ದೀಪಾವಳಿ ಉಡುಗೊರೆ: ಇನ್ಫೋಸಿಸ್ ಸಿಬ್ಬಂದಿಗೆ 20-25% ವೇತನ ಹೆಚ್ಚಳ
ನವದೆಹಲಿ, ಅಕ್ಟೋಬರ್ 20: ಐಟಿ ದೈತ್ಯ ಕಂಪೆನಿ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ವೇತನ ಹೆಚ್ಚಳ ಮಾಡಿದ್ದು, ಬರೋಬ್ಬರಿ ಶೇಕಡ 10ರಿಂದ ಶೇ 25ವರೆಗೂ ಏರಿಕೆ ಮಾಡಿದೆ.
ಹಲವಾರು ಉದ್ಯೋಗಿಗಳು ಸಂಬಳದಲ್ಲಿ ಶೇಕಡಾ 10 ರಿಂದ 13 ರಷ್ಟು ಹೆಚ್ಚಳವನ್ನು ಪಡೆದಿದ್ದರೆ, ಉನ್ನತ ಸಾಧನೆ ಮಾಡಿದವರು 20% ರಿಂದ 25% ಹೆಚ್ಚಳವನ್ನು ಪಡೆದಿದ್ದಾರೆ ಎಂದು ಇನ್ಫೋಸಿಸ್ ದೃಢಪಡಿಸಿದೆ. ಈ ವೇತನದ ಏರಿಕೆ ಉದ್ಯೋಗಿಯ ದರ್ಜೆಯ ಮೇಲೆ ಅವಲಂಬಿತವಾಗಿದೆ ಮತ್ತು ಹಿರಿಯ ಮ್ಯಾನೇಜ್ಮೆಂಟ್ ಅವರ ಸಂಬಳ ಹೆಚ್ಚಿರುವುದರಿಂದ ಕಡಿಮೆ ಹೆಚ್ಚಳವನ್ನು ಪಡೆದಿದೆ ಎಂದು ತಿಳಿಸಿದೆ.
ಉದ್ಯೋಗಿಗಳಿಗೆ 10% ಮತ್ತು 13% ರಷ್ಟು ವೇತನ ಹೆಚ್ಚಿಸಲಾಗಿದೆ. ಉನ್ನತ ಕಾರ್ಯಕ್ಷಮತೆ ಹೊಂದಿರುವವರಿಗೆ ಶೇಕಡ 20-25% ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಇನ್ಫೋಸಿಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮಾನವ ಸಂಪನ್ಮೂಲಗಳ ಗುಂಪಿನ ಮುಖ್ಯಸ್ಥ ಕ್ರಿಶ್ ಶಂಕರ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ವಿಪ್ರೊದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯೆರಿ ಡೆಲಾಪೋರ್ಟೆ, 2023 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಶೇಕಡಾ 85 ರಷ್ಟು ಉದ್ಯೋಗಿಗಳಿಗೆ 100 ಪ್ರತಿಶತ ಸರಾಸರಿ ವೇತನವನ್ನು ಪಾವತಿಸಲಿದೆ. ಎರಡನೇ ತ್ರೈಮಾಸಿಕ ಫಲಿತಾಂಶಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಪನಿಯು 10,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಬಡ್ತಿ ನೀಡಿದೆ ಮತ್ತು ಬ್ಯಾಂಡ್ಗಳಾದ್ಯಂತ ಸಂಬಳವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಈ ಹಣಕಾಸು ವರ್ಷದಲ್ಲಿ 30,000 ಉದ್ಯೋಗಿಗಳ ನೇಮಕಾತಿಯಲ್ಲಿ 14,000 ಮಂದಿಯನ್ನು ಯಶಸ್ವಿಯಾಗಿ ಕಾರ್ಯ ನಿಯೋಜನೆ ಮಾಡಲಾಗಿದೆ ಎಂದು ವಿಪ್ರೋ ಹೇಳಿದೆ. ನಾವು ಎಚ್1 ನಲ್ಲಿ 14,000 ಕ್ಕೂ ಹೆಚ್ಚು ಫ್ರೆಶರ್ಗಳನ್ನು ನೇಮಿಸಿಕೊಂಡಿದ್ದೇವೆ. ಇದು ಕಳೆದ ವರ್ಷ ನಾವು ಸೇರಿಸಿದ 72% ಆಗಿದೆ ಎಂದು ಥಿಯೆರಿ ಡೆಲಾಪೋರ್ಟೆ ಹೇಳಿದರು.
ವಿಪ್ರೊ ಅಲ್ಲದೆ, ಐಟಿ ಪ್ರಮುಖ ಸಂಸ್ಥೆ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳ ಮಾಡಲು ನಿರ್ಧರಿಸಿದೆ. ಕಾಗ್ನಿಜೆಂಟ್ ಉದ್ಯೋಗಿಗಳು ಈ ವರ್ಷ ಸರಾಸರಿ ಶೇಕಡಾ 10 ರಷ್ಟು ಸಂಬಳವನ್ನು ಹೆಚ್ಚಿಸಬಹುದು ಎನ್ನಲಾಗಿದೆ. ನ್ಯೂಜೆರ್ಸಿಯ ಪ್ರಧಾನ ಕಚೇರಿಯ ಸಾಫ್ಟ್ವೇರ್ ಸೇವೆಗಳು ಕಳೆದ ವಾರ ತನ್ನ ಉದ್ಯೋಗಿಗಳಿಗೆ ಹೊಸ ಪರಿಹಾರದೊಂದಿಗೆ ಔಪಚಾರಿಕ ಇ- ಲೆಟರ್ಗಳನ್ನು ನಿರ್ದೇಶಕರ ಮೂಲಕ ಸ್ವೀಕರಿಸುವುದಾಗಿ ತಿಳಿಸಿತ್ತು. ಅಕ್ಟೋಬರ್ನಿಂದ ಹೆಚ್ಚಳವು ಅಸೋಸಿಯೇಟ್ ಮಟ್ಟಗಳಿಗೆ ಜಾರಿಗೆ ಬರಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications