ಶ್ರೀಮಂತರ ಪಟ್ಟಿಯಲ್ಲಿ 3 ರಿಂದ 38 ನೇ ಸ್ಥಾನಕ್ಕಿಳಿದ ಗೌತಮ್ ಅದಾನಿ- ದಿವಾಳಿಯತ್ತ ಭಾರತದ ಸಿರಿವಂತ? ವರದಿ, ವಿವರ
ಮುಂಬೈ, ಫೆಬ್ರವರಿ 28: ಗೌತಮ್ ಅದಾನಿ ಈಗ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38 ನೇ ಸ್ಥಾನದಲ್ಲಿದ್ದಾರೆ. ಹಿಂಡೆನ್ಬರ್ಗ್ ವರದಿಯನ್ನು ಹೊರಬೀಳುವ ಮೊದಲು ಮೂರನೇ ಸ್ಥಾನದಲ್ಲಿದ್ದರು. ಈ ವರದಿ ಪ್ರಕಟವಾದ ನಂತರ ಅವರ ಗ್ರೂಪ್ನ ಷೇರುಗಳು ಭಾರೀ ಕುಸಿತ ಕಂಡವು. ಇದರ ಪರಿಣಾಮ ಅವರ ಆಸ್ತಿಯ ನಿವ್ವಳ ಮೌಲ್ಯಗಳು ಅನಾಹುತಕಾರಿಯಾಗಿ ಕುಸಿತ ಕಂಡಿವೆ.
ಪ್ರಸ್ತುತ, ಅದಾನಿಯವರ ನಿವ್ವಳ ಮೌಲ್ಯವು $33.4 ಶತಕೋಟಿ ಎಂದು ಅಂದಾಜಿಸಲಾಗಿದೆ. ಫೋರ್ಬ್ಸ್ನ ನೈಜ-ಸಮಯದ ಟ್ರ್ಯಾಕರ್ ಪ್ರಕಾರ, ಜನವರಿ 24 ರಂದು ವರದಿ ಹೊರಬೀಳುವ ಮೊದಲು ಅದಾನಿ ಆಸ್ತಿಯ ನಿವ್ವಳ ಮೌಲ್ಯವು $119 ಶತಕೋಟಿ ಇತ್ತು. ಒಟ್ಟು $85 ಶತಕೋಟಿಯಷ್ಟು ಮೌಲ್ಯವನ್ನು ಅದಾನಿ ಕಳೆದುಕೊಂಡಿದ್ದಾರೆ.

ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು $40 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಅದಾನಿಯನ್ನು 30 ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಿದೆ. ಅವರು ಕಳೆದುಕೊಂಡ ನಿವ್ವಳ ಮೌಲ್ಯದ ಗಮನಾರ್ಹ ಭಾಗವು ಗೌತಮ್ ಅದಾನಿ ಅಧ್ಯಕ್ಷರಾಗಿರುವ ಅದಾನಿ ಗ್ರೂಪ್ನ ಹಿಡುವಳಿಯಲ್ಲಿದೆ.
ಹಿಂಡೆನ್ಬರ್ಗ್ ವರದಿಯನ್ನು ಪ್ರಕಟಿಸಿದ ಒಂದು ತಿಂಗಳ ನಂತರ, ಸಂಘಟಿತ ಕಂಪನಿಯ ಒಟ್ಟು ನಿವ್ವಳ ಮೌಲ್ಯವು ಸುಮಾರು $150 ಶತಕೋಟಿಗಳಷ್ಟು ಕಡಿಮೆಯಾಗಿದೆ ಎಂದು BSE ಡೇಟಾ ತೋರಿಸಿದೆ.
84.3 ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ಗೆ ಅಂಬಾನಿ ಅಧ್ಯಕ್ಷರಾಗಿದ್ದಾರೆ.

ಜನವರಿ 24 ರ ವರದಿಯಲ್ಲಿ, ಹಿಂಡೆನ್ಬರ್ಗ್ ಲೆಕ್ಕಪತ್ರ ವಂಚನೆ, ತೆರಿಗೆ ವಂಚನೆಗಳಲ್ಲಿ ಅದಾನಿಯಿಂದ ಗ್ರೂಪ್ ತೊಡಗಿಸಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅದಾನಿ ಆಸ್ತಿಗಳ ಮೌಲ್ಯವು ಭಾರಿ ಕುಸಿತವನ್ನು ಕಾಣುತ್ತಿದೆ. ಅವರ ಕಂಪನಿಗಳ ಷೇರುಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಮಾದವನ್ನು ಎಸಗಿಲ್ಲ ಎಂದು ಗೌತಮ್ ಅದಾನಿ ತಿಳಿಸಿದ್ದಾರೆ.
ಅದಾನಿಯವರಿಗೆ ಹೆಚ್ಚಿನ ಲಾಭವು ಮೂಲಸೌಕರ್ಯದಿಂದ ಬಂದಿದೆ. ಅಲ್ಲಿ ಅವರು ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು ಮತ್ತು ಹಳಿಗಳ ಮೇಲೆ ಅದಾನಿ ಮಾಲೀಕತ್ವ ಹೊಂದಿದ್ದಾರೆ. ಹಿಂಡೆನ್ಬರ್ಗ್ ವರದಿಯ ನಂತರ, ಪ್ರಮುಖ ಅದಾನಿ ಎಂಟರ್ಪ್ರೈಸಸ್ನ ರೂ. 20,000-ಕೋಟಿ ಫಾಲೋ-ಆನ್ ಸಾರ್ವಜನಿಕ ಕೊಡುಗೆಯನ್ನು (ಎಫ್ಪಿಒ) ರದ್ದುಗೊಳಿಸಿದರು. ಅದಾನಿ ಪವರ್ನಿಂದ ಡಿಬಿ ಪವರ್ನ ರೂ 7,017-ಕೋಟಿ ಖರೀದಿಯನ್ನು ಕೈಬಿಟ್ಟರು. ಈ ಬೆಳವಣಿಗೆ ದೇಶದ ರಾಜಕೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಜನವರಿ 25, 1988 ರಲ್ಲಿ ಸರಕುಗಳ ವ್ಯಾಪಾರಿಯಾಗಿ ಗೌತಮ್ ಅದಾನಿ ವ್ಯಾಪಾರ ಆರಂಭಿಸಿದರು. ಹಿಂಡೆನ್ಬರ್ಗ್ ವರದಿಯಿಂದ ಉಂಟಾದ ಹಾನಿಯನ್ನು ಅವರು ಸರಿಪಡಿಸುತ್ತಿದ್ದಾರೆ. ನಗದು ಸಂರಕ್ಷಿಸುವುದು, ವಾಗ್ದಾನ ಮಾಡಿದ ಷೇರುಗಳನ್ನು ಮರುಪಡೆಯುವುದು ಮತ್ತು ಬಂಡವಾಳ ವೆಚ್ಚದ ಯೋಜನೆಗಳನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications