ವಿಜಯ್ ಮಲ್ಯ ಬಂಧನದ ಅವಶ್ಯಕತೆಯಿಲ್ಲ : ಸಿಬಿಐ ಬಿಗ್ ಬ್ಲಂಡರ್
ವಿಜಯ್ ಮಲ್ಯ ಬಂಧನ ಮಾಡಬೇಕು ಎಂಬ ಸಂದರ್ಭದಲ್ಲಿ ಕೇವಲ ಅವರ ಪ್ರವೇಶ ಹಾಗೂ ನಿರ್ಗಮನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದರೆ ಸಾಕು ಎಂದುಕೊಂಡಿದ್ದು ಸಿಬಿಐ ತಪ್ಪು ತೀರ್ಮಾನವಾಗಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಆದರೆ, ರಹಸ್ಯವಾಗಿ ನಡೆದಿದೆ ಎನ್ನಲಾದ ಸಂವಹನದ ಮಾಹಿತಿಯು ಪತ್ರಿಕೆಯೊಂದಕ್ಕೆ ದೊರೆತಿದೆ. ಸಿಬಿಐನಿಂದ ಮುಂಬೈ ಪೊಲೀಸರಿಗೆ ಲಿಖಿತವಾಗಿಯೇ ಬರೆದ ಪತ್ರದಲ್ಲಿ ಮೊದಲಿಗೆ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ತೀರ್ಮಾನವೇ ತಪ್ಪು ಎಂದಿದೆ. ಅಂದರೆ ದಾಖಲೆಗಳ ಪ್ರಕಾರ ಇರುವಂತೆ, ಮಲ್ಯರ ಬಂಧನ 'ಅಗತ್ಯ ಇಲ್ಲ'.
ಅಕ್ಟೋಬರ್ 16, 2015ರಲ್ಲಿ ಸಿಬಿಐನಿಂದ ಮೊದಲ ಲುಕ್ ಔಟ್ ಹೊರಡಿಸಲಾಯಿತು. ಅದರಲ್ಲಿ "ದೇಶ ಬಿಟ್ಟು ಹೋಗದಂತೆ ತಡೆಯಬೇಕು" ಎಂಬ ಬಾಕ್ಸ್ ಅನ್ನು ತುಂಬಲಾಗಿತ್ತು. ಎರಡನೇ ನೋಟಿಸ್ ಅದೇ ವರ್ಷದ ನವೆಂಬರ್ 24ನೇ ತಾರೀಕು ಹೊರಡಿಸಲಾಗಿದೆ. ಅದೇ ರಾತ್ರಿ ವಿಜಯ್ ಮಲ್ಯ ದೆಹಲಿಗೆ ಬಂದಿಳಿದಿದ್ದಾರೆ.

ಆ ನೋಟಿಸ್ ನಲ್ಲಿ ಮುಂಬೈ ಸ್ಪೆಷಲ್ ಬ್ರ್ಯಾಂಚ್ ಗೊಂದು ಪತ್ರ ಕಳುಹಿಸಲಾಗಿದೆ. ಅದರಲ್ಲಿ '"ಎಲ್ಲಿಗೆ ಹೋಗುತ್ತಾರೆ, ಎಲ್ಲಿಗೆ ಬರುತ್ತಾರೆ" ಎಂಬ ಮಾಹಿತಿ ಇರಲಿ ಎಂಬ ಬಾಕ್ಸ್ ತುಂಬಲಾಗಿದೆ. ಕೆಲ ತಿಂಗಳ ನಂತರ ಅಂದರೆ ಮಾರ್ಚ್ 2, 2016ರಂದು ವಿಜಯ್ ಮಲ್ಯ ದೇಶ ಬಿಟ್ಟು ಹೋಗುತ್ತಾರೆ. ಆದರೆ ಮಲ್ಯ ದೇಶ ಬಿಟ್ಟು ಹೋಗದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗುವಂತೆ ಫೆಬ್ರವರಿ 28ರಂದು ಕಾನೂನು ಸಲಹೆಗಾರರು ತಿಳಿಸಿದರೂ ಮಲ್ಯಗೆ ಸಾಲ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಂದಿಸುವುದಿಲ್ಲ.












Click it and Unblock the Notifications