ಮಾರುತಿ ಸಿಯಾಜ್ ಗೆ ಸಡ್ಡು ಹೊಡೆದ ಹೋಂಡಾ
ಸಾಕಷ್ಟು ದಿನಗಳಿಂದ ತನ್ನ ಶ್ರೇಣಿಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಮಾರುತಿ ಸೆಡಾನ್ ಮಾದರಿಗೆ ಸವಾಲು ಹಾಕಲು ಹೋಂಡಾ ಸಂಸ್ಥೆ ನಿರ್ಧರಿಸಿದೆ.
ನವದೆಹಲಿ, ಫೆಬ್ರವರಿ 14: ಜಪಾನ್ ನ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆ ಹೋಂಡಾ, ಭಾರತದಲ್ಲಿ ಚಾಲ್ತಿಯಲ್ಲಿರುವ ತನ್ನ ಸೆಡಾನ್ ಮಾದರಿಯ ಹೋಂಡಾ ಸಿಟಿಯನ್ನು ಅಪ್ ಗ್ರೇಡ್ ಮಾಡಿದ್ದು, 'ಹೋಂಡಾ ಸಿಟಿ 2017' ಎಂಬ ಹೊಸ ಆವೃತ್ತಿಯ ಕಾರುಗಳನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೊಸ ಮಾದರಿಯ ಕಾರುಗಳನ್ನು ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಯೊಚಿರೊ ಉನೋ ಬಿಡುಗಡೆಗೊಳಿಸಿದರು. ಈ ವೇಳೆ, ಹೋಂಡಾ ಕಂಪನಿಯ ಭಾರತ ಶಾಖೆಯ ಮುಖ್ಯಸ್ಥ ರಮಣ ಕುಮಾರ್ ಶರ್ಮಾ ಕೂಡ ಇದ್ದರು.

ಈ ಹೊಸ ಕಾರಿನಿಂದ ಸೆಡಾನ್ ಮಾದರಿಯಲ್ಲಿ ಭಾರತದಲ್ಲಿ ತಾನು ಈ ಹಿಂದೆ ಹೊಂದಿದ್ದ ಅಗ್ರಸ್ಥಾನವನ್ನು ಮರಳಿ ಪಡೆಯಲು ಹೋಂಡಾ ಕಂಪನಿ ಆಲೋಚಿಸಿದೆ.
ಹೊಸ 'ಹೋಂಡಾ ಸಿಟಿ 2017' ಕಾರಿನ ಬೆಲೆ 8.5 ಲಕ್ಷ ರು.ಗಳಿಂದ 13.58 ಲಕ್ಷ ರು. (ದೆಹಲಿ ಎಕ್ಸ್ ಷೋ ರೂಂ ಬೆಲೆ) ಇದ್ದು, ಈ ಮೂಲಕ ಮಾರುತಿ ಸುಝುಕಿ ಕಂಪನಿಯ ಉನ್ನತ ದರ್ಜೆಯ ಸೆಡಾನ್ ಕಾರು ಆದ ಮಾರುತಿ ಸಿಯಾಜ್ ಗೆ ಸಡ್ಡು ಹೊಡೆಯಲು ಹೋಂಡಾ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಮಾರುತಿ ಸುಜುಕಿಯ ಸಿಯಾಜ್ ನ ಬೆಲೆ ದೆಹಲಿ ಎಕ್ಸ್ ಷೋ ರೂಂ ಪ್ರಕಾರ, 7.86 ಲಕ್ಷ ರು. ನಿಂದ 9.96 ಲಕ್ಷ ರು. ಇದೆ. ಈ ಮಾದರಿಯ ಕಾರುಗಳ ಮಾರಾಟದಲ್ಲಿ ಈವರೆಗೆ ಮಾರುತಿ ಸಿಯಾಜ್ ನ ಮಾರಾಟವನ್ನು ಕುಗ್ಗಿಸಲು ಉಳಿದ ಕಂಪನಿಗಳಿಂದ ಆಗಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿರುವ ಹೋಂಡಾ, ತನ್ನ ಹೋಂಡಾ ಸಿಟಿಯನ್ನೇ ಉನ್ನತೀಕರಿಸಿ ಸಡ್ಡು ಹೊಡೆಯಲು ಮುಂದಾಗಿದೆ ಎಂದು ಹೇಳಲಾಗಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications