Get Updates
Get notified of breaking news, exclusive insights, and must-see stories!

ಭಾರತದ ಜನರೇ ಅದರ ನಿಜವಾದ ಶಕ್ತಿ: ಅದಾನಿ ಎಂಟರ್‌ಪ್ರೈಸಸ್‌ ನಿರ್ದೇಶಕ ಪ್ರಣವ್ ಅದಾನಿ

2047ರ ವೇಳೆಗೆ ಭಾರತವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಹಿರಂಗಪಡಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರ ಅಥವಾ ವಿಕಸಿತ ಭಾರತ ಆಗಲು ಸಹಾಯ ಮಾಡಲು ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಪರಿವರ್ತನೆಗೆ ಅದಾನಿ ಎಂಟರ್‌ಪ್ರೈಸಸ್‌ನ ನಿರ್ದೇಶಕ ಪ್ರಣವ್ ಅದಾನಿ ಕರೆ ನೀಡಿದರು. ನವದೆಹಲಿಯಲ್ಲಿ ನಡೆದ ಚಿಂತನ್ ರಿಸರ್ಚ್ ಫೌಂಡೇಶನ್‌ನ ಮೊದಲ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೊತೆಗೆ ಭಾರತದ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಕೂಡ ಅವರು ಪ್ರತಿಧ್ವನಿಸಿದರು.

ಭಾರತವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡು 2047ರ ವೇಳೆಗೆ ವಿಕಸಿತ ಭಾರತ ಆಗಲು ಅಗತ್ಯವಿರುವ ಬದಲಾವಣೆಯ ಪ್ರಮಾಣವು ಅಪಾರವಾಗಿದೆ. ಈ ಮೈಲಿಗಲ್ಲು ಸಾಧಿಸಲು ನಾವೀನ್ಯತೆ, ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯ, ಇಂಧನ, ವ್ಯಾಪಾರ ಮತ್ತು ನೀತಿಯ ಮೇಲೆ ಹೊಸತನದ ಅಗತ್ಯವಿದೆ ಎಂದು ಪ್ರಣವ್ ಅದಾನಿ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದರು.

Adani Director Says Indian 1 4 Billion People Are Its Greatest Economic Strength

ಹವಾಮಾನ ಬದಲಾವಣೆ, ಇಂಧನ ಮತ್ತು ವ್ಯಾಪಾರಕ್ಕೆ ಒತ್ತು

ಹವಾಮಾನ ಬದಲಾವಣೆ, ಸಮಾನ ಇಂಧನ ಪರಿವರ್ತನೆ, ಜಾಗತಿಕ ವ್ಯಾಪಾರ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ಭೌಗೋಳಿಕ ರಾಜಕೀಯ ಬದಲಾವಣೆಗಳಂತಹ ನಿರ್ಣಾಯಕ ಸಮಸ್ಯೆಗಳನ್ನು ಚಿಂತನ್ ಸಂಶೋಧನಾ ಪ್ರತಿಷ್ಠಾನವು ವೇದಿಕೆಯಾಗಿ ನಿಭಾಯಿಸುತ್ತಿದೆ. ಕಳೆದ ಮೂರು ದಶಕಗಳಿಂದ ಅದಾನಿ ಗ್ರೂಪ್ ಭಾರತದ ಮೂಲಸೌಕರ್ಯ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿ ಪ್ರಭಾವಶಾಲಿ ಸಂಶೋಧನೆ ಮತ್ತು ಸ್ವತಂತ್ರ ನೀತಿ ಶಿಫಾರಸುಗಳ ಮೂಲಕ ಚಿಂತನ್ ರಿಸರ್ಚ್ ಫೌಂಡೇಶನ್‌ ಕೊಡುಗೆ ನೀಡುತ್ತಿದೆ ಎಂದು ಅದಾನಿ ತಿಳಿಸಿದರು.

ಸುದ್ದಿಸಂಸ್ಥೆ ಎಎನ್‌ಐ ಜೊತೆ ಸಂವಾದದಲ್ಲಿ ಮಾತನಾಡಿರುವ ಪ್ರಣವ್ ಅದಾನಿ ಅವರು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಜನಸಂಖ್ಯಾ ಬಲದ ಬಗ್ಗೆ ಬಲವಾದ ಆಶಾವಾದವನ್ನು ವ್ಯಕ್ತಪಡಿಸಿದರು. ಭಾರತವು ಪ್ರಸ್ತುತ ಉತ್ತಮ ಸ್ಥಾನದಲ್ಲಿದೆ. ನಮ್ಮ 1.4 ಶತಕೋಟಿ ಜನಸಂಖ್ಯೆ ನಮ್ಮ ಅತಿದೊಡ್ಡ ಆಸ್ತಿ ಎಂದು ಅವರು ಹೇಳಿದರು. ಈ ಕಾರ್ಯಕ್ರಮದ ಭಾಷಣಕಾರರನ್ನು ಉಲ್ಲೇಖಿಸಿ ನಮ್ಮ ಜನಸಂಖ್ಯೆಯ ಕೇವಲ ಶೇ 50ರಷ್ಟು ಜನರು ಪ್ರಸ್ತುತ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ. ಉಳಿದ ಅರ್ಧ ಜನರು ಕೂಡ ಜಿಡಿಪಿಯಲ್ಲಿ ತೊಡಗಿಸಿಕೊಂಡ ನಂತರವೇ ಭಾರತದ ನಿಜವಾದ ಬೆಳವಣಿಗೆಯ ಕಥೆ ತೆರೆದುಕೊಳ್ಳುತ್ತದೆ. ಒಂದು ಗುಂಪಾಗಿ ನಾವು ತುಂಬಾ ಆಶಾವಾದಿಗಳಾಗಿದ್ದೇವೆ ಎಂದು ಶ್ಲಾಘಿಸಿದ್ದಾರೆ.

ಭಾರತೀಯ ಪ್ರದೇಶಗಳ ಸಮಗ್ರ ಅಭಿವೃದ್ಧಿ

ರಾಷ್ಟ್ರ ರಾಜಧಾನಿಯನ್ನು ಮೀರಿ ನೀತಿ ಚರ್ಚೆಗಳನ್ನು ಸ್ಥಳಾಂತರಿಸುವ ಮತ್ತು ಪ್ರಾದೇಶಿಕ ಅಭಿವೃದ್ಧಿಯತ್ತ ಗಮನಹರಿಸುವ ಅಗತ್ಯವಿದೆ ಎಂದು ಅದಾನಿ ಹೇಳಿದರು. ದೆಹಲಿಯನ್ನು ಮೀರಿ ನಾವು ಹೋಗಬೇಕು. ಭಾರತ ಕೇವಲ ಒಂದು ನಗರವಲ್ಲ, ಇದು ವೈವಿಧ್ಯಮಯ ಮತ್ತು ಕ್ರಿಯಾತ್ಮಕ ರಾಷ್ಟ್ರ. ನಮ್ಮ ಸಂಶೋಧನೆಯು ರಾಂಚಿ, ರಾಯ್‌ಪುರ, ಭುವನೇಶ್ವರ, ಭೋಪಾಲ್, ಈಶಾನ್ಯ ಮತ್ತು ಕರಾವಳಿ ಪ್ರದೇಶಗಳಂತಹ ನಗರಗಳಿಗೆ ವಿಸ್ತರಿಸಬೇಕು. ಈ ಮೂಲಕ ತಳಮಟ್ಟದ ಸಂಶೋಧನೆ, ಸ್ಥಳೀಯ ನೀತಿ ರೂಪಿಸುವವರನ್ನು ತೊಡಗಿಸಿಕೊಳ್ಳುವಿಕೆ ಮತ್ತು ರಾಷ್ಟ್ರವ್ಯಾಪಿ ಕಾರ್ಯಕ್ರಮಗಳು ಪ್ರಾದೇಶಿಕ ಸಮಸ್ಯೆಗಳನ್ನು ರಾಷ್ಟ್ರೀಯ ಗಮನಕ್ಕೆ ತರಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ನೀತಿ ನಿರೂಪಣೆಗಳು ಮತ್ತು ಭಾರತದ ಪಾತ್ರ

ಭಾರತವನ್ನು ಮೀರಿ ಚಿಂತನ್ ರಿಸರ್ಚ್ ಫೌಂಡೇಶನ್‌ ತನ್ನ ನೀತಿ ಒಳನೋಟಗಳನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ವಿಸ್ತರಿಸಬೇಕು ಎಂದು ಪ್ರಣವ್ ಅದಾನಿ ಕರೆ ನೀಡಿದರು. ಜಾಗತಿಕವಾಗಿ ದಕ್ಷಿಣವು ಬೆಳೆಯುತ್ತಿದ್ದಂತೆ ಭಾರತವು ತನ್ನ ಅಭಿವೃದ್ಧಿ ಕಥೆಯನ್ನು ಹಂಚಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಭಾರತದ ಅನುಭವದ ಆಧಾರದ ಮೇಲೆ ಜಾಗತಿಕವಾಗಿ ನೀತಿ ನಿರೂಪಣೆಗಳನ್ನು ರೂಪಿಸಲು ಫೌಂಡೇಷನ್‌ ಸಹಾಯ ಮಾಡುತ್ತದೆ ಎಂದರು.

ವಿದೇಶದಲ್ಲಿರುವ ಅದಾನಿ ಗ್ರೂಪ್‌ ಆಸ್ತಿಗಳು ಸುರಕ್ಷಿತ

ಈ ಕಾರ್ಯಕ್ರಮದ ಹೊರತಾಗಿಯೂ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಅದಾನಿ ಗ್ರೂಪ್‌ನ ಅಂತರರಾಷ್ಟ್ರೀಯ ಆಸ್ತಿಗಳ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಅವರು, ಸದ್ಯದ ಪರಿಸ್ಥಿತಿ ಬಗ್ಗೆ ಆತಂಕಗಳಿವೆ. ಆದರೆ ವಿದೇಶದಲ್ಲಿರುವ ನಮ್ಮ ಎಲ್ಲ ಆಸ್ತಿಗಳು ಸುರಕ್ಷಿತವಾಗಿವೆ. ಆದರೆ ಯಾವುದೇ ಚಿಂತಿಸುವ ಅಗತ್ಯವಿಲ್ಲ ಎಂದೂ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+