ವಿಮಾನಯಾನ ರಿಯಾಯತಿ ಟಿಕೆಟ್ ಗಳ ಸಂಭ್ರಮ
ಬೆಂಗಳೂರು, ಆಗಸ್ಟ್ 11 : ಭಾರತದಲ್ಲಿ ಈಗ ವಿಮಾನಯಾನ ಮಾಡಲು ಬಯಸುವವರಿಗೆ ಪರ್ವಕಾಲ. ಸ್ವಾತಂತ್ರೋತ್ಸವ ದಿನಾಚರಣೆ, ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸಾಲು ಸಾಲು ರಜೆ ಲಭ್ಯವಾಗಿರುವುದರಿಂದ ವಿಹಾರ ಯಾತ್ರೆ ಕೈಗೊಳ್ಳುವವರಿಗೆ ಕೈಗೆಟುಕುವ ದರದಲ್ಲಿ ವಿಮಾನದ ಟಿಕೆಟ್ ದರ ಲಭ್ಯವಾಗುತ್ತಿದೆ.
ಟಾಟಾ ಸಂಸ್ಥೆಯ ಏರ್ ವಿಸ್ತಾರ ಮೊದಲಿಗೆ ಆರಂಭಿಸಿದ ಈ ರಿಯಾಯಿತಿ ಟಿಕೆಟ್ ದರ ಸಮರಕ್ಕೆ ಎಲ್ಲಾ ಪ್ರಮುಖ ಸಂಸ್ಥೆಗಳು ಧುಮುಕಿವೆ.
ಈ ವಿಸ್ತಾರ ಆಫರ್ ಯೋಜನೆಯಲ್ಲಿ ಟಿಕೆಟ್ ಮುಂಗಡ ಕಾದಿರಿಸುವಿಕೆ ಎರಡು ದಿನಗಳು ಅಂದರೆ ಆಗಸ್ಟ್ 8 ಹಾಗೂ 9ಕ್ಕೆ ಮಾಡಬಹುದು ಹಾಗೂ ಬುಕ್ಕಿಂಗ್ ಮಾಡಿದವರು ಆಗಸ್ಟ್ 23, 2017 ಹಾಗೂ ಏಪ್ರಿಲ್ 19, 2018 ನಡುವೆ ಪ್ರಯಾಣಿಸಬಹುದು.
ಈಗ ಏರ್ ಏಷ್ಯಾ, ಸ್ಪೈಸ್ ಜೆಟ್, ಇಂಡಿಗೋ, ಜೆಟ್ ಏರ್ ವೇಸ್ ಕೂಡಾ ರಿಯಾಯಿತಿ ದರದಲ್ಲಿ ಟಿಕೆಟ್ ಗಳನ್ನು ನೀಡುತ್ತಿವೆ. ಇನ್ನಷ್ಟು ವಿವರ ಮುಂದಿದೆ...

ಏರ್ ಏಷ್ಯಾ ಆಫರ್
ಮೇಕ್ ಮೈ ಟ್ರಿಪ್ ಮೂಲಕ ಸಿಟಿ ಬ್ಯಾಂಕ್ ಗ್ರಾಹಕರಿಗೆ ಶೇ 15ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ದೇಶಿ ವಿಮಾನಯಾನಕ್ಕೆ ಇದು ಸೀಮಿತವಾಗಿದೆ. ಆಗಸ್ಟ್ 11, 2017ರಂದು ಇದು ಮುಕ್ತಾಯವಾಗಿದೆ.
ಅಕ್ಬರ್ ಟ್ರಾವೆಲ್.ಕಾಂ ಮ್ಜೂಲಕ ಟಿಕೆಟ್ ಬುಕ್ ಮಾಡಿದರೆ ದೇಶಿ ವಿಮಾನಯಾನದ ಮೇಲೆ 750 ರು ಹಾಗೂ ಅಂತಾರಾಷ್ಟ್ರೀಯ ವಿಮಾನದ ಪ್ರಯಾಣ ಟಿಕೆಟ್ ದರದ ಮೇಲೆ 1,000 ರು ರಿಯಾಯಿತಿ ನೀಡಲಾಗುತ್ತಿದೆ.

ವಿಸ್ತಾರ ನೀಡಿರುವ ಆಫರ್
ವಿಸ್ತಾರ ನೀಡಿರುವ ಆಫರ್ : ದೆಹಲಿ-ಶ್ರೀನಗರ, ದೆಹಲಿ-ಅಹ್ಮದಾಬಾದ್ (1,499 ರು), ದೆಹಲಿ-ಮುಂಬೈ, ದೆಹಲಿ-ಪುಣೆ (2,099 ರು), ದೆಹಲಿ-ಕೊಲ್ಕತ್ತಾ (2,199 ರು) ಮತ್ತು ದೆಹಲಿ -ಗೋವಾ ನಡುವಿನ ಪ್ರಯಾಣಕ್ಕೆ 1,499 ರು ನಿಗದಿ ಪಡಿಸಲಾಗಿದೆ.

ಎಚ್ ಡಿ ಎಫ್ ಸಿ ಗ್ರಾಹಕರಿಗೆ
ಕಡಿಮೆ ದರದಲ್ಲಿ ಪ್ರಯಾಣ ಬಯಸುವವರಿಗೆ ಸೇವೆ ಒದಗಿಸುವ ಸ್ಪೈಸ್ ಜೆಟ್ ಲಿಮಿಟೆಡ್ ಸಂಸ್ಥೆಯಿಂದ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಉಚಿತ ಆದ್ಯತೆ ಚೆಕ್ ಇನ್, 1000 ರು ತನಕ ರಿಯಾಯಿತಿ ಇದೆ ಆಗಸ್ಟ್ 9 ಹಾಗೂ ಆಗಸ್ಟ್ 15, 2017.
|
ಇಂಡಿಗೋ ಆಫರ್
ಇಂಡಿಗೋ ಆಫರ್: ದೆಹಲಿ, ಕೇರಳ, ಉದಯಪುರ ಸೇರಿದಂತೆ ಹಲವೆಡೆ ವಿಮಾನಯಾನದ ಮೇಲೆ 1,111 ರು ರಿಯಾಯಿತಿ ಹಾಗೂ ಮುಂಬೈ, ಗೋವಾ, ಬೆಂಗಳೂರು, ಗುವಾಹಟಿ, ಕೋಲ್ಕತಾ ಹಾಗೂ ಚೆನ್ನೈ ವಿಮಾನಯಾನದ ಮೇಲೂ ರಿಯಾಯಿತಿ ನೀಡಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications