ಡಿಜಿಟಲ್ ಪೇಮೆಂಟ್ ಮೇಲೆ ಶೇ. 2ರಷ್ಟು ಜಿಎಸ್ ಟಿ ರಿಯಾಯಿತಿ ?
ರುಪಾಯಿ 2000 ವರೆಗಿನ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತಗೊಳಿಸಲು ಕೇಂದ್ರ ಸರ್ಕಾರದ ಚಿಂತನೆ. ಕ್ಯಾಶ್ ಲೆಸ್ ಸೊಸೈಟಿಯ ಪರಿಕಲ್ಪನೆಗೆ ಮತ್ತಷ್ಟು ಇಂಬು ಕೊಡಲು ಆಲೋಚನೆ.
ನವದೆಹಲಿ, ಆಗಸ್ಟ್ 31: ನಗದು ರಹಿತ ಸಮಾಜವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ, ರು. 2000ವರೆಗಿನ ಎಲ್ಲಾ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಹೀಗೆ ಶೇ. 2ರವರೆಗೆ ಜಿಎಸ್ ಟಿ ರಿಯಾಯಿತಿ ಸಿಕ್ಕರೆ, ಅಲ್ಪ ಮೊತ್ತದ ವ್ಯವಹಾರ ಮಾಡುವ ಎಲ್ಲಾ ಗ್ರಾಹಕರಿಗೂ ಹೆಚ್ಚೆಚ್ಚು ಅನುಕೂಲಗಳಾಗಲಿವೆ ಎಂದು ಕೇಂದ್ರ ಸರ್ಕಾರ ಆಲೋಚಿಸಿದೆ.
ಇತ್ತೀಚೆಗೆ ನಡೆದ ಕೇಂದ್ರ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸಂಪುಟ ಕಾರ್ಯದರ್ಶಿಗಳ ಕಚೇರಿ ಹಾಗೂ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ಪ್ರಸ್ತಾಪನೆ ಚರ್ಚೆಯಾಗಿದೆ.
ಈ ಬಗ್ಗೆ ಎಲ್ಲಾ ಇಲಾಖಾ ಅಧಿಕಾರಿಗಳು ಮೌಖಿಕವಾಗಿ ತಮ್ಮ ಸಮ್ಮತಿ ಸೂಚಿಸಿದ್ದರೂ, ಇದರ ಸಾಧಕ ಬಾಧಕಗಳನ್ನು ಮತ್ತಷ್ಟು ಕೂಲಂಕಷವಾಗಿ ಚರ್ಚಿಸಿ ಆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.
ಹೀಗೆ, ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತಗೊಳಿಸುವುದರಿಂದ ಆಗುವ ಲಾಭಗಳೇನು, ಭಾರತ ಸರ್ಕಾರದ ವ್ಯವಹಾರಗಳ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಕ್ಯಾಶ್ ಲೆಸ್ ಸೊಸೈಟಿ ಪರಿಕಲ್ಪನೆಗೆ ಇಂಬು
ಅಲ್ಪ ಮೊತ್ತದವರೆಗಿನ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತ ಅವಕಾಶ ಮಾಡಿಕೊಟ್ಟರೆ ಅದರಿಂದ ಕ್ಯಾಶ್ ಲೆನ್ ಪರಿಕಲ್ಪನೆಗೆ ಮತ್ತಷ್ಟು ಇಂಬು ಸಿಗಲಿದೆ ಎಂಬುದು ಅಧಿಕಾರಿಗಳ ಸಲಹೆಯಾಗಿದೆ.

ಪಾವತಿದಾರರಲ್ಲಿ ಹೆಚ್ಚು ಉತ್ಸಾಹ
ಶೇ. 2ರವರೆಗಿನ ಕಡಿತದಿಂದಾಗಿ, ಸಣ್ಣ ಪುಟ್ಟ ಹಣ ಪಾವತಿದಾರರು ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಪೇಮೆಂಟ್ ಮೂಲಕವೇ ವ್ಯವಹರಿಸಲು ಉತ್ಸಾಹ ಬರಲಿದೆ.

ವರ್ತಕರ ನಕಲಿ ವ್ಯವಹಾರಕ್ಕೆ ಬ್ರೇಕ್
ಒಂದು ಟ್ರಾನ್ಸಾಕ್ಷನ್ ನಲ್ಲಿ 2000 ರು.ಗಳ ಒಳಗಿನವರೆಗೆ ವ್ಯಾಪಾರ ಮಾಡುವವ ಸಂಖ್ಯೆ ಅಧಿಕ ಇರುವುದರಿಂದ ಅಂಥವರು ನೈಜ ರೂಪದ ಆರ್ಥಿಕ ವ್ಯವಸ್ಥೆಗೆ ಬರಲು ವಿಪುಲ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಆಗ, ಬಿಲ್ ಇಲ್ಲದ ವ್ಯಾಪಾರದಲ್ಲಿ ಸಿಗುವ ಅನುಕೂಲ ಡಿಜಿಟಲ್ ಪೇಮೆಂಟ್ ನಲ್ಲೂ ಸಿಗುವುದರಿಂದ ಲಕ್ಷಾಂತರ ವರ್ತಕರ ಬಿಲ್ ಇಲ್ಲದ ವ್ಯವಹಾರಕ್ಕೆ ಕಡಿವಾಣ ಬೀಳಲೂ ಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಜನೋಪಯೋಗಿ ಆಲೋಚನೆ ಬಗ್ಗೆ ನಿರ್ಧಾರ
ಶೇ. 2ರಷ್ಟು ಜಿಎಸ್ ಟಿ ರಿಯಾಯಿತಿ ನೀಡುವುದು ಕೇವಲ ಒಂದು ಪ್ರಸ್ತಾವನೆಯಷ್ಟೆ. ಇಂಥ ಹಲವಾರು ಜನಪಯೋಗಿ ಆಲೋಚನೆಗಳು ಪ್ರಸ್ತಾಪನೆ ಸ್ವರೂಪದಲ್ಲಿದ್ದು ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications