ಮುಕೇಶ್ ಅಂಬಾನಿ ಬಳಿಕ ವಾರೆನ್ ಬಫೆಟ್ರನ್ನೇ ಹಿಂದಿಕ್ಕಿದ ಚೀನಾದ ಝಾಂಗ್ ಶಾನ್ಷನ್
ನವದೆಹಲಿ, ಜನವರಿ 06: ಇತ್ತೀಚೆಗಷ್ಟೇ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಚೀನಾದ ಬಿಲಿಯನೇರ್ ಉದ್ಯಮಿ ಝಾಂಗ್ ಶಾನ್ಷನ್ ಇದೀಗ ಅಮೆರಿಕಾದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ರನ್ನೇ ಮೀರಿಸಿದ್ದಾರೆ.
ಝಾಂಗ್ ಶಾನ್ಷನ್ ಅವರ ಒಟ್ಟು ಸಂಪತ್ತು 2021 ರಲ್ಲಿ 13.5 ಬಿಲಿಯನ್ ಹೆಚ್ಚಳಗೊಂಡು 91.7 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಫೆಟ್ನ ನಿವ್ವಳ ಮೌಲ್ಯ 86.2 ಬಿಲಿಯನ್ ಡಾಲರ್ನಷ್ಟಿದೆ.
ಪತ್ರಿಕೋದ್ಯಮ, ಅಣಬೆ ಕೃಷಿ ಮತ್ತು ಹೆಲ್ತ್ ಕೇರ್ ಉದ್ಯಮಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಝಾಂಗ್ ಸಂಪತ್ತಿನ ನಿವ್ವಳ ಮೌಲ್ಯವು ಈ ವರ್ಷ ಬರೋಬ್ಬರಿ 70.9 ಬಿಲಿಯನ್ ಡಾಲರ್ಗೂ ಹೆಚ್ಚು ಏರಿಕೆ ದಾಖಲಿಸಿದೆ.

ಲಸಿಕೆಗಳು ಮತ್ತು ಹೆಪಟೈಟಿಸ್ ಕಿಟ್ಗಳನ್ನು ತಯಾರಿಸುವ ಬಾಟಲ್ ವಾಟರ್ ಕಂಪನಿ ನಾಂಗ್ಫು ಸ್ಪ್ರಿಂಗ್ ಮತ್ತು ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್ಪ್ರೈಸ್ನ ಅಧ್ಯಕ್ಷರು ಆಗಿದ್ದಾರೆ. ನಾಂಗ್ಫುವಿನ ಷೇರು ಬೆಲೆ ಅದರ ಐಪಿಒ ಬೆಲೆಗಿಂತ ಶೇಕಡಾ 200 ರಷ್ಟು ಏರಿಕೆಯಾಗಿದೆ. ಅದೇ ಸಮಯದಲ್ಲಿ, ಬೀಜಿಂಗ್ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್ಪ್ರೈಸಸ್ ಪಟ್ಟಿಯಿಂದ 25 ಪಟ್ಟು ಗಳಿಸಿದೆ.
ಮುಖೇಶ್ ಅಂಬಾನಿ ಕಳೆದ ವರ್ಷದ ಗಣನೀಯ ಭಾಗವಾಗಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಪ್ರಸ್ತುತ ಆಸ್ತಿ ಸುಮಾರು 76 ಬಿಲಿಯನ್ ಆಗಿದ್ದು, ಇದು 2021 ರ ಆರಂಭದಿಂದ ಇಲ್ಲಿಯವರೆಗೆ ಸುಮಾರು ಒಂದು ಬಿಲಿಯನ್ ಡಾಲರ್ಗಳಷ್ಟು ಕಡಿಮೆಯಾಗಿದೆ.
2020ರಲ್ಲಿ ಒಂದು ಸಮಯದಲ್ಲಿ ಅಂಬಾನಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ತನ್ನ ಸಾರ್ವಕಾಲಿಕ ಗರಿಷ್ಠಕ್ಕಿಂತ ಶೇಕಡಾ 19ರಷ್ಟು ಕುಸಿದಿದೆ. ಕಳೆದ ವರ್ಷ, ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳೀಕರಣವು 200 ಡಾಲರ್ ಬಿಲಿಯನ್ ಮೀರಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications