ಮ್ಯಾಕ್ಸ್ ಹುಟ್ಟಿದ ಖುಷಿ: ಝುಕರ್ ಬರ್ಗ್ ರಿಂದ ಮ್ಯಾಕ್ಸಿಮಮ್ ದಾನ
ಬೆಂಗಳೂರು, ಡಿ.02: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸ್ಥಾಪಕ ಈಗ ಜನಕನಾದ ಖುಷಿಯಲ್ಲಿದ್ದಾರೆ. ಮಾರ್ಕ್ ಝುಕರ್ ಬರ್ಗ್ ಹಾಗೂ ಪ್ರಿಸಿಲ್ಲಾ ಚಾನ್ ದಂಪತಿಗೆ ಜನಿಸಿದ ಪುತ್ರಿಗೆ ಮ್ಯಾಕ್ಸ್ ಎಂದು ಹೆಸರಿಡಲಾಗಿದೆ.
ಮಗಳು ಹುಟ್ಟಿದ ಖುಷಿಯಲ್ಲಿ ಮಾರ್ಕ್ ದಂಪತಿ ತಮ್ಮ ಬಳಿ ಇರುವ ಫೇಸ್ ಬುಕ್ ನ ಷೇರುಗಳ ಶೇ 99ರಷ್ಟು ಭಾಗವನ್ನು ದಾನ ಧರ್ಮಕ್ಕೆ ಬಳಸುವುದಾಗಿ ಘೋಷಿಸಿದ್ದಾರೆ.
ಮಾರ್ಕ್ ಝುಕರ್ ಬರ್ಗ್ ಮತ್ತು ಅವರ ಪತ್ನಿ ಪ್ರಿಸಿಲ್ಲಾ ಚಾನ್ ಬಳಿ ಇರುವ ಷೇರುಗಳ ಇಂದಿನ ಮೌಲ್ಯ ಸುಮಾರು 45 ಬಿಲಿಯನ್ ಡಾಲರ್ (30 ಬಿಲಿಯನ್ ಪೌಂಡ್) ಎಂದು ಅಂದಾಜಿಸಲಾಗಿದೆ. ಈ ಷೇರುಗಳನ್ನು ತಕ್ಷಣಕ್ಕೆ ದಾನ ಮಾಡುತ್ತಿಲ್ಲ. ಹಂತ ಹಂತವಾಗಿ ಸಮಾಜ ಉಪಯೋಗಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.

ಕಳೆದ ವಾರ ಈ ದಂಪತಿಗಳಿಗೆ ಪುತ್ರಿ ಜನಿಸಿದ್ದು, ಈ ವಿಷಯವನ್ನು ಮಂಗಳವಾರ ಫೇಸ್ ಬುಕ್ ನಲ್ಲಿ ಬಹಿರಂಗ ಪಡಿಸಿದ್ದರು. ಇದರ ಜೊತೆಗೆ ಮಗಳು ಮ್ಯಾಕ್ಸ್ ಗೆ ತಂದೆ ಮಾರ್ಕ್ ಮುದ್ದಾದ ಪತ್ರವನ್ನು ಬರೆದಿದ್ದರು. ಈ ಸಮಯಕ್ಕೆ ಫೇಸ್ ಬುಕ್ ನಲ್ಲಿ ಈ ಪೋಸ್ಟ್ ಗೆ 9,59,075 ಲೈಕ್ಸ್ ಸಿಕ್ಕಿದೆ.1,58,939 ಬಾರಿ ಹಂಚಿಕೊಳ್ಳಲಾಗಿದೆ. 68,841 ಬಾರಿ ಕಾಮೆಂಟ್ ಕಂಡಿದೆ.[ಮಗಳಿಗೆ ಬರೆದ ಪತ್ರದಲ್ಲಿ ಫೇಸ್ಬುಕ್ ಜನಕ ಹೇಳಿದ್ದೇನು?]
ಕೆಲದಿನಗಳ ಹಿಂದೆ ಟೆಕ್ ಲೋಕದ ದಿಗ್ಗಜ ಮಹಾನ್ ದಾನಿ ಬಿಲ್ಸ್ ಗೇಟ್ಸ್ ಅವರ ಸಂಸ್ಥೆ ಜೊತೆ ಕೈಜೋಡಿಸಿದ್ದ ಮಾರ್ಕ್ ಅವರು ಕ್ಲೀನ್ ಎನರ್ಜಿ ತಂತ್ರಜ್ಞಾನ ಅಭಿವೃದ್ಧಿಗೆ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. ಪ್ಯಾರೀಸ್ಸ್ ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮಾವೇಶದಲ್ಲಿ ಇದೇ ವಿಷಯವನ್ನು ಈ ಇಬ್ಬರು ದಿಗ್ಗಜರು ಮಾತನಾಡಲು ಮುಂದಾಗಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications