Gold Price: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಸಾಧ್ಯತೆ! ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆ ಎಂದಾಗ ಚಿನ್ನದಷ್ಟು ಭದ್ರತೆ ಬೇರೆ ಯಾವ ಹೂಡಿಕೆ ನೀಡುವುದಿಲ್ಲ. ಅದಕ್ಕೆ ಎಲ್ಲಾ ದೇಶಗಳು ಮೀಸಲು ಚಿನ್ನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿವೆ. ಚಿನ್ನ ಎಂದರೆ ಆಪತ್ಕಾಲದ ನೆಂಟ ಎನ್ನುವ ಮಾತಿದೆ. ಭಾರತೀಯರಿಗೆ ಚಿನ್ನದ ಜೊತೆ ಅವಿನಾಭಾವ ನಂಟಿದೆ. ಯಾವುದೇ ಶುಭಕಾರ್ಯ ಎಂದರೆ ಅಲ್ಲಿ ಚಿನ್ನದ ಖರೀದಿ ಇದ್ದೇ ಇರುತ್ತದೆ.
ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಳಿಕೆ ಕಾಣುತ್ತಿದೆ. 100 ಗ್ರಾಂ ಚಿನ್ನದ ಬೆಲೆ ಒಂದೇ ದಿನ 20 ಸಾವಿರ ಕುಸಿತ ಕಂಡ ನಂತರ, ಬಳಿಕ ಸೋಮವಾರ 1500 ರೂಪಾಯಿಗಳ ಅಲ್ಪ ಏರಿಕೆ ಕಂಡಿದೆ.

ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕುಸಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜಾಗತಿಕವಾಗಿ ಕೆಲವು ಬೆಳವಣಿಗೆಗಳನ್ನು ಗಮನಿಸಿದಾಗ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿನ್ನ ಖರೀದಿ ನಿಲ್ಲಿಸಿದ ಚೀನಾ
ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ ಕಳೆದ ಶುಕ್ರವಾರವೇ ಚೀನಾದ ಸೆಂಟ್ರಲ್ ಬ್ಯಾಂಕ್ ಚಿನ್ನದ ಖರೀದಿಯನ್ನು ನಿಲ್ಲಿಸಿತು. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಕೂಡ ಚಿನ್ನ ಖರೀದಿಗೆ ಬ್ರೇಕ್ ಹಾಕಿದ್ದು ಚಿನ್ನದ ಬೆಲೆ ಕುಸಿತಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಯುಎಸ್ ಡಾಲರ್ ದರ ಏರಿಕೆ ಕೂಡ ಚಿನ್ನದ ದರದ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವಾಗಿದೆ.
ಬುಧವಾರ ಮತ್ತಷ್ಟು ಕುಸಿತ?
ಮಂಗಳವಾರ ಆಭರಣ (22 ಕ್ಯಾರೆಟ್) ಚಿನ್ನದ ಬೆಲೆ ಗ್ರಾಂಗೆ 15 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 17 ರೂಪಾಯಿ ಏರಿಕೆಯಾಗಿದೆ. ಬುಧವಾರ ಚಿನ್ನದ ಬೆಲೆ ಮತ್ತೆ ಕುಸಿತದ ಹಾದಿಗೆ ಬರುತ್ತಾ ಎನ್ನುವ ನಿರೀಕ್ಷೆ ಆಭರಣ ಪ್ರಿಯರದ್ದಾಗಿದೆ.
ಮಂಗಳವಾರ ಚಿನ್ನದ ಬೆಲೆ ಕೆಜಿಗೆ 150 ರೂಪಾಯಿಗಳ ಅಲ್ಪ ಕುಸಿತ ದಾಖಲಿಸಿದೆ. ಸದ್ಯ ಒಂದು ಕೆಜಿ ಚಿನ್ನದ ಬೆಲೆ ₹ 90,250 ಆಗಿದೆ. ಬುಧವಾರ ಚಿನ್ನದ ಬೆಲೆ 90 ಸಾವಿರದ ಒಳಗೆ ಬರುವ ನಿರೀಕ್ಷೆ ಇದೆ.
-
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Gold Price Update: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Gold Price Increased: ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಗ್ರಾಹಕರಿಗೆ ಶಾಕ್! ಬೆಳ್ಳಿ ದರ ಎಷ್ಟಿದೆ? -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ












Click it and Unblock the Notifications