ಸರ್ವತೋಮುಖ ಅಭಿವೃದ್ಧಿ ಬಿಜೆಪಿ ಸರ್ಕಾರದ ಮೂಲಕ ಈಡೇರುತ್ತಿದೆ: ಪ್ರಭು ಚೌಹಾಣ್
ಬೀದರ್, ಅಕ್ಟೋಬರ್, 18: ಕರ್ನಾಟಕದಲ್ಲಿ ಸರ್ವರಿಗೂ ನ್ಯಾಯ ಮತ್ತು ಅಭಿವೃದ್ಧಿ ಪರ್ವವು ಬಿಜೆಪಿ ಸರ್ಕಾರದ ಮೂಲಕ ಈಡೇರುತ್ತಿದೆ ಎಂದು ಸಚಿವ ಪ್ರಭು ಚೌಹಾಣ್ ಬೀದರ್ನಲ್ಲಿ ತಿಳಿಸಿದರು.
ಬೀದರ್ ಜಿಲ್ಲೆಯ ಔರಾದ್ನಲ್ಲಿ 'ಜನಸಂಕಲ್ಪ'ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾರೆ. ಸುಮಾರು 4 ದಶಕಗಳಲ್ಲಿ ಈ ಬೇಡಿಕೆ ಇತ್ತು. ಅದನ್ನು ಬೊಮ್ಮಾಯಿಯವರು ಈಡೇರಿಸಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ರಾಜ್ಯವು ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಅನೇಕ ಯೋಜನೆಗಳನ್ನು ಮುಖ್ಯಮಂತ್ರಿ ಅವರು ಕೈಗೊಂಡಿದ್ದಾರೆ. ಮಹಿಳಾ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗರಿಷ್ಠ ಅನುದಾನವನ್ನು ಔರಾದ್ಗೆ ನೀಡಿವೆ. ಪ್ರತಿ ಮನೆಗೆ ನಲ್ಲಿಯ ಮೂಲಕ ನೀರು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಹುಮನಾಬಾದ್ ತಾಲೂಕಿನಲ್ಲಿ ಭೂಕಂಪನದ ಅನುಭವ; ಜನರಿಗೆ ಆತಂಕ
ರಾಜ್ಯದ
ಅಭಿವೃದ್ಧಿಗೆ
ಸದಾ
ಸಿದ್ಧ
ಕಿಸಾನ್
ಸಮ್ಮಾನ್
ಸೇರಿ
ಅನೇಕ
ಯೋಜನೆಗಳ
ಮೂಲಕ
ಕೇಂದ್ರ
ಸರ್ಕಾರವು
ದೇಶದ
ಎಲ್ಲ
ಸಮುದಾಯದವರ
ಅಭಿವೃದ್ಧಿಗೆ
ಶ್ರಮಿಸಿದೆ.
ರಾಜ್ಯ
ಸರ್ಕಾರವೂ
ಈ
ನಿಟ್ಟಿನಲ್ಲಿ
ಉತ್ತಮವಾಗಿ
ಕಾರ್ಯನಿರ್ವಹಿಸುತ್ತಿದೆ.
ಕಾರಂಜಾದಿಂದ
ಔರಾದ್
ಪಟ್ಟಣಕ್ಕೆ
ಕುಡಿಯುವ
ನೀರಿನ
ಯೋಜನೆ
ಮಂಜೂರು
ಮಾಡಿಕೊಡಿ
ಎಂದು
ಅವರು
ಮನವಿ
ಮಾಡಿದ್ದರು.
ಪುರಸಭೆಯನ್ನಾಗಿ
ಪ್ರಕಟಿಸಿ
ಎಂದು
ವಿನಂತಿಸಿದ್ದರು.
ಮರಾಠ
ಮೀಸಲಾತಿಯನ್ನು
2
ಎಗೆ
ಬದಲಿಸಿ
ಎಂದು
ಮನವಿ
ಮಾಡಿದ್ದರು.
ಗೋಶಾಲೆಗಳಿಗೆ
ಸಂಬಂಧಿಸಿದಂತೆ
100
ಕೋಟಿ
ರೂಪಾಯಿ
ಅನುದಾನ
ನೀಡಲಾಗಿದೆ
ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ್ ಖೂಬಾ, ರಾಜ್ಯ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌಹಾಣ್, ಶಂಕರ ಪಾಟೀಲ್ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.