10 ಕೋಟಿ ಭಾರತೀಯರ ಕಾರ್ಡ್ ಮಾಹಿತಿ ಸೋರಿಕೆ
ಬೆಂಗಳೂರು, ಜನವರಿ 5: 10 ಕೋಟಿಗೂ ಅಧಿಕ ಭಾರತೀಯರ ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿಗಳು ಸೋರಿಕೆಯಾಗಿದ್ದು, ಡಾರ್ಕ್ ವೆಬ್ ನಲ್ಲಿ ಬಿಕರಿಯಾಗುತ್ತಿವೆ ಎಂದು ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಶೋಧಕ ರಾಜಶೇಖರ್ ರಜಾಹರಿಯಾ ಅವರ ಸಂಸ್ಥೆ ವರದಿ ಮಾಡಿದೆ.
ಬೆಂಗಳೂರು ಮೂಲದ ಡಿಜಿಟಲ್ ಪೇಮೆಂಟ್ ಗೇಟ್ ವೇ ಜಸ್ ಪೇ (JusPay) ಸಂಸ್ಥೆಯ ಸರ್ವರ್ ಗಳಿಗೆ ಕನ್ನ ಹಾಕಿ ಮಾಹಿತಿಯನ್ನು ಕದಿಯಲಾಗಿದ್ದು, ಡಾರ್ಕ್ ವೆಬ್ ಗಳಲ್ಲಿ ಮಾರಾಟಕ್ಕಿಡಲಾಗಿದೆ ಎಂದು ರಾಜಶೇಖರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ ಪೇ ಸಂಸ್ಥೆ ವಕ್ತಾರರು, ಆಗಸ್ಟ್ 18, 2020ರಂದು ನಮ್ಮ ಸಂಸ್ಥೆ ಸರ್ವರ್ ಗಳ ಮೇಲೆ ದಾಳಿಯಾಗಿದ್ದು ನಿಜ. ಆದರೆ, ಯಾವುದೇ ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರ, ಹಣಕಾಸು ವ್ಯವಹಾರ ಮಾಹಿತಿ ಸೋರಿಕೆಯಾಗಿಲ್ಲ, ಒಂದು ವೇಳೆ ಸೈಬರ್ ದಾಳಿಯಾಗಿ ಮಾಹಿತಿ ಸೋರಿಕೆಯಾಗಿದ್ದರೂ 10ಕೋಟಿ ಪ್ರಮಾಣದಲ್ಲಂತೂ ಸಾಧ್ಯವಿಲ್ಲ ಎಂದಿದ್ದಾರೆ.

ಕೆಲವು ಇಮೇಲ್ ಸಂದೇಶ, ಫೋನ್ ನಂಬರ್ ಕದ್ದಿದ್ದಾರೆ. ಆದರೆ, ಈ ಬಗ್ಗೆ ಅಲರ್ಟ್ ಸಿಕ್ಕ ತಕ್ಷಣವೇ ಆ ಗ್ರಾಹಕರಿಗೆ ತಿಳಿಸಿ ಸೂಕ್ತ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಆದರೆ, ರಾಜಶೇಖರ್ ಅವರು ತಮ್ಮ ಮಾಹಿತಿ ನಿಖರವಾಗಿದ್ದು, ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೂಲಕ ಹಣಕಾಸು ವ್ಯವಹಾರ ನಡೆದಿದ್ದು, ಡಾರ್ಕ್ ವೆಬ್ ನಲ್ಲಿ ಮಾಹಿತಿ ಖರೀದಿ ನಡೆದಿದೆ.
Payment Card Industry Data Security Standard ಬಳಸುವ ಜಸ್ ಪೇ ಮಾಹಿತಿ ಕದಿಯುವುದು ಸುಲಭವಾಗಿದ್ದು, ಕಾರ್ಡ್ ಫಿಂಗರ್ ಪ್ರಿಂಟ್ ರೂಪಿಸಲು ಹ್ಯಾಶ್ ಅಲ್ಗಾರಿಥಂ ಬಳಸಿ ಸುರಕ್ಷತಾ ಅಡೆ ತಡೆಗಳನ್ನು ಡಿಕ್ರಿಪ್ಟ್ ಮಾಡಬಹುದಾಗಿದೆ. ಹೀಗಾಗಿ, ಮುಚ್ಚಲ್ಪಟ್ಟ ನಂಬರ್ ಗಳನ್ನು ಪೂರ್ತಿಯಾಗಿ ಕಾಣುವಂತೆ ಮಾಡಬಹುದು ಎಂದಿದ್ದಾರೆ. ಆದರೆ, 16 ಅಂಕಿಗಳ ಕಾರ್ಡ್ ನಂಬರ್ ಸೋರಿಕೆಯಾಗಿಲ್ಲ ಎಂದು ಜಸ್ ಪೇ ಹೇಳಿದೆ.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications