ಜಿಎಸ್ಟಿ ಕಾನೂನುಗಳನ್ನು ಅಪರಾಧ ಮುಕ್ತವಾಗಿಡಲು ಸಿಐಐ ಸಲಹೆ
ನವದೆಹಲಿ, ನವೆಂಬರ್ 21: ಉದ್ಯಮ ಸಂಸ್ಥೆಯಾದ ಭಾರತೀಯ ಕೈಗಾರಿಕಾ ಒಕ್ಕೂಟವು (CII) ಮುಂಬರುವ ಕೇಂದ್ರದ ಬಜೆಟ್ಗಾಗಿ ತನ್ನ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಲು ಹಾಗೂ ಅಪರಾಧ ವರ್ಗವನ್ನು ಜಿಎಸ್ಟಿ ಕಾನೂನಿನ ವ್ಯಾಪ್ತಿಯಿಂದ ತೆಗೆದು ಹಾಕಲು ಮತ್ತು ಬಂಡವಾಳ ಲಾಭದ ತೆರಿಗೆಯನ್ನು ಮರುಪರಿಶೀಲಿಸಲು ಒಕ್ಕೂಟವು ಒತ್ತಾಯಿಸಿದೆ.
ಜಿಎಸ್ಟಿ ಕಾನೂನುಗಳನ್ನು ಅಪರಾಧ ಮುಕ್ತವಾಗಿಡಲು ಸಿಐಐ ಸಲಹೆ ಕೇಂದ್ರಕ್ಕೆ ನೀಡಿದೆ. ತೆರಿಗೆ ವಂಚನೆಯನ್ನು ತಡೆಯಲು ಸಾಕಷ್ಟು ದಂಡದ ನಿಬಂಧನೆಗಳನ್ನು ಜಿಎಸ್ಟಿ ಹೊಂದಿದೆ ಎಂದು ಹೇಳಿದೆ.
'ಕ್ಯಾಪಿಟಲ್ ಗೇನ್ಸ್ ತೆರಿಗೆ ದರಗಳು ಮತ್ತು ಸಂಕೀರ್ಣತೆಗಳು ಮತ್ತು ವೈಪರೀತ್ಯಗಳನ್ನು ತೆಗೆದುಹಾಕಲು ಹಿಡುವಳಿ ಅವಧಿಯನ್ನು ಹೊಸದಾಗಿ ನೋಡುವ ಅವಶ್ಯಕತೆಯಿದೆ' ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಉದ್ಯಮ ಸಂಸ್ಥೆಯ ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.

ಅಪರಾಧ ಸಾಬೀತು ಆದರೆ ಬಂಧನದ ಕ್ರಮಬೇಡ
ಮುಂದಿನ ಹಂತದ ಸುಧಾರಣೆಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿತಗೊಳಿಸುವ ಬಗ್ಗೆಯೂ ಸರ್ಕಾರ ಪರಿಗಣಿಸಬೇಕು. ವ್ಯವಹಾರಗಳಿಗೆ ಫ್ಲಾಟ್ ಟ್ಯಾಕ್ಸ್ ಮುಂದುವರೆಯಬೇಕು ಮತ್ತು ಕಾರ್ಪೊರೇಟ್ ತೆರಿಗೆ ದರವೂ ಪ್ರಸ್ತುತ ಮಟ್ಟದಲ್ಲಿ ಉಳಿಯಬೇಕು ಎಂದು ಸಿಐಐ ಹೇಳಿದೆ. ಮತ್ತೊಂದೆಡೆ, ಸಿವಿಲ್ ಪ್ರಕರಣಗಳಲ್ಲಿ ತೆರಿಗೆ ವ್ಯವಹಾರದಲ್ಲಿನ ಅಪರಾಧ ಸಾಬೀತಾಗುವವರೆಗೆ ಯಾವುದೇ ಬಂಧನ ಅಥವಾ ಬಂಧನದ ಕ್ರಮ ಇರಬಾರದು ಎಂದು ತಿಳಿಸಿದೆ.
2023-24ರ ವೇಳೆಗೆ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಆರಕ್ಕೆ ಮತ್ತು 2025-26ರ ವೇಳೆಗೆ ಶೇ.4.5ಕ್ಕೆ ಇಳಿಸಲು ಪ್ರಯತ್ನಿಸಬೇಕು ಎಂದು ಚೇಂಬರ್ ಹೇಳಿದೆ. ಇದಲ್ಲದೆ, ಬಂಡವಾಳ ವೆಚ್ಚವನ್ನು 2023-24ರಲ್ಲಿ ಪ್ರಸ್ತುತ 2.9 ಪ್ರತಿಶತದಿಂದ 3.3-3.4 ಕ್ಕೆ ಹೆಚ್ಚಿಸಬೇಕು ಮತ್ತು 2024-25 ರ ವೇಳೆಗೆ ಅದನ್ನು 3.8-3.9 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿರಬೇಕು.

ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸಲು ಸಾರ್ವಜನಿಕ ವಲಯದ ಹೂಡಿಕೆಯು ಸಾಕಾಗುವುದಿಲ್ಲವಾದ್ದರಿಂದ ಖಾಸಗಿ ವಲಯದ ಹೂಡಿಕೆ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಸಿಐಐ ಅಭಿಪ್ರಾಯಪಟ್ಟಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications