ಪೊಲೀಸ್ ಅಧಿಕಾರಿ ಮಾನವೀಯತೆ; ವಿಡಿಯೋ ವೈರಲ್
ಭೋಪಾಲ್, ಸೆಪ್ಟೆಂಬರ್ 28 : ಪೊಲೀಸರನ್ನು ಜನರು ಸದಾ ಟೀಕಿಸುವುದೇ ಹೆಚ್ಚು. ಪೊಲೀಸರ ಮಾನವೀಯ ಮುಖದ ಬಗ್ಗೆ ಆಗಾಗ ಉದಾಹರಣೆಗಳು ಸಿಗುತ್ತವೆ. ಈಗ ಇಂತಹ ಒಂದು ವಿಡಿಯೋ ವೈರಲ್ ಆಗಿದೆ. ಮಾಜಿ ಮುಖ್ಯಮಂತ್ರಿಗಳ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮಧ್ಯಪ್ರದೇಶದ ಪೊಲೀಸ್ ಒಬ್ಬರು ವೃದ್ಧೆಗೆ ಮಾಡಿರುವ ಸಹಾಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಶ್ಲಾಘಿಸಿದ್ದಾರೆ.
ಮೆಜಿಸ್ಟಿಕ್ನಲ್ಲಿ ಅಪಹರಣವಾಗಿದ್ದ ಅಂಧ ದಂಪತಿಯ ಮಗು ಪತ್ತೆ
ಶುದ್ಧಾ ಶುಕ್ಲಾ ಎಂಬ ಪೊಲೀಸ್ ಅಧಿಕಾರಿ ಬೀದಿ ಬದಿಯಲ್ಲಿದ್ದ ವೃದ್ಧ ಮಹಿಳೆಗೆ ಬಟ್ಟೆ ಮತ್ತು ಒಂದು ಜೊತೆ ಚಪ್ಪಲಿ ನೀಡಿದರು. ವೃದ್ಧೆ ಪೊಲೀಸ್ ಅಧಿಕಾರಿಗೆ ಧನ್ಯವಾದ ಸಲ್ಲಿಸಿದಾಗ ಅವರು ಭಾವುಕರಾದರು. ಈ ವಿಡಿಯೋ ಈಗ ವೈರಲ್ ಆಗಿದೆ.
ಬಡವರಿಗೆ ಉಚಿತವಾಗಿ ಇಡ್ಲಿ ನೀಡುವ 'ರಾಣಿ' ಮಾನವೀಯತೆ
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ "ಇಂತಹ ಮಗಳು ಇರುವುದಕ್ಕೆ ಮಧ್ಯಪ್ರದೇಶ ಹೆಮ್ಮೆ ಪಡತ್ತದೆ" ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ವಿಡಿಯೋವನ್ನು 25 ಸಾವಿರ ಜನರು ನೋಡಿದ್ದು, 6000 ಜನರು ಲೈಕ್ ಮಾಡಿದ್ದಾರೆ. ಕಮೆಂಟ್ನಲ್ಲಿ ಶ್ರದ್ಧಾ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
दमोह जिले की मगरोन थाना प्रभारी श्रद्धा शुक्ला जैसी बेटियों पर मध्यप्रदेश को गर्व है। बेटियां सबके दु:ख को समझती हैं वे हर घर का उजाला हैं। इन्हीं से सृष्टि धन्य हुई है। यही तो इस संसार को खुशियों से समृद्ध करेंगी। बेटी श्रद्धा को स्नेह, आशीर्वाद, शुभकामनाएं! pic.twitter.com/yGtdVnP5iG
— Shivraj Singh Chouhan (@ChouhanShivraj) September 26, 2019
ಕಳೆದ ವಾರ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುವಾಗ ಸಂಚಾರಿ ಪೊಲೀಸರೊಬ್ಬರು ರಸ್ತೆಯಲ್ಲಿ ನಿಂತಿದ್ದ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುತ್ತಿದ್ದ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸಿದ್ದರು.