ಸ್ನೇಹಿ' ಸೂಚ್ಯಂಕದಲ್ಲಿ 100ಸ್ಥಾನಕ್ಕೆ ಜಿಗಿದ ಭಾರತ
ನವದೆಹಲಿ, ನವೆಂಬರ್ 1: ವಿಶ್ವ ಬ್ಯಾಂಕ್ ಪ್ರಕಟಿಸಿರುವ 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಸೂಚ್ಯಂಕದಲ್ಲಿ ಭಾರತ 30ಸ್ಥಾನ ಮೇಲಕ್ಕೇರಿ 100ನೇ ಸ್ಥಾನದಲ್ಲೇ ನೆಲೆನಿಂತಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಭಾರತದ ಸೂಚ್ಯಂಕ ಮೇಲಕ್ಕೇರಿದ್ದು ಮಾತ್ರವಲ್ಲದೆ ಐತಿಹಾಸಿಕವಾಗಿ 100ನೇ ಸ್ಥಾನ ತಲುಪಿದೆ.
ತೆರಿಗೆ ಪದ್ಧತಿ ಸುಧಾರಣೆ, ಸಂಕೀರ್ಣ ಪರವಾನಿಗೆ ಪದ್ಧತಿಯ ನಿರ್ಮೂಲನೆ, ಹೂಡಿಕೆದಾರರ ರಕ್ಷಣೆಗೆ ಕ್ರಮ ಮತ್ತು ದಿವಾಳಿತನಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯಲ್ಲಿನ ಸುಧಾರಣೆಯಿಂದ ಭಾರತದಲ್ಲಿ ಉತ್ತಮ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಅಪನಗದೀಕರಣ ಮತ್ತು ಜಿಎಸ್ಟಿ ಜಾರಿಯಲ್ಲಿ ಗೊಂದಲಗಳಾಗಿವೆ ಎಂಬ ಅಪಸ್ವರಗಳ ಮಧ್ಯೆ ಈ ರ್ಯಾಂಕಿಂಗ್ ಹೊರ ಬಿದ್ದಿದ್ದು ನರೇಂದ್ರ ಮೋದಿ ಸರಕಾರವನ್ನು ತುಸು ನಿರಾಳವಾಗಿಸಿದೆ.
ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ 2003ರಿಂದ ತೆಗೆದುಕೊಂಡ 37 ಸುಧಾರಣಾ ಕ್ರಮಗಳಿಗೆ ಹೋಲಿಸಿದರೆ ಅದರ ಅರ್ಧದಷ್ಟು ಕ್ರಮಗಳನ್ನು ಕಳೆದ 4 ವರ್ಷಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು 'ಡೂಯಿಂಗ್ ಬಿಸಿನೆಸ್ 2018'ರ ವರದಿ ಹೇಳಿದೆ.
ಭಾರತದ ರ್ಯಾಂಕಿಂಗ್ ನಲ್ಲಿ ಪ್ರಗತಿಯಾಗಿದ್ದರೂ ಉದ್ಯಮದ ಆರಂಭ, ಒಪ್ಪಂದಗಳ ಜಾರಿ ಮತ್ತು ನಿರ್ಮಾಣಕ್ಕೆ ನೀಡುವ ಪರವಾನಿಗೆ ವಿಚಾರದಲ್ಲಿ ಇನ್ನೂ ಭಾರತದಲ್ಲಿ ನಿಧಾನಗತಿಯ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿ ಬೆಟ್ಟು ಮಾಡಿದೆ.
ಇನ್ನು ಭಾರತದ ರ್ಯಾಂಕಿಂಗ್ನಲ್ಲಿ ಪ್ರಗತಿಯಾಗಿದ್ದರೆ ಪ್ರತಿಸ್ಪರ್ಧಿ ಚೀನಾದ ರ್ಯಾಂಕಿಂಗ್ 78ರಲ್ಲೇ ತಟಸ್ಥವಾಗಿದೆ.
"ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಈಸ್ ಆಫ್ ಡೂಯಿಂಗ್ ಬಿಸಿನೆಸ್ ರ್ಯಾಂಕಿಂಗ್ನಲ್ಲಿ ಕಂಡಿರುವ ಐತಿಹಾಸಿಕ ಜಿಗಿತ ಟೀಂ ಇಂಡಿಯಾದ ಸಮಗ್ರ ಹಾಗೂ ಬಹು ಆಯಾಮದ ಸುಧಾರಣೆಗಳ ಫಲ," ಎಂದು ಹೇಳಿದ್ದಾರೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ












Click it and Unblock the Notifications