ಆಪಲ್ ಐಪ್ಯಾಡ್, ವಾಚ್ ಸೀರೀಸ್ 6 ಬಿಡುಗಡೆ: 15 ಸೆಕೆಂಡ್ನಲ್ಲಿ ರಕ್ತದೊಳಗಿನ ಆಮ್ಲಜನಕವನ್ನು ತಿಳಿಸುತ್ತೆ..!
ನವದೆಹಲಿ, ಸೆಪ್ಟೆಂಬರ್ 16: ಜಾಗತಿಕ ಮಾರುಕಟ್ಟೆಯಲ್ಲಿ ಅಗ್ರ ಬ್ರ್ಯಾಂಡ್ ಆಗಿರುವ ಆಪಲ್ ಈವೆಂಟ್ ನಲ್ಲಿ ಆಪಲ್ ವಾಚ್ ಸೀರೀಸ್ 6, ಆಪಲ್ ವಾಚ್ SE, ಐಪ್ಯಾಡ್ 8th gen ಮತ್ತು ಐಪ್ಯಾಡ್ ಏರ್ (2020) ಅನ್ನು ಬಿಡುಗಡೆ ಮಾಡಿದೆ.
ಆಪಲ್ನಿಂದ ಮಂಗಳವಾರ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ತನ್ನ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಗುಣಮಟ್ಟದ ಹಾಗೂ ಹೊಸ ಮಾದರಿಯ ಟೆಕ್ನಾಲಜಿಗೆ ಹೆಸರುವಾಸಿಯಾದ ಆಪಲ್ ಸಂಸ್ಥೆ ಈ ಬಾರಿ ಆಪಲ್ ವಾಚ್ ಸೀರೀಸ್ 6, ಹಾಗೂ ಐಪ್ಯಾಡ್ ಅನ್ನು ಪರಿಚಯಿಸಿದೆ.
ಆಪಲ್ ವಾಚ್ ಸರಣಿ 6 (ಜಿಪಿಎಸ್) 40,900 ರೂ.ಗಳಿಂದ ಪ್ರಾರಂಭವಾಗಿದ್ದರೆ, ಆಪಲ್ ವಾಚ್ ಸರಣಿ 6 (ಜಿಪಿಎಸ್ + ಸೆಲ್ಯುಲಾರ್) 49,900 ರೂಗಳಿಂದ ಪ್ರಾರಂಭವಾಗುತ್ತದೆ.

64 ಜಿಬಿ ಮತ್ತು 256 ಜಿಬಿ ಕಾನ್ಫಿಗರೇಶನ್ಗಳಲ್ಲಿ ಹೊಸ ಐಪ್ಯಾಡ್ ಏರ್, ಐದು ಬಣ್ಣಗಳಲ್ಲಿ ಅಕ್ಟೋಬರ್ನಿಂದ ಆಪಲ್ ಅಧಿಕೃತ ಮರುಮಾರಾಟಗಾರರಲ್ಲಿ ಲಭ್ಯವಿರುತ್ತವೆ. ಐಪ್ಯಾಡ್ ಏರ್ನ ವೈ-ಫೈ ಮಾದರಿಗಳು 54,900 ರೂ.ಗಳ ಆರಂಭಿಕ ಬೆಲೆಯಲ್ಲಿ ಮತ್ತು ವೈ-ಫೈ + ಸೆಲ್ಯುಲಾರ್ ಮಾದರಿಗಳು 66,900 ರೂ.ಗಳಿಂದ ಪ್ರಾರಂಭವಾಗುತ್ತವೆ.
ಕಂಪನಿಯು ರೆಟಿನಾ ಡಿಸ್ಪ್ಲೇನೊಂದಿಗೆ ಎಂಟನೇ ತಲೆಮಾರಿನ 10.2-ಇಂಚಿನ ಐಪ್ಯಾಡ್ ಅನ್ನು ಕೂಡ ಪರಿಚಯಿಸಿತು. ಕೇವಲ 29,900 ರೂಗಳಿಂದ ಪ್ರಾರಂಭವಾಗುವ ಐಪ್ಯಾಡ್ ಪ್ರಬಲ ಎ 12 ಬಯೋನಿಕ್ ಚಿಪ್ ಅನ್ನು ಹೊಂದಿದೆ, ಇದು ನ್ಯೂರಾಲ್ ಎಂಜಿನ್ ಅನ್ನು ಮೊದಲ ಬಾರಿಗೆ ಪ್ರವೇಶ ಐಪ್ಯಾಡ್ಗೆ ತರಲಾಗಿದೆ.
ಇನ್ನೊಂದು ವಿಶೇಷ ಅಂದರೆ ಆಪಲ್ ವಾಚ್ ಸಿರೀಸ್ 6 ಹದಿನೈದು ಸೆಕೆಂಡ್ ನೊಳಗೆ ರಕ್ತದೊಳಗಿನ ಆಮ್ಲಜನಕವನ್ನು ತಿಳಿಯಲು ಸಹಾಯ ಮಾಡುತ್ತದೆ. ಈಗಾಗಲೇ ಆಪಲ್ ನಲ್ಲಿ ಇಸಿಜಿ, ಹಾರ್ಟ್ ರೇಟ್ ಮಾನಿಟರ್, ಫಿಟ್ ನೆಸ್ ಟ್ರ್ಯಾಕರ್ ನಂಥ ವೈಶಿಷ್ಟ್ಯಗಳಿವೆ.
ಇನ್ನು ಆಪಲ್ ವಾಚ್ SE ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಶೈಲಿಯನ್ನ ಹೊಂದಿದೆ. ಇದು ಪತನ ಪತ್ತೆಯಂತಹ ಫೀಚರ್ಸ್ ಅನ್ನು ಹೊಂದಿದೆ. ಇನ್ನು ಈ ವಾಚ್ S5 ಚಿಪ್ಸೆಟ್ ಪ್ರೊಸೆಸರ್ ಅನ್ನು ಹೊಂದಿದೆ. ಇದಲ್ಲದೆ ವಾಚ್ ಸರಣಿ 6 ವಾಟರ್ ಪ್ರೂಪ್ ವ್ಯವಸ್ಥೆಯನ್ನು ಹೊಂದಿದ್ದು, ಹೆಲ್ತ್ ಫೀಚರ್ಸ್ಗಳನ್ನು ಹೊಂದಿದೆ. ಜೊತೆಗೆ ಸ್ಪೋರ್ಟ್ಸ್ ಫೀಚರ್ಸ್ಗಳನ್ನು ಸಹ ಒಳಗೊಂಡಿದೆ.
ಆಪಲ್ ವಾಚ್ ಎಸ್ ಇ (ಜಿಪಿಎಸ್) 29,900 ರುಪಾಯಿಯಾದರೆ, ಜಿಪಿಎಸ್ ಹಾಗೂ ಸೆಲ್ಯುಲಾರ್ ಸೇರಿ 33,900 ರುಪಾಯಿ ಆಗುತ್ತದೆ. ಹೊಸದಾಗಿ ಬಿಡುಗಡೆಯಾದ ಸಾಧನಗಳ ಭಾರತ ಲಭ್ಯತೆಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications