ಡಿಜಿಟಲ್ ಪೇಮೆಂಟ್ ಮೇಲೆ ಶೇ. 2ರಷ್ಟು ಜಿಎಸ್ ಟಿ ರಿಯಾಯಿತಿ ?
ರುಪಾಯಿ 2000 ವರೆಗಿನ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತಗೊಳಿಸಲು ಕೇಂದ್ರ ಸರ್ಕಾರದ ಚಿಂತನೆ. ಕ್ಯಾಶ್ ಲೆಸ್ ಸೊಸೈಟಿಯ ಪರಿಕಲ್ಪನೆಗೆ ಮತ್ತಷ್ಟು ಇಂಬು ಕೊಡಲು ಆಲೋಚನೆ.
ನವದೆಹಲಿ, ಆಗಸ್ಟ್ 31: ನಗದು ರಹಿತ ಸಮಾಜವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ, ರು. 2000ವರೆಗಿನ ಎಲ್ಲಾ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಹೀಗೆ ಶೇ. 2ರವರೆಗೆ ಜಿಎಸ್ ಟಿ ರಿಯಾಯಿತಿ ಸಿಕ್ಕರೆ, ಅಲ್ಪ ಮೊತ್ತದ ವ್ಯವಹಾರ ಮಾಡುವ ಎಲ್ಲಾ ಗ್ರಾಹಕರಿಗೂ ಹೆಚ್ಚೆಚ್ಚು ಅನುಕೂಲಗಳಾಗಲಿವೆ ಎಂದು ಕೇಂದ್ರ ಸರ್ಕಾರ ಆಲೋಚಿಸಿದೆ.
ಇತ್ತೀಚೆಗೆ ನಡೆದ ಕೇಂದ್ರ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸಂಪುಟ ಕಾರ್ಯದರ್ಶಿಗಳ ಕಚೇರಿ ಹಾಗೂ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ಪ್ರಸ್ತಾಪನೆ ಚರ್ಚೆಯಾಗಿದೆ.
ಈ ಬಗ್ಗೆ ಎಲ್ಲಾ ಇಲಾಖಾ ಅಧಿಕಾರಿಗಳು ಮೌಖಿಕವಾಗಿ ತಮ್ಮ ಸಮ್ಮತಿ ಸೂಚಿಸಿದ್ದರೂ, ಇದರ ಸಾಧಕ ಬಾಧಕಗಳನ್ನು ಮತ್ತಷ್ಟು ಕೂಲಂಕಷವಾಗಿ ಚರ್ಚಿಸಿ ಆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.
ಹೀಗೆ, ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತಗೊಳಿಸುವುದರಿಂದ ಆಗುವ ಲಾಭಗಳೇನು, ಭಾರತ ಸರ್ಕಾರದ ವ್ಯವಹಾರಗಳ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಕ್ಯಾಶ್ ಲೆಸ್ ಸೊಸೈಟಿ ಪರಿಕಲ್ಪನೆಗೆ ಇಂಬು
ಅಲ್ಪ ಮೊತ್ತದವರೆಗಿನ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತ ಅವಕಾಶ ಮಾಡಿಕೊಟ್ಟರೆ ಅದರಿಂದ ಕ್ಯಾಶ್ ಲೆನ್ ಪರಿಕಲ್ಪನೆಗೆ ಮತ್ತಷ್ಟು ಇಂಬು ಸಿಗಲಿದೆ ಎಂಬುದು ಅಧಿಕಾರಿಗಳ ಸಲಹೆಯಾಗಿದೆ.

ಪಾವತಿದಾರರಲ್ಲಿ ಹೆಚ್ಚು ಉತ್ಸಾಹ
ಶೇ. 2ರವರೆಗಿನ ಕಡಿತದಿಂದಾಗಿ, ಸಣ್ಣ ಪುಟ್ಟ ಹಣ ಪಾವತಿದಾರರು ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಪೇಮೆಂಟ್ ಮೂಲಕವೇ ವ್ಯವಹರಿಸಲು ಉತ್ಸಾಹ ಬರಲಿದೆ.

ವರ್ತಕರ ನಕಲಿ ವ್ಯವಹಾರಕ್ಕೆ ಬ್ರೇಕ್
ಒಂದು ಟ್ರಾನ್ಸಾಕ್ಷನ್ ನಲ್ಲಿ 2000 ರು.ಗಳ ಒಳಗಿನವರೆಗೆ ವ್ಯಾಪಾರ ಮಾಡುವವ ಸಂಖ್ಯೆ ಅಧಿಕ ಇರುವುದರಿಂದ ಅಂಥವರು ನೈಜ ರೂಪದ ಆರ್ಥಿಕ ವ್ಯವಸ್ಥೆಗೆ ಬರಲು ವಿಪುಲ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಆಗ, ಬಿಲ್ ಇಲ್ಲದ ವ್ಯಾಪಾರದಲ್ಲಿ ಸಿಗುವ ಅನುಕೂಲ ಡಿಜಿಟಲ್ ಪೇಮೆಂಟ್ ನಲ್ಲೂ ಸಿಗುವುದರಿಂದ ಲಕ್ಷಾಂತರ ವರ್ತಕರ ಬಿಲ್ ಇಲ್ಲದ ವ್ಯವಹಾರಕ್ಕೆ ಕಡಿವಾಣ ಬೀಳಲೂ ಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಜನೋಪಯೋಗಿ ಆಲೋಚನೆ ಬಗ್ಗೆ ನಿರ್ಧಾರ
ಶೇ. 2ರಷ್ಟು ಜಿಎಸ್ ಟಿ ರಿಯಾಯಿತಿ ನೀಡುವುದು ಕೇವಲ ಒಂದು ಪ್ರಸ್ತಾವನೆಯಷ್ಟೆ. ಇಂಥ ಹಲವಾರು ಜನಪಯೋಗಿ ಆಲೋಚನೆಗಳು ಪ್ರಸ್ತಾಪನೆ ಸ್ವರೂಪದಲ್ಲಿದ್ದು ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications