ಎಲಿವೇಟ್100ನಲ್ಲಿ ಮಿಂಚಿದ ಮಹಿಳಾ ಉದ್ಯಮಿಗಳು
ಬೆಂಗಳೂರು, ಆಗಸ್ಟ್ 30 : "ನಿಮ್ಮಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ಯಾಷನ್ ಇದ್ದರೆ, ನಿಮಗೆ ಅದಕ್ಕೆ ಬೇಕಾದಂಥ ಸಾಧನಗಳು ಮತ್ತು ಕೌಶಲ್ಯಗಳು ತಾವಾಗಿಯೇ ಸಿಗುತ್ತವೆ" ಎಂಬುದು 'ಎಲಿವೇಟ್100' ಸಮಾವೇಶದ ಅಘೋಷಿತ ಘೋಷವಾಕ್ಯ.
"ಇದು ಕರ್ನಾಟಕ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಇನಿಶಿಯೇಟಿವ್ ಆಗಿದ್ದು, ಭಾರತದಲ್ಲಿ ಯಾವುದೇ ಸರಕಾರ ಇಂಥ ಕ್ರಮ ಕೈಗೊಂಡಿಲ್ಲ ಮತ್ತು ಸ್ಟಾರ್ಟ್ ಅಪ್ ಸೆಲ್ ತೆರೆದಿಲ್ಲ, ಸರಕಾರದ ಇಂಥ ನೀತಿಯಿಂದಲೇ ಉದ್ಯಮಗಳು ಬೆಳೆಯುತ್ತವೆ" ಎಂದು ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ನುಡಿದರು.

ಕರ್ನಾಟಕದಲ್ಲಿ ಹೊಸ ಯುವ ಉದ್ಯಮಿಗಳಿಗೆ ವೇದಿಕೆ, ಪ್ರೋತ್ಸಾಹ, ಹಣಕಾಸಿನ ಸಹಾಯ ಒದಗಿಸುವ ಉದ್ದೇಶದಿಂದ ಹೋಟೆಲ್ ಲಲಿತ್ ಅಶೋಕ್ ನಲ್ಲಿ ಆಗಸ್ಟ್ 29ರಿಂದ ಎರಡು ದಿನಗಳ ಸಮಾವೇಶವನ್ನು ಕರ್ನಾಟಕ ಸರಕಾರ ಹಮ್ಮಿಕೊಂಡಿತ್ತು.
ಕರ್ನಾಟಕ ಸರಕಾರದ ಆರಂಭಿಸಿದ ಈ ಯಜ್ಞದಲ್ಲಿ ಪಾಲ್ಗೊಂಡವರು 3,700ಕ್ಕೂ ಹೆಚ್ಚು ಉದ್ಯಮಿಗಳು. ಅವರಲ್ಲಿ ಆಯ್ಕೆಯಾದ ಪ್ರಥಮ 100 ಉದ್ಯಮಿಗಳ ಮಾತುಕತೆ, ಚರ್ಚೆ, ವಿಚಾರ ಹಂಚಿಕೆಗೆ ಕಲ್ಪಿಸಲಾದ ವೇದಿಕೆಯೇ 'ಎಲಿವೇಟ್ 100'.

ಇಲ್ಲಿ ಕಂಡುಬಂದ ಮಹತ್ವದ ಸಂಗತಿಯೇನೆಂದರೆ, ನೂರರಲ್ಲಿ ಶೇ.19ರಷ್ಟು ಮಹಿಳಾ ಉದ್ಯಮಿಗಳು ಆಯ್ಕೆಯಾಗಿರುವುದು. ಮಹಿಳಾ ಉದ್ಯಮಿಗಳಿಗಾಗಿಯೇ 10 ಕೋಟಿ ರುಪಾಯಿ ಅನುದಾನ ನೀಡುತ್ತಿದ್ದುದಕ್ಕಾಗಿ ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅರಸ್ ಅವರು ಶ್ಲಾಷಿಸಿದ್ದಾರೆ.

Internet of Things ವಿಷಯದ ಮೇಲೆ ರಂಜನಾ ನಾಯರ್, ಉಮಾ ರೆಡ್ಡಿ, ರಾಧಿಕಾ ಶೆಟ್ಟಿ, ವಿದ್ಯಾ ವಿನಯ್, ರಾಶಿ ಮೆಂಡಾ ಮುಂತಾದ ಮಹಿಳಾ ಉದ್ಯಮಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಮಹಿಳಾ ಉದ್ಯಮಿಗಳು ಅತ್ಯಂತ ಉತ್ಸಾಹದಿಂದ ಈ ಚರ್ಚಾಕೂಟದಲ್ಲಿ ಭಾಗವಹಿಸಿದ್ದರು.

ಮೈಕ್ರೋಸಾಫ್ಟ್ ನ ರವಿ ನಾರಾಯಣ್ ಅವರು, ಇಲ್ಲಿರುವ ಉದ್ಯಮಿಗಳಲ್ಲಿನ ಉತ್ಸಾಹ, ಶಕ್ತಿ ಅಮಿತವಾಗಿತ್ತು ಎಂದು ಬಣ್ಣಿಸಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಷನ್ ನ ಸಿಇಓ ನವೀನ್ ಝಾ, ಐಟಿ ಬಿಟಿ ಇಲಾಖೆಯ ಕಾರ್ಯದರ್ಶಿ ಗೌರವ್ ಗುಪ್ತಾ, ನಾಸ್ಕಾಂ ಬೋರ್ಡ್ ಸದಸ್ಯ ರವಿ ಗುರುರಾಜ್ ಮುಂತಾದವರು ಭಾಗವಹಿಸಿದ್ದರು.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ












Click it and Unblock the Notifications