74 ವರ್ಷದ ವ್ಯಕ್ತಿಯೊಬ್ಬರ ತಲೆ ಮೇಲೆ ಬೆಳೆದಿದ್ದ 'ಕೊಂಬಿಗೆ' ಆಪರೇಷನ್
ಭೋಪಾಲ್ (ಮಧ್ಯಪ್ರದೇಶ), ಸೆಪ್ಟೆಂಬರ್ 19: 74 ವರ್ಷದ ವ್ಯಕ್ತಿಯೊಬ್ಬರ ತಲೆಯ ಮೇಲೆ 'ಕೊಂಬಿನಂತೆ' ಆಗಿದ್ದ ಬೆಳವಣಿಗೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಮಧ್ಯಪ್ರದೇಶದ ಬುಂದೇಲ್ ಖಂಡ್ ನ ದೂರದ ಹಳ್ಳಿ ಪಾಟ್ನಾ- ಬುಜುರ್ಗ್ ನಿವಾಸಿ ಶಾಮ್ ಲಾಲ್ ಶಸ್ತ್ರಚಿಕಿತ್ಸೆಗೆ ಒಳಗಾದವರು. ಕೃಷಿಕ ಕುಟುಂಬಕ್ಕೆ ಸೇರಿದ ಅವರಿಗೆ ತಲೆ ಮಧ್ಯ ಭಾಗದಲ್ಲಿ ಕಳೆದ 5 ವರ್ಷದಿಂದ 4 ಇಂಚಿನ ಕೊಂಬಿನಂಥ ಬೆಳವಣಿಗೆ ಆಗುತ್ತಿತ್ತು.
ಐದು ವರ್ಷದ ಹಿಂದೆ ತಲೆಗೆ ಗಾಯವಾಗಿತ್ತು. ಆ ನಂತರ ತಲೆ ಮೇಲೆ ಕೊಂಬಿನಂತೆ ಬೆಳವಣಿಗೆ ಆಗಲು ಆರಂಭವಾಯಿತು. ಅದಾದ ಮೇಲೆ ಸಮಯ ಕಳೆದ ಮೇಲೆ ದೊಡ್ಡದಾಗುತ್ತಾ ಬಂದಿದೆ ಎಂದು ಕಳೆದ ವಾರ ಸಾಗರ್ ನ ಭಾಗ್ಯೋದಯ ತೀರ್ಥ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಸೆಪ್ಟೆಂಬರ್ ಹದಿಮೂರನೇ ತಾರೀಕು ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಆರಂಭದಲ್ಲಿ ಅದು ಹೊರೆಯಂತೆ ಅನಿಸತೊಡಗಿದೆ. ಅಗಾಗ ಬ್ಲೇಡ್ ನಿಂದ ಅದನ್ನು ಕತ್ತರಿಸುತ್ತಿದ್ದರಂತೆ. ಮತ್ತೆ ಬೆಳೆಯುತ್ತಿತ್ತಂತೆ. ಹೀಗೆ ಆಗುತ್ತಿದ್ದಂತೆ ಆಸ್ಪತ್ರೆಯಿಂದ ಆಸ್ಪತ್ರೆಗೆ, ವೈದ್ಯರಿಂದ ವೈದ್ಯರ ಬಳಿಗೆ ಎಡತಾಕಿದ್ದಾರೆ. ಕೊನೆಗೆ ಸಾಗರ್ ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡುವಂತೆ ಸಲಹೆ ಬಂದ ಮೇಲೆ ಈ ಆಸ್ಪತ್ರೆಗೆ ಬಂದು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿ ಪ್ರಕಾರ, ಕೊಂಬಿನಂಥ ಬೆಳವಣಿಗೆ ತಲೆಯ ಸೆಬಾಸಿಯಸ್ ಗ್ರಂಥಿ ಮೇಲೆ ಆಗುತ್ತಿತ್ತು. ಸೂರ್ಯನಿಗೆ ತೆರೆದುಕೊಂಡಿರುವ ತಲೆಯ ಮೇಲಿನ ಚರ್ಮದ ಮೇಲೆ ಇಂಥ ಬೆಳವಣಿಗೆ ಆಗುತ್ತದೆ. ಇದನ್ನು ಸೆಬಾಸಿಯಸ್ ಹಾರ್ನ್ ಎಂದು ಕರೆಯಲಾಗುತ್ತದೆ. ಆದರೆ ಶ್ಯಾಮ್ ಲಾಲ್ ಪ್ರಕರಣದಲ್ಲಿ ಆ 'ಕೊಂಬು' ತೀರಾ ಉದ್ದವಿತ್ತು.
WHAT THE...?
— Jeff Simmons (I-TX) (@JeffSimmons6) September 17, 2019
A man in India recently had a horn-like growth removed from his head after the pain became unbearable.
A barber made several attempts to trim it.
"We want to put a battery-powered light bulb on top"
The 74-year-old reportedly injured his head about five years ago. pic.twitter.com/mxdO2C8bOl
ಸೆಬಾಸಿಯಸ್ ಹಾರ್ನ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದನ್ನು ಈ ವರೆಗೆ ಕೇಳಿರಲಿಲ್ಲ ಎನ್ನುತ್ತಾರೆ ವೈದ್ಯರು. ಇದೀಗ ಶ್ಯಾಮ್ ಲಾಲ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ, 'ಕೊಂಬು' ತೆಗೆದುಹಾಕಿ, ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ












Click it and Unblock the Notifications