ಒಂದಲ್ಲ, ಎರಡಲ್ಲ, 510 ಕೋಟಿ ರೂ.ಗೆ ಹರಾಜಾಯ್ತು 'ಎಣ್ಣೆ' ಅಂಗಡಿ!
ಜೈಪುರ, ಮಾರ್ಚ್ 9: ಎರಡು ಎದುರಾಳಿ ಕುಟುಂಬಗಳ ಜಿದ್ದಾಜಿದ್ದಿ ಹೇಗಿರುತ್ತದೆ ಎಂಬುದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ರಾಜಸ್ಥಾನದ ಹನುಮನಗಡ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಮದ್ಯದಂಗಡಿ ಹರಾಜು ಪ್ರಕ್ರಿಯೆ ದಂಗುಬಡಿಸುವಂತಿದೆ. 'ಎಣ್ಣೆ'ಗೆ ಇರುವ ಬೇಡಿಕೆಯಂತೆಯೇ ಅದರ ಅಂಗಡಿ ಮಾಲೀಕತ್ವಕ್ಕೆ ಎಂತಹ ಬೇಡಿಕೆ ಇದೆ ಎಂದು ಜನರು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.
ಇಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಿದ್ದ ಹರಾಜು ಪ್ರಕ್ರಿಯೆ ಮಧ್ಯರಾತ್ರಿಯ ಬಳಿಕ ನಡೆದಿದೆ. ಅದೂ ಒಂದಲ್ಲ, ಎರಡಲ್ಲ, ಬರೋಬ್ಬರಿ 510 ಕೋಟಿ ರೂಪಾಯಿಗೆ. ಅಲ್ಲಿಯವರೆಗೂ ಪೈಪೋಟಿ ನೀಡಿದ್ದ ಎದುರಾಳಿ ಕುಟುಂಬ, ಕೊನೆಗೂ ಹೈರಾಣಾಗಿ ಸೋಲೊಪ್ಪಿಕೊಂಡಿದೆ. ಪ್ರತಿಷ್ಠೆಯನ್ನು ಪಣವಾಗಿಟ್ಟುಕೊಂಡು ಹರಾಜಿನಲ್ಲಿ ಭಾಗವಹಿಸಿ ಬಿಡ್ ಗೆದ್ದ ಕುಟುಂಬ ನಗುತ್ತಿದೆಯೋ, ಅಳುತ್ತಿದೆಯೊ ಎನ್ನುವುದು ಗೊತ್ತಾಗಿಲ್ಲ.
ರಾಜಸ್ಥಾನದಲ್ಲಿ ಮದ್ಯದಂಗಡಿಗಳ ಇ-ಹರಾಜು ನಡೆಸುವುದು ಸಾಮಾನ್ಯ. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದಾಗ ಮದ್ಯದಂಗಡಿಗಳ ಇ-ಹರಾಜನ್ನು ರದ್ದುಗೊಳಿಸಿದ್ದರು. ಆದರೆ ಈಗ ಕಾಂಗ್ರೆಸ್ನ ಅಶೋಕ್ ಗೆಹ್ಲೋಟ್ ಸರ್ಕಾರ ಅದನ್ನು ಪುನರಾರಂಭಿಸಿದೆ. ಸುಮಾರು 7000 ಅಂಗಡಿಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ.

510 ಕೋಟಿ ರೂ ಬಿಡ್
ಹನುಮನಗಡದ ನೋಹರ್ನಲ್ಲಿ ಮದ್ಯದಂಗಡಿಗೆ 72.70 ಲಕ್ಷ ಮೂಲ ಬೆಲೆ ನಿಗದಿಗೊಳಿಸಲಾಗಿತ್ತು. ಕಳೆದ ವರ್ಷ ಅದನ್ನು ಲಾಟರಿ ಮೂಲಕ 65 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಆದರೆ ಇ-ಹರಾಜಿನಲ್ಲಿ ಮತ್ತೆ ಅದನ್ನು ಮಾರಾಟಕ್ಕಿಟ್ಟಿದ್ದು, ಇಡೀ ಸನ್ನಿವೇಶವನ್ನೇ ಬದಲಿಸಿದೆ. ಅದು ಇತಿಹಾಸದಲ್ಲಿಯೇ ಅತ್ಯಧಿಕ, 510 ಕೋಟಿ ರೂ ಬಿಡ್ ಪಡೆದುಕೊಂಡಿದೆ.

708 ಪಟ್ಟು ಅಧಿಕ ಬೆಲೆಗೆ ಹರಾಜು
ಲಿಕ್ಕರ್ ಶಾಪ್ಗೆ ಹರಾಜಿನಲ್ಲಿ 72.70 ಲಕ್ಷ ರೂ ಮೂಲಬೆಲೆ ನಿಗದಿಗೊಳಿಸಲಾಗಿತ್ತು. ಆದರೆ ಅದು ಮೂಲ ಬೆಲೆಯ 708 ಪಟ್ಟು ಹೆಚ್ಚು ಬೆಲೆಗೆ ಹರಾಜಾಗಿದೆ. ಕಿರಣ್ ಕನ್ವಾರ್ ಎಂಬುವವರು 510 ಕೋಟಿ ರೂ ಬಿಡ್ ಸಲ್ಲಿಸಿದ್ದಾರೆ. ಬಿಡ್ ಮಾಡಿದ ಮೊತ್ತದ ಶೇ 2ರಷ್ಟು ಮೊತ್ತವನ್ನು ಠೇವಣಿಯಾಗಿ ಇರಿಸುವಂತೆ ಬಿಡ್ಡರ್ಗೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಮೂರುದಿನದಲ್ಲಿ ಠೇವಣಿ ಇರಿಸದೆ ಹೋದರೆ ಅವರ ಬಿಡ್ಡಿಂಗ್ ರದ್ದಾಗಲಿದೆ ಎಂದು ಅಬಕಾರಿ ನೀತಿಯ ಹೆಚ್ಚುವರಿ ಆಯುಕ್ತ ಸಿಆರ್ ದೆವಾಸಿ ತಿಳಿಸಿದ್ದಾರೆ.

ಎರಡು ಕುಟುಂಬಗಳ ಪೈಪೋಟಿ
ಲಿಕ್ಕರ್ ಶಾಪ್ಗೆ ಬಿಡ್ ಸಲ್ಲಿಸುವ ಸಂಬಂಧ ಪ್ರತಿಷ್ಠೆ ಮುಂದಿಟ್ಟ ಎರಡು ಕುಟುಂಬಗಳು ನಿರಂತರ ಬಿಡ್ ಸಲ್ಲಿಸುತ್ತಲೇ ಹೋಗಿವೆ. ಕೊನೆಗೆ 500 ಕೋಟಿ ರೂಪಾಯಿಯವರೆಗೂ ಪೈಪೋಟಿ ನೀಡಿದ ಕುಟುಂಬ, ಎದುರಾಳಿ 510 ಕೋಟಿ ರೂಪಾಯಿಗೆ ಬಿಡ್ ಸಲ್ಲಿಸಿದ ಬಳಿಕ ಹರಾಜಿನಿಂದ ಹಿಂದೆ ಸರಿದಿದೆ.

ವೈನ್ಶಾಪ್ಗೆ ಬೇಡಿಕೆ ಅಧಿಕ
ರಾಜಸ್ಥಾನ ಸರ್ಕಾರವು ಇ-ಹರಾಜು ಮೂಲಕ ನಡೆಸುತ್ತಿರುವ ವೈನ್ ಶಾಪ್ ಮಾರಾಟಕ್ಕೆ ಭಾರಿ ಬೇಡಿಕೆ ಉಂಟಾಗುತ್ತಿದೆ. ಚುರು ಜಿಲ್ಲೆಯಲ್ಲಿಯೂ ಒಂದು ಲಿಕ್ಕರ್ ಅಂಗಡಿ 11 ಕೋಟಿ ರೂ.ಗೆ ಹರಾಜಾಗಿದ್ದರೆ, ಜೈಪುರದ ಸಂಗನೆರ್ನ ಮತ್ತೊಂದು ಅಂಗಡಿ 8.91 ಕೋಟಿಗೆ ಹರಾಜಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications