ಭಾರತದ ವಿರುದ್ಧ ಬಾಜಿ ಕಟ್ಟಬೇಡಿ: ಅದಾನಿ ಘಟನೆ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರಾ ಎಚ್ಚರಿಕೆ
ಪ್ರಚಲಿತ ಬೆಳವಣಿಗೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸುವ ಉದ್ಯಮಿ ಆನಂದ್ ಮಹೀಂದ್ರಾ, ಭಾರತದ ಆರ್ಥಿಕತೆ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. 'ಭಾರತದ ವಿರುದ್ಧ ಎಂದಿಗೂ ಬಾಜಿ ಕಟ್ಟಬೇಡಿ" ಎಂದು ಆನಂದ ಮಹೀಂದ್ರಾ ಎಚ್ಚರಿಸಿದ್ದಾರೆ.
ಮುಂಬೈ, ಫೆಬ್ರವರಿ 04: ಹಿಂಡನ್ಬರ್ಗ್ ವರದಿ ಬೆನ್ನಲ್ಲೇ ಅದಾನಿ ಗ್ರೂಪ್ನ ಷೇರು ಮೌಲ್ಯವು ಕುಸಿದಿವೆ. ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಲಕ್ಷಾಂತರ ಕೋಟಿಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಭಾರತದ ಆರ್ಥಿಕತೆಯ ಕುರಿತು ಮಾಧ್ಯಮಗಳಲ್ಲಿ ಹಲವಾರ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ಕಳೆದ ಕೆಲವು ದಿನಗಳಿಂದ ಭಾರತದ ಮಾರುಕಟ್ಟೆ ಮೌಲ್ಯವು ಕುಸಿಯುತ್ತಿದೆ ಎಂದು ತಜ್ಞರು ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಚಲಿತ ಬೆಳವಣಿಗೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸುವ ಉದ್ಯಮ ಆನಂದ್ ಮಹೀಂದ್ರಾ, ಭಾರತದ ಆರ್ಥಿಕತೆ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. 'ಭಾರತದ ವಿರುದ್ಧ ಎಂದಿಗೂ ಬಾಜಿ ಕಟ್ಟಬೇಡಿ" ಎಂದು ಆನಂದ ಮಹೀಂದ್ರಾ ಎಚ್ಚರಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ವ್ಯಾಪಾರ ವಲಯದಲ್ಲಿನ ಪ್ರಸ್ತುತ ಸವಾಲುಗಳು ಜಾಗತಿಕ ಆರ್ಥಿಕ ಶಕ್ತಿಯಾಗಲು ಭಾರತದ ಮಹತ್ವಾಕಾಂಕ್ಷೆಗಳನ್ನು ನಾಶಮಾಡುತ್ತಿವೆಯೇ ಎಂದು ಜಾಗತಿಕ ಮಾಧ್ಯಮಗಳು ಊಹಿಸುತ್ತಿವೆ. ನಾವು ಭೂಕಂಪಗಳು, ಬರಗಳು, ಆರ್ಥಿಕ ಹಿಂಜರಿತಗಳು, ಯುದ್ಧಗಳು, ಭಯೋತ್ಪಾದಕ ದಾಳಿಗಳನ್ನು ಎದುರಿದ್ದೇವೆ. ಇವುಗಳನ್ನು ನೋಡಿಕೊಂಡೇ ನಾನು ಸಾಕಷ್ಟು ಕಾಲ ಬದುಕಿದ್ದೇನೆ. ನಾನು ಹೇಳುವುದೊಂದೇ, ಭಾರತದ ವಿರುದ್ಧ ಎಂದಿಗೂ ಬಾಜಿ ಕಟ್ಟಬೇಡಿ' ಎಂದು ಅವರು ತಿಳಿಸಿದ್ದಾರೆ.
Global media is speculating whether current challenges in the business sector will trip India’s ambitions to be a global economic force. I’ve lived long enough to see us face earthquakes, droughts, recessions, wars, terror attacks. All I will say is: never, ever bet against India
— anand mahindra (@anandmahindra) February 4, 2023
ಅದಾನಿ ಗ್ರೂಪ್ನ ಮಾರುಕಟ್ಟೆ ಬಂಡವಾಳೀಕರಣವು ಸುಮಾರು ₹ 1 ಲಕ್ಷ ಕೋಟಿಗಳಷ್ಟು ಕುಸಿದಿದೆ. US ಕಿರು ಮಾರಾಟಗಾರ ಹಿಂಡೆನ್ಬರ್ಗ್ ರಿಸರ್ಚ್ ಜನವರಿ 24 ರಂದು ಕಡಲಾಚೆಯ ತೆರಿಗೆ ಮತ್ತು ಹೆಚ್ಚಿನ ಸಾಲದಲ್ಲಿನ ಗ್ರೂಪ್ನ ದುಷ್ಕೃತ್ಯಗಳ ಕುರಿತು ವರದಿಯನ್ನು ಬಿಡುಗಡೆ ಮಾಡಿದ ನಂತರ ಗಮನಾರ್ಹ ಷೇರು ಮಾರುಕಟ್ಟೆ ಕುಸಿದಿದೆ. 'ದಶಕಗಳ ಅವಧಿಯಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ' ಅದಾನಿ ಗ್ರೂಪ್ ತೊಡಗಿಸಿಕೊಂಡಿದೆ ಎಂದು ಹಿಂಡನ್ಬರ್ಗ್ ರಿಪೋರ್ಟ್ ಹೇಳಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಗ್ರೂಪ್ನ ಎಲ್ಲಾ 10 ಸ್ಟಾಕ್ಗಳು ಕುಸಿದಿವೆ. ಸಂಘಟಿತ ಕಂಪನಿಯ ಸುಮಾರು $120 ಬಿಲಿಯನ್ ಅನ್ನು ಇದು ನಷ್ಟಗೊಳಿಸಿದೆ.

ಅದಾನಿ ಷೇರುಗಳಲ್ಲಿ ನಡೆಯುತ್ತಿರುವ ಕುಸಿತ, ದೇಶದ ಮಾರುಕಟ್ಟೆ ಬಂಡವಾಳವು $3.2 ಟ್ರಿಲಿಯನ್ಗಿಂತ ಕೆಳಗಿಳಿದ ಕಾರಣ ಭಾರತವನ್ನು ವಿಶ್ವದ ಅಗ್ರ ಐದು ಅತಿ ದೊಡ್ಡ ಇಕ್ವಿಟಿ ಮಾರುಕಟ್ಟೆ ಪಟ್ಟಿಯಿಂದ ಹೊರಗೆ ಹಾಕಲ್ಪಟ್ಟಿದೆ. ಬ್ಲೂಮ್ಬರ್ಗ್ ಪ್ರಕಾರ, ಇದು ಮುಂದುವರಿಯುವ ನಿರೀಕ್ಷೆಯಿದೆ ಮತ್ತು ಭಾರತವು ಪಟ್ಟಿಯಿಂದ ಮತ್ತಷ್ಟು ಕೆಳಕ್ಕೆ ಇಳಿಯಬಹುದು ಎಂದು ಹೇಳಲಾಗುತ್ತಿದೆ.

ಅದೇ ರೀತಿ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತೀಯ ಆರ್ಥಿಕತೆಯಲ್ಲಿ 2022 ರಲ್ಲಿ 6.8% ರಿಂದ 2023 ರಲ್ಲಿ 6.1% ಕ್ಕೆ ಕುಸಿತವನ್ನು ಊಹಿಸಿದೆ. ಆದಾಗ್ಯೂ, 2024 ರ ಆರ್ಥಿಕ ವರ್ಷದಲ್ಲಿ 0.7% ರಷ್ಟು ಬೆಳವಣಿಗೆಯನ್ನು ಅಂತರರಾಷ್ಟ್ರೀಯ ಸಂಸ್ಥೆಯು ಊಹಿಸಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications