ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಇಳಿಕೆ
ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರಗಳಲ್ಲಿ ಶೇ. 0.1ರಷ್ಟು ಇಳಿಕೆ ಮಾಡಿದ ಕೇಂದ್ರ ಹಣಕಾಸು ಸಚಿವಾಲಯ. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಿಗೆ ಅನ್ವಯ.
ನವದೆಹಲಿ, ಜುಲೈ 1: ಸಣ್ಣ ಉಳಿತಾಯದಡಿ ಚಾಲ್ತಿಯಲ್ಲಿರುವ ವಿವಿಧ ಹಣಕಾಸು ಯೋಜನೆಗಳ ಶೇಕಡಾವಾರು ಬಡ್ಡಿಯನ್ನು 0.1ರಷ್ಟು ಇಳಿಸಲಾಗಿದೆ. ಅದರಂತೆ, ಪಿಪಿಎಫ್, ಮಕ್ಕಳ ಕಲ್ಯಾಣ ನಿಧಿಯಡಿ ಬರುವ ಎಲ್ಲಾ ಸೇವಿಂಗ್ಸ್ ಗಳು, ಕಿಸಾನಿ ವಿಕಾಸ್ ಪತ್ರ ಮುಂತಾದ ಎಲ್ಲಾ ಉಳಿತಾಯಗಳ ಮೇಲಿನ ಬಡ್ಡಿ ದರ ಇಳಿಕೆ ಅನ್ವಯವಾಗಲಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕೇಂದ್ರ ಹಣಕಾಸು ಇಲಾಖೆಯು ಈ ಹೊಸ ದರಗಳು ಜುಲೈನಿಂದ ಸೆಪ್ಟಂಬರ್ ವರೆಗೆ ಚಾಲ್ತಿಯಲ್ಲಿದ್ದು, ಸೆಪ್ಟಂಬರ್ ನಂತರ ಮತ್ತೆ ಪರಿಷ್ಕರಿಸಲಾಗುವುದು ಎಂದು ತಿಳಿಸಿದೆ.
ಕಳೆದ ವರ್ಷವೇ ಕೇಂದ್ರ ಸರ್ಕಾರ, ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳುಗಳಿಗೊಮ್ಮೆ ಪರಿಷ್ಕರಿಸುವುದಾಗಿ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ, ಇದೇ ವರ್ಷ ಜನವರಿಯಿಂದ ಏಪ್ರಿಲ್ ವರೆಗೆ, ಏಪ್ರಿಲ್ ನಿಂದ ಜೂನ್ ವರೆಗಿನ ಮೂರು ತಿಂಗಳುಗಳವರೆಗೆ ಪರಿಷ್ಕೃತ ದರಗಳನ್ನು ಪ್ರಕಟಿಸಲಾಗಿತ್ತು. ಇದೀಗ, ಮುಂದಿನ ಮೂರು ತಿಂಗಳುಗಳಿಗೆ ಮತ್ತೊಂದು ಸುತ್ತಿನ ಪರಿಷ್ಕರಣೆಯನ್ನು ನೀಡಲಾಗಿದೆ.

ಕೆವಿಪಿ ದರವೂ ಇಳಿಕೆ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮೇಲಿನ ಬಡ್ಡಿ ದರವು ಶೇ. 7.9ರಿಂದ 7.8ಕ್ಕೆ ಇಳಿಕೆಯಾಗಲಿದೆ. ಇನ್ನು, ಕಿಸಾನ್ ವಿಕಾಸ ಪತ್ರದ ಬಡ್ಡಿ ದರ 7.6ರಿಂದ 7.5ಕ್ಕೆ ಇಳಿಯಲಿದೆ. ಇದರ ಮೆಚ್ಯುರಿಟಿ ಅವಧಿಯು 115 ತಿಂಗಳಿಗೆ ಹೆಚ್ಚಾಗಲಿದೆ.

ಒಂದು ಅಂಶದಷ್ಟು ಇಳಿಮುಖ
ಅಂಚೆ ಕಚೇರಿಗಳಲ್ಲಿ ಲಭ್ಯವಿರುವ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೊರ ತರಲಾಗಿರುವ ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿದರ ಶೇ. 8.4ರಿಂದ ಶೇ. 8.3ಕ್ಕೆ ಇಳಿಯಲಿದೆ.

ತ್ರೈ ಮಾಸಿಕ ಅವಧಿಗೆ ಪರಿಷ್ಕರಣೆ
ಹಿರಿಯ ನಾಗರಿಕರ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವು ಶೇ. 8.4ರಿಂದ ಶೇ. 8.3ಕ್ಕೆ ಇಳಿಕೆಯಾಗಲಿದೆ. ಈ ಹಿಂದೆಯೂ ಹಿರಿಯ ನಾಗರಿಕರ ಭವಿಷ್ಯ ನಿಧಿಯ ತ್ರೈಮಾಸಿಕ ಅವಧಿಯ ಲೆಕ್ಕಾಚಾರದಲ್ಲಿ ಪರಿಷ್ಕೃತಗೊಳ್ಳಲಿದೆ.

ರೆಕರಿಂಗ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ಹೀಗಿದೆ
ಟರ್ಮ್ ಡೆಪಾಸಿಟ್ ಗಳಿಗಲ್ಲಿ ಹೂಡಿಕೆ ಮಾಡಲಾಗಿರುವ ಹಣದ ಮೇಲಿನ ಬಡ್ಡಿದರವು ಶೇ. 6.8ರಿಂದ ಶೇ. 7.6ರ ನಡುವೆ ಇರಲಿದೆ. ಇನ್ನು, ಐದು ವರ್ಷಗಳ ಮಟ್ಟಿಗೆ ಇಡಲಾಗುತ್ತಿದ್ದ ರೆಕರಿಂಗ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ದರಗಳು ಶೇ. 7.1ರಷ್ಟು ಇರಲಿದೆ.

ಕೇಂದ್ರ ಸರ್ಕಾರ ಪ್ರಕಟಣೆ
ಬಡ್ಡಿ ದರಗಳಲ್ಲಿನ ಈ ಬದಲಾವಣೆಯು, ಸಣ್ಣ ಉಳಿತಾಯದ ಯೋಜನೆಗಳಡಿ ಸರ್ಕಾರಿ ಬಾಂಡ್ ಗಳನ್ನು ಕೊಂಡವರಿಗೂ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications