ಮಾರುತಿ ಸಿಯಾಜ್ ಗೆ ಸಡ್ಡು ಹೊಡೆದ ಹೋಂಡಾ
ಸಾಕಷ್ಟು ದಿನಗಳಿಂದ ತನ್ನ ಶ್ರೇಣಿಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಮಾರುತಿ ಸೆಡಾನ್ ಮಾದರಿಗೆ ಸವಾಲು ಹಾಕಲು ಹೋಂಡಾ ಸಂಸ್ಥೆ ನಿರ್ಧರಿಸಿದೆ.
ನವದೆಹಲಿ, ಫೆಬ್ರವರಿ 14: ಜಪಾನ್ ನ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆ ಹೋಂಡಾ, ಭಾರತದಲ್ಲಿ ಚಾಲ್ತಿಯಲ್ಲಿರುವ ತನ್ನ ಸೆಡಾನ್ ಮಾದರಿಯ ಹೋಂಡಾ ಸಿಟಿಯನ್ನು ಅಪ್ ಗ್ರೇಡ್ ಮಾಡಿದ್ದು, 'ಹೋಂಡಾ ಸಿಟಿ 2017' ಎಂಬ ಹೊಸ ಆವೃತ್ತಿಯ ಕಾರುಗಳನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೊಸ ಮಾದರಿಯ ಕಾರುಗಳನ್ನು ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಯೊಚಿರೊ ಉನೋ ಬಿಡುಗಡೆಗೊಳಿಸಿದರು. ಈ ವೇಳೆ, ಹೋಂಡಾ ಕಂಪನಿಯ ಭಾರತ ಶಾಖೆಯ ಮುಖ್ಯಸ್ಥ ರಮಣ ಕುಮಾರ್ ಶರ್ಮಾ ಕೂಡ ಇದ್ದರು.

ಈ ಹೊಸ ಕಾರಿನಿಂದ ಸೆಡಾನ್ ಮಾದರಿಯಲ್ಲಿ ಭಾರತದಲ್ಲಿ ತಾನು ಈ ಹಿಂದೆ ಹೊಂದಿದ್ದ ಅಗ್ರಸ್ಥಾನವನ್ನು ಮರಳಿ ಪಡೆಯಲು ಹೋಂಡಾ ಕಂಪನಿ ಆಲೋಚಿಸಿದೆ.
ಹೊಸ 'ಹೋಂಡಾ ಸಿಟಿ 2017' ಕಾರಿನ ಬೆಲೆ 8.5 ಲಕ್ಷ ರು.ಗಳಿಂದ 13.58 ಲಕ್ಷ ರು. (ದೆಹಲಿ ಎಕ್ಸ್ ಷೋ ರೂಂ ಬೆಲೆ) ಇದ್ದು, ಈ ಮೂಲಕ ಮಾರುತಿ ಸುಝುಕಿ ಕಂಪನಿಯ ಉನ್ನತ ದರ್ಜೆಯ ಸೆಡಾನ್ ಕಾರು ಆದ ಮಾರುತಿ ಸಿಯಾಜ್ ಗೆ ಸಡ್ಡು ಹೊಡೆಯಲು ಹೋಂಡಾ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಮಾರುತಿ ಸುಜುಕಿಯ ಸಿಯಾಜ್ ನ ಬೆಲೆ ದೆಹಲಿ ಎಕ್ಸ್ ಷೋ ರೂಂ ಪ್ರಕಾರ, 7.86 ಲಕ್ಷ ರು. ನಿಂದ 9.96 ಲಕ್ಷ ರು. ಇದೆ. ಈ ಮಾದರಿಯ ಕಾರುಗಳ ಮಾರಾಟದಲ್ಲಿ ಈವರೆಗೆ ಮಾರುತಿ ಸಿಯಾಜ್ ನ ಮಾರಾಟವನ್ನು ಕುಗ್ಗಿಸಲು ಉಳಿದ ಕಂಪನಿಗಳಿಂದ ಆಗಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿರುವ ಹೋಂಡಾ, ತನ್ನ ಹೋಂಡಾ ಸಿಟಿಯನ್ನೇ ಉನ್ನತೀಕರಿಸಿ ಸಡ್ಡು ಹೊಡೆಯಲು ಮುಂದಾಗಿದೆ ಎಂದು ಹೇಳಲಾಗಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications