ಕಡುಬಡವನ ಖಾತೆಗೆ 1 ಲಕ್ಷ ರೂ! ಮೋದಿ ಮಹಿಮೆ ಎಂದುಕೊಂಡರೆ ಆಗಿದ್ದೇ ಬೇರೆ!
ಭೋಪಾಲ್, ನವೆಂಬರ್ 22: ಕಪ್ಪುಹಣವನ್ನು ವಾಪಸ್ ತಂದು ಎಲ್ಲ ಭಾರತೀಯರ ಬ್ಯಾಂಕ್ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಚುನಾವಣೆಯ ಸಮಯದಲ್ಲಿ ವಿಪಕ್ಷಗಳಿಗೆ ಕಾಲೆಳೆಯುವ ಪ್ರಮುಖ ವಿಷಯವಾಗಿತ್ತು.
ತಮ್ಮ ಖಾತೆಗೆ 15 ಲಕ್ಷ ಬರುತ್ತದೆ ಎಂದು ಎಷ್ಟು ಜನ ನಂಬಿದ್ದರೂ, ಬಿಟ್ಟಿದ್ದರೋ ಗೊತ್ತಿಲ್ಲ. ಆದರೆ ರಾಜಸ್ಥಾನದ, ಭೊಪಾಲ್ ನ ಹುಕುಂ ಸಿಂಗ್ ಎಂಬ ಕಡುಬಡವನ ಖಾತೆಗೆ ಇದ್ದಕ್ಕಿದ್ದಂತೆ ಬಂದು ಬಿದ್ದ 1 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಣ ಆತನಿಗೆ ಅಚ್ಚರಿ ಮೂಡಿಸಿತ್ತು. ಪ್ರತಿ ತಿಂಗಳೂ ಹಣವನ್ನು ಡ್ರಾ ಮಾಡುತ್ತಿದ್ದ ಹುಕುಂ ಸಿಂಗ್ ಗೆ ತನ್ನ ಖಾತೆಯಲ್ಲಿ ಇಷ್ಟೊಂದು ಹಣ ಬಂದಿದ್ದು ಹೇಗೆ ಅನ್ನೋದು ಗೊತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಖಾತೆಗೆ ಹಣ ಹಾಕುತ್ತಿದ್ದರು ಎಂದು ಹುಕುಂ ಸಿಂಗ್ ತಿಳಿದಿದ್ದರಂತೆ!

ಆರು ತಿಂಗಳ ಕಾಲ ಹೀಗೆ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯಾದ ಬಳಿಕ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಸೋನ್ಕರ್ ಎಂಬುವವರಿಗೆ ಒಂದು ದೂರು ಬಂದಿತ್ತು. ಬ್ಯಾಂಕ್ ನ ಖಾತೆದಾರರೊಬ್ಬರು ತಮ್ಮ ಖಾತೆಯಿಂದ ಪ್ರತಿ ತಿಂಗಳೂ ಹಣ ಡ್ರಾ ಮಾಡಲಾಗುತ್ತಿದೆ. ನಾನು ಅದನ್ನು ಪಾಸ್ ಬುಕ್ ಎಂಟ್ರಿ ಮಾಡುವಾಗ ಗಮನಿಸಿದೆ. ನನ್ನ ಖಾತೆಯಲ್ಲಿ ಇರಬೇಕಾದಷ್ಟು ಹಣ ಈಗಿಲ್ಲ ಎಂದು ದೂರು ನೀಡಿದ್ದರು. ಕೂಡಲೇ ಬ್ಯಾಂಕ್ ಮ್ಯಾನೇಜರ್ ಈ ಬಗ್ಗೆ ತನಿಖೆ ನಡೆಸಿದಾಗ ಇಬ್ಬರೂ ಹುಕುಂ ಸಿಂಗ್ ಎಂಬ ಹೆಸರಿನವರೇ ಆಗಿದ್ದು. ಒಂದೇ ದಿನ ಖಕಾತೆ ತೆರೆದಿದ್ದರು. ಬ್ಯಾಂಕ್ ಅಧಿಕಾರಿಗಳು ಗೊಂದಲಗೊಂಡು ಇಬ್ಬರಿಗೂ ಒಂದೇ ಖಾತೆ ನಂಬರ್ ಕೊಟ್ಟಿದ್ದರು. ಅದೇ ಈ ಎಲ್ಲಾ ಅವಾಂತರಗಳಿಗೂ ಕಾರಣ ಎಂದು ತಿಳಿದಿತ್ತು. ಈ ಬಗ್ಗೆ ಹುಕುಂ ಸಿಂಗ್ ಅವರನ್ನು ಮಾತನಾಡಿಸಿದರೆ, "ನನ್ನ ಖಾತೆಯಲ್ಲಿ ಯಾವತ್ತಿಗೂ ಅಷ್ಟು ಹಣವಿರುತ್ತಿರಲಿಲ್ಲ. ಆದರೆ ಪ್ರತಿ ತಿಂಗಳೂ ಹೆಚ್ಚಿನ ಹಣ ಜಮಾ ಆಗುತ್ತಿರುವುದನ್ನು ನೋಡಿ ಮೋದೀಜಿ ಹಾಕುತ್ತಿರಬಹುದು ಎಂದುಕೊಂಡು ಸುಮ್ಮನಾಗಿದ್ದೆ" ಎನ್ನುತ್ತಾರೆ!
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು?












Click it and Unblock the Notifications