ಭಾರತದಲ್ಲಿ ಮತ್ತೊಂದು ಚೀನಾ ಸ್ಮಾರ್ಟ್ ಫೋನ್ 'ಬ್ಯಾನ್'
ನವದೆಹಲಿ, ಡಿ.17: ಚೀನಾ ಮೂಲದ ಶಿಯೋಮಿ ರೆಡ್ಮಿ ಮೊಬೈಲ್ ಹ್ಯಾಂಡ್ ಸೆಟ್ ಮಾರಾಟ ನಿಷೇಧದ ನಂತರ ಒನ್ ಪ್ಲಸ್ ಒನ್ ಮೊಬೈಲ್ ಮಾರಾಟಕ್ಕೆ ಕುತ್ತುಂಟಾಗಿದೆ. ಗುರ್ ಗಾಂವ್ ಮೂಲದ ಮೈಕ್ರೋ ಮ್ಯಾಕ್ಸ್ ಸಂಸ್ಥೆ ಮನವಿ ಮೇರೆಗೆ ಶೆನ್ ಝೆನ್ ಕಂಪನಿಯ ಒನ್ ಪ್ಲಸ್ ಮಾರಾಟಕ್ಕೆ ನಿರ್ಬಂಧ ಹೇರಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಡಿ.18ರಂದು ಮೈಕ್ರೋ ಮ್ಯಾಕ್ಸ್ ತನ್ನ ಹೊಚ್ಚ ಹೊಸ ಉತ್ಪನ್ನವಾದ ವೈಯು ಸೈನೊಜೆನ್(Cyanogen) ಫೋನ್ ಮಾರುಕಟ್ಟೆಗೆ ಬಿಡುತ್ತಿದೆ.ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಇದೇ ಸೈನೋಜೆನ್ ಒಸ್ ಹೊಂದಿರುವ ಚೀನಾ ಮೂಲದ ಶೆನ್ ಝೆನ್ ಒನ್ ಪ್ಲಸ್ ಟೆಕ್ನಾಲಜಿ ಕೊ. ಲಿ ಸಂಸ್ಥೆಯ ಮೊಬೈಲ್ ಫೋನ್ ಗಳಿದ್ದರೆ ನಮ್ಮ ಮೊಬೈಲ್ ಫೋನ್ ಗಳ ಮಾರಾಟಕ್ಕೆ ತೊಂದರೆಯಾಗುತ್ತದೆ ಎಂದು ಕಾರಣ ನೀಡಿ ಒನ್ ಪ್ಲಸ್ ಮಾರಾಟಕ್ಕೆ ಮಧ್ಯಂತರ ತಡೆ(Injunction) ನೀಡಬೇಕೆಂದು ಮೈಕ್ರೋಮ್ಯಾಕ್ಸ್ ಸಂಸ್ಥೆ ಮನವಿ ಸಲ್ಲಿಸಿತ್ತು. [ರೆಡ್ಮಿ ಸ್ಮಾರ್ಟ್ ಫೋನ್ ಮಾರಾಟಕ್ಕೆ ತಾತ್ಕಾಲಿಕ ಒಪ್ಪಿಗೆ]
ಮೈಕ್ರೋಮ್ಯಾಕ್ಸ್ ಮನವಿ ಪುರಸ್ಕರಿಸಿದ ಹೈಕೋರ್ಟ್ ಜಸ್ಟೀಸ್ ಮನಮೋಹನ್ ಸಿಂಗ್, ಒನ್ ಪ್ಲಸ್ ಸ್ಮಾರ್ಟ್ ಫೋನ್ ಮಾರ್ಕೆಟಿಂಗ್, ಮಾರಾಟ, ಶಿಪ್ಪಿಂಗ್ ಮಾಡುವುದನ್ನು ನಿಲ್ಲಿಸುವಂತೆ ಶೆನ್ ಝೆನ್ ಕಂಪನಿ ಹಾಗೂ ಅಮೆಜಾನ್ ಇಂಡಿಯಾ ಸಂಸ್ಥೆಗೆ ಆದೇಶಿಸಿದೆ. ಮಂಗಳವಾರ (ಡಿ.16) ದಿಂದ ಈ ಆದೇಶ ಜಾರಿಗೆ ಬರಲಿದೆ.

ಡಿ.2 ರಂದು ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್. ಕಾಂ ಮೂಲಕ ಭಾರತಕ್ಕೆ ಪ್ರವೇಶಿಸಿದ ಒನ್ ಪ್ಲಸ್ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ರೆಡ್ಮಿ ಮೊಬೈಲ್ ಗಳಂತೆ ಆಹ್ವಾನದ ಮೇರೆಗೆ ಆನ್ ಲೈನ್ ಮೂಲಕ ಈ ಮೊಬೈಲ್ ಗಳು ಮಾರಾಟವಾಗುತ್ತಿದೆ.
ಅದರೆ, ಕಳೆದ ಫೆಬ್ರವರಿಯಲ್ಲಿ ಸೈಯೊಜನ್ ಸಂಸ್ಥೆ ಶೆನ್ ಝೆನ್ ಕಂಪನಿ ಜೊತೆ ತನ್ನ ಒಪ್ಪಂದವನ್ನು ಮುರಿದುಕೊಂಡು ಮೈಕ್ರೋಮ್ಯಾಕ್ಸ್ ಜೊತೆಗೂಡಿತ್ತು. ಆದರೆ, ಡಿ.2 ರ ಮಾರಾಟಕ್ಕೆ ತೊಂದರೆ ಬಾರದಂತೆ ಒನ್ ಪ್ಲಸ್ ನಿಗಾವಹಿಸಿತ್ತು. ಚೀನಾ ಹೊರತುಪಡೆಸಿ ಸೈಯೋಜನ್ ಸಂಸ್ಥೆ ಒದಗಿಸಿರುವ ಸಾಫ್ಟ್ ವೇರ್, ಟ್ರೇಡ್ ಮಾರ್ಕ್ ವಿಶ್ವದೆಲ್ಲೆಡೆ ಬಳಕೆ ಮಾಡಲು ನಾವು ಅನುಮತಿ ಪಡೆದುಕೊಂಡಿದ್ದೇವೆ ಎಂದು ಶೆನ್ ಝೆನ್ ಒನ್ ಪ್ಲಸ್ ಹೇಳಿತ್ತು. [ಪೇಟೆಂಟ್ ಪ್ರಾಬ್ಲಂ ಚೀನಾ ಮೊಬೈಲ್ ಸೇಲ್ ಬಂದ್!]
ರೆಡ್ಮಿ ಗೂ ಪ್ರಾಬ್ಲಂ: ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸುತ್ತಿರುವ ಶಿಯೋಮಿ ರೆಡ್ಮಿ ಮೊಬೈಲ್ ಗಳು ಪೇಟೆಂಟ್ ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣ ಇತ್ಯರ್ಥವಾಗುವ ತನಕ ಶಿಯೋಮಿ ಮೊಬೈಲ್ ಮಾರಾಟಕ್ಕೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ಹಿಂದೆ ಚೀನಾ ಮೂಲದ ಹ್ಯಾಂಡ್ ಸೆಟ್ ಬಳಸದಂತೆ ಭಾರತೀಯ ವಾಯುಸೇನೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಭದ್ರತಾ ವೈಫಲ್ಯ, [ಚೀನಾ ಮೊಬೈಲ್ ಸಂಸ್ಥೆ ಹೇಳಿದ್ದೇನು?]
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications