2000 ರುಪಾಯಿ ನೋಟುಗಳ ಚಲಾವಣೆ ಪ್ರಮಾಣದಲ್ಲಿ ಇಳಿಕೆ
2000 ರುಪಾಯಿ ನೋಟುಗಳ ಮೇಲೆ ಜನರ ಅವಲಂಬನೆ ಕಡಿಮೆ ಮಾಡುವ ಪ್ರಯತ್ನಗಳು ಆಗುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗುರುವಾರದಂದು ಬಿಡುಗಡೆ ಆದ FY19ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿ ನಮ್ಮೆದುರು ಇದೆ. 2016ರ ನವೆಂಬರ್ ನಲ್ಲಿ 2000 ರುಪಾಯಿ ನೋಟು ಬಿಡುಗಡೆ ಆದ ಮೇಲೆ ಅದರ ಚಲಾವಣೆಯ ಪ್ರಮಾಣ ಹಾಗೂ ಮೌಲ್ಯ ಎರಡೂ FY19ರಲ್ಲಿ ಕಡಿಮೆ ಆಗಿದೆ.
FY18ರಲ್ಲಿ 6,72,600 ಕೋಟಿ ಇದ್ದ ಮೌಲ್ಯವು FY19ರಲ್ಲಿ 6,58,200 ಕೋಟಿಗೆ ಕುಸಿದಿದೆ. ಅರ್ಥಾತ್, ಅತಿ ಹೆಚ್ಚು ಮೌಲ್ಯದ ನೋಟು 14,400 ಕೋಟಿ ಮೌಲ್ಯದಷ್ಟು ಚಲಾವಣೆಯಿಂದ ಕಳೆದ ವರ್ಷ ಹಿಂದಕ್ಕೆ ಹೋಗಿದೆ. ಆದರೆ ಇದೇನು ನಕಲಿ ನೋಟುಗಳೇ ಅಥವಾ ಬೇರೆ ಕಾರಣಗಳು ಇವೆಯೇ ಗೊತ್ತಿಲ್ಲ.
ಅದೇ ರೀತಿ 2000 ರುಪಾಯಿ ನೋಟುಗಳು FY18ರಲ್ಲಿ 3,363 ಮಿಲಿಯನ್ ಸಂಖ್ಯೆಯಲ್ಲಿದ್ದವು. ಅದೇ FY19ರಲ್ಲಿ 3,291 ಮಿಲಿಯನ್ ಗೆ ಇಳಿಯುವ ಮೂಲಕ 2 ಪರ್ಸೆಂಟ್ ಕುಸಿತ ಕಂಡಿದೆ. ಇದಕ್ಕೆ ವಿರುದ್ಧವಾಗಿ 500 ರುಪಾಯಿ ನೋಟುಗಳನ್ನು FY18ಕ್ಕೆ ಹೋಲಿಸಿದರೆ FY19ರಲ್ಲಿ 39 ಪರ್ಸೆಂಟ್ ಏರಿಕೆ ಆಗಿದೆ. ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳ ಮಿಶ್ರಣದ ಲೆಕ್ಕಾಚಾರದಲ್ಲಿ ಐನೂರು ರುಪಾಯಿ ನೋಟುಗಳು ಶೇ 43ರಿಂದ ಶೇ 51ಕ್ಕೆ ಏರಿಕೆ ಆಗಿದೆ.

2000 ರುಪಾಯಿ ನೋಟುಗಳು ಒಟ್ಟಾರೆಯಾಗಿ 50% ನಷ್ಟು ಇದ್ದವು FY17ರಲ್ಲಿ. ಆ ನಂತರ ಆ ಪ್ರಮಾಣ FY18ರಲ್ಲಿ 37 ಪರ್ಸೆಂಟ್ ಗೆ ಕುಸಿದರೆ, FY19ರಲ್ಲಿ 31 ಪರ್ಸೆಂಟ್ ಗೆ ಇಳಿಯಿತು. ಇದರರ್ಥ ಏನೆಂದರೆ ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳ ಲೆಕ್ಕಾಚಾರ ಪ್ರಮಾಣ ನೋಡಿದರೂ ಎರಡು ಸಾವಿರ ರುಪಾಯಿ ನೋಟುಗಳನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗುತ್ತಿದೆ.
ಎರಡು ಸಾವಿರ ರುಪಾಯಿ ನೋಟುಗಳನ್ನು ಸಂಗ್ರಹ ಮಾಡುವುದು ಸಲೀಸು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗುತ್ತಿದೆ ಎಂಬ ಮಾತಿದೆ. ಆ ಕಾರಣಕ್ಕೆ ನೂರು ಮತ್ತು ಇನ್ನೂರು ರುಪಾಯಿ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚು ಮಾಡುತ್ತಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications