10 ಕೋಟಿ ಭಾರತೀಯರ ಕಾರ್ಡ್ ಮಾಹಿತಿ ಸೋರಿಕೆ
ಬೆಂಗಳೂರು, ಜನವರಿ 5: 10 ಕೋಟಿಗೂ ಅಧಿಕ ಭಾರತೀಯರ ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿಗಳು ಸೋರಿಕೆಯಾಗಿದ್ದು, ಡಾರ್ಕ್ ವೆಬ್ ನಲ್ಲಿ ಬಿಕರಿಯಾಗುತ್ತಿವೆ ಎಂದು ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಶೋಧಕ ರಾಜಶೇಖರ್ ರಜಾಹರಿಯಾ ಅವರ ಸಂಸ್ಥೆ ವರದಿ ಮಾಡಿದೆ.
ಬೆಂಗಳೂರು ಮೂಲದ ಡಿಜಿಟಲ್ ಪೇಮೆಂಟ್ ಗೇಟ್ ವೇ ಜಸ್ ಪೇ (JusPay) ಸಂಸ್ಥೆಯ ಸರ್ವರ್ ಗಳಿಗೆ ಕನ್ನ ಹಾಕಿ ಮಾಹಿತಿಯನ್ನು ಕದಿಯಲಾಗಿದ್ದು, ಡಾರ್ಕ್ ವೆಬ್ ಗಳಲ್ಲಿ ಮಾರಾಟಕ್ಕಿಡಲಾಗಿದೆ ಎಂದು ರಾಜಶೇಖರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ ಪೇ ಸಂಸ್ಥೆ ವಕ್ತಾರರು, ಆಗಸ್ಟ್ 18, 2020ರಂದು ನಮ್ಮ ಸಂಸ್ಥೆ ಸರ್ವರ್ ಗಳ ಮೇಲೆ ದಾಳಿಯಾಗಿದ್ದು ನಿಜ. ಆದರೆ, ಯಾವುದೇ ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರ, ಹಣಕಾಸು ವ್ಯವಹಾರ ಮಾಹಿತಿ ಸೋರಿಕೆಯಾಗಿಲ್ಲ, ಒಂದು ವೇಳೆ ಸೈಬರ್ ದಾಳಿಯಾಗಿ ಮಾಹಿತಿ ಸೋರಿಕೆಯಾಗಿದ್ದರೂ 10ಕೋಟಿ ಪ್ರಮಾಣದಲ್ಲಂತೂ ಸಾಧ್ಯವಿಲ್ಲ ಎಂದಿದ್ದಾರೆ.

ಕೆಲವು ಇಮೇಲ್ ಸಂದೇಶ, ಫೋನ್ ನಂಬರ್ ಕದ್ದಿದ್ದಾರೆ. ಆದರೆ, ಈ ಬಗ್ಗೆ ಅಲರ್ಟ್ ಸಿಕ್ಕ ತಕ್ಷಣವೇ ಆ ಗ್ರಾಹಕರಿಗೆ ತಿಳಿಸಿ ಸೂಕ್ತ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಆದರೆ, ರಾಜಶೇಖರ್ ಅವರು ತಮ್ಮ ಮಾಹಿತಿ ನಿಖರವಾಗಿದ್ದು, ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೂಲಕ ಹಣಕಾಸು ವ್ಯವಹಾರ ನಡೆದಿದ್ದು, ಡಾರ್ಕ್ ವೆಬ್ ನಲ್ಲಿ ಮಾಹಿತಿ ಖರೀದಿ ನಡೆದಿದೆ.
Payment Card Industry Data Security Standard ಬಳಸುವ ಜಸ್ ಪೇ ಮಾಹಿತಿ ಕದಿಯುವುದು ಸುಲಭವಾಗಿದ್ದು, ಕಾರ್ಡ್ ಫಿಂಗರ್ ಪ್ರಿಂಟ್ ರೂಪಿಸಲು ಹ್ಯಾಶ್ ಅಲ್ಗಾರಿಥಂ ಬಳಸಿ ಸುರಕ್ಷತಾ ಅಡೆ ತಡೆಗಳನ್ನು ಡಿಕ್ರಿಪ್ಟ್ ಮಾಡಬಹುದಾಗಿದೆ. ಹೀಗಾಗಿ, ಮುಚ್ಚಲ್ಪಟ್ಟ ನಂಬರ್ ಗಳನ್ನು ಪೂರ್ತಿಯಾಗಿ ಕಾಣುವಂತೆ ಮಾಡಬಹುದು ಎಂದಿದ್ದಾರೆ. ಆದರೆ, 16 ಅಂಕಿಗಳ ಕಾರ್ಡ್ ನಂಬರ್ ಸೋರಿಕೆಯಾಗಿಲ್ಲ ಎಂದು ಜಸ್ ಪೇ ಹೇಳಿದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ











Click it and Unblock the Notifications