ಐಡಿಯಾ ಸೆಲ್ಯುಲಾರ್ ಗೆ 600 ಕೋಟಿ ರು ದಂಡ
ನವದೆಹಲಿ, ಡಿ.3: ಸ್ಪೈಸ್ ಸೆಲ್ಯುಲಾರ್ ಸಂಸ್ಥೆ ಜತೆ ವಿಲೀನಗೊಳ್ಳುವಾಗ ಲೈಸನ್ಸ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊತ್ತಿರುವ ಐಡಿಯಾ ಸೆಲ್ಯುಲಾರ್ ಸಂಸ್ಥೆ ಮೇಲೆ ದೂರಸಂಪರ್ಕ ಇಲಾಖೆ(DoT) 600 ಕೋಟಿ ರು ದಂಡ ವಿಧಿಸಿದೆ. ಇಲಾಖೆಯಿಂದ ನೋಟಿಸ್ ಬಂದಿರುವುದನ್ನು ಐಡಿಯಾ ಸಂಸ್ಥೆ ವಕ್ತಾರರು ಖಾತ್ರಿಪಡಿಸಿದ್ದಾರೆ.
ಈ ಹಿಂದೆ ಕೇಂದ್ರ ಸಂಪರ್ಕ ಸಚಿವಾಲಯ ಐಡಿಯಾ ಸೆಲ್ಯುಲಾರ್ನ ಕರ್ನಾಟಕ ವೃತ್ತ ಹಾಗೂ ಸ್ಪೈಸ್ ಸೆಲ್ಯುಲಾರ್ನ ಆಂಧ್ರಪ್ರದೇಶ ವೃತ್ತದ ಪರವಾನಿಗೆಯನ್ನು ರದ್ದುಗೊಳಿಸುವ ಸಂಬಂಧ ಎರಡೂ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಪರವಾನಿಗೆಯನ್ನು ಪಡೆದ ನಂತರ ಸಂಪರ್ಕ ಇಲಾಖೆಯ ನಿಯಮಗಳನ್ನು ಅಳವಡಿಸಿಕೊಳ್ಳಲು ವಿಳಂಬ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಈ ಎರಡೂ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.

2008ರಲ್ಲಿ ಸ್ಪೈಸ್ ನ್ನು ಐಡಿಯಾ ಖರೀದಿಸಿದ್ದರೂ ಐಡಿಯಾದೊಂದಿಗಿನ ಸ್ಪೈಸ್ ವಿಲೀನಕ್ಕಾಗಿ ದೂರ ಸಂಪರ್ಕ ಇಲಾಖೆಯಿಂದ ಈ ಸಂಸ್ಥೆಗಳು ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ ಈ ಸಂಸ್ಥೆಗಳಿಗೆ ಮತ್ತೆ ಮತ್ತೆ ನೋಟಿಸ್ ಕಳುಹಿಸಲಾಗಿತ್ತು. ಆದರೆ, ನೋಟಿಸ್ ಗಳಿಗೆ ಐಡಿಯಾ ಉತ್ತರ ನೀಡಿರಲಿಲ್ಲ.
2ಜಿ ಸ್ಪೆಕ್ಟ್ರಂ ಹಂಚಿಕೆ ಸಮಯದಲ್ಲಿ ಮಾಜಿ ಟೆಲಿಕಾಂ ಸಚಿವ ರಾಜಾ 122 ಹೊಸ ಪರವಾನಿಗೆ ನೀಡಿದ್ದರು. ಇದರಲ್ಲಿ ಐಡಿಯಾ ಸಂಸ್ಥೆ ಸ್ಪೆಕ್ಟ್ರಂ ಹಂಚಿಕೆ ಕೂಡಾ ತನಿಖೆಗೊಳಲ್ಪಟ್ಟಿತ್ತು.
ಸ್ಪೈಸ್ ಮತ್ತು ಐಡಿಯಾ ಕಂಪೆನಿಗಳು ನಿಗದಿತ ಸಮಯದಲ್ಲಿ ಸೇವೆ ನೀಡಲು ವಿಫಲವಾಗಿದೆ ಮತ್ತು ಪರವಾನಿಗೆ ನಿಯಮವನ್ನು ಉಲ್ಲಂಘಿಸಿರುವುದರಿಂದ ಐದು ರಾಜ್ಯಗಳಲ್ಲಿ ಅವುಗಳ ಸೇವೆಗೆ ನೀಡಿರುವ ಪರವಾನಿಗೆಯನ್ನು ರದ್ದುಗೊಳಿಸುವಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಶಿಫಾರಸ್ಸು ಕೂಡಾ ಮಾಡಿತ್ತ್ತು.
2008ರಲ್ಲಿ ಅದಿತ್ಯಾ ಬಿರ್ಲಾ ಸಮೂಹ ಒಡೆತನದ ಐಡಿಯಾ ಸೆಲ್ಯುಲರ್ ಸಂಸ್ಥೆ ಸ್ಪೈಸ್ ಟೆಲಿಕಾಂನ ಶೇ. 41.09ರಷ್ಟು ಪಾಲು ಖರೀದಿಸಿತ್ತು.. ಇದಕ್ಕಾಗಿ 2,716ಕೋಟಿ ರು ವೆಚ್ಚಮಾಡಿತ್ತು.
ಆಂಧ್ರಪ್ರದೇಶ, ದೆಹಲಿ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್ ಹಾಗೂ ಕರ್ನಾಟಕ -ಆರು ಟೆಲಿಕಾಂ ಸರ್ಕಲ್ ನಲ್ಲಿ ಈ ವಿಲೀನ ಜಾರಿಗೆ ಬಂದಿತ್ತು. 2012ರಲ್ಲಿ ಸುಪ್ರೀಂಕೋರ್ಟ್ ಐಡಿಯಾ ಸಂಸ್ಥೆಯ ಪಂಜಾಬ್ ಹಾಗೂ ಕರ್ನಾಟಕ ಸರ್ಕಲ್ ಲೈಸನ್ಸ್ ರದ್ದುಗೊಳಿಸಿತ್ತು. ಉಳಿದ ನಾಲ್ಕು ಟೆಲಿಕಾಂ ಸರ್ಕಲ್ ಗಳಲ್ಲಿ ಸ್ಪೈಸ್ ತನ್ನ ಹಿಡಿತ ಕಳೆದುಕೊಂಡಿತ್ತು. (ಪಿಟಿಐ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications