Zero Shadow Day: ಬೆಂಗಳೂರಿನಲ್ಲಿ ನಡೆಯಲಿದೆ ವಿಚಿತ್ರ ಘಟನೆ: ಕೆಲವು ಕ್ಷಣ ನಿಮ್ಮ ನೆರಳು ಮಾಯ
ಬೆಂಗಳೂರು ಏಪ್ರಿಲ್ 25: ಬೆಂಗಳೂರಿನಲ್ಲಿ ಇಂದು ಅಂದರೆ ಏಪ್ರಿಲ್ 25 ಅಚ್ಚರಿಯ ದಿನವಾಗಿರುತ್ತದೆ. ಸೌರವ್ಯೂಹವು ಈ ದಿನ ವಿಶಿಷ್ಟವಾದ ಆಟವನ್ನು ಆಡಲಿದೆ. ಅದೇನೆಂದರೆ ಇಂದು ಜನರು ತಮ್ಮ ನೆರಳನ್ನು ತಾವು ಕಾಣುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ದಿನ ಯಾರಿಗೂ ಅವರ ನೆರಳನ್ನು ನೋಡಲು ಸಿಗುವುದಿಲ್ಲ. ಇದು ಕೆಲವು ಕ್ಷಣಗಳವರೆಗೆ ಇರುತ್ತದೆ. ಇದೊಂದು ವಿಚಿತ್ರ ಘಟನೆಯಾಗಿದ್ದು ಇಂದು ಸಂಭವಿಸಲಿದೆ.
ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ನಡೆಯುತ್ತದೆ. ಇದನ್ನು ಶೂನ್ಯ ನೆರಳು ದಿನ ಎಂದು ಹೆಸರಿಸಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತನ್ನ ಕ್ಯಾಂಪಸ್ನಲ್ಲಿ ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಈ ಬಗ್ಗೆ ಬೆಂಗಳೂರಿನ ಜನರ ಉತ್ಸಾಹ ಹೆಚ್ಚಾಗಿ ಕಂಡು ಬರುತ್ತಿದೆ. ತಮ್ಮ ನೆರಳು ತಮಗೆ ಕಾಣಿಸದೇ ಇರುವ ಸಂದರ್ಭದ ದೃಶ್ಯವನ್ನು ಸೆರೆಹಿಡಿಯಲು ಜನರು ಕುತೂಹಲಕಾರಿಯಾಗಿದ್ದಾರೆ.

ಶೂನ್ಯ ನೆರಳು ದಿನ ಎಂದರೇನು?
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಯಾವುದೇ ವಸ್ತುವಿಗೆ ನೆರಳು ನೀಡುವುದಿಲ್ಲ. ಇದರಿಂದಾಗಿ ಈ ಘಟನೆ ಸಂಭವಿಸಲಿದೆ. ASI ಪ್ರಕಾರ, ಕರ್ಕಾಟಕ ರಾಶಿ ಮತ್ತು ಮಕರ ರಾಶಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ. ಈ ವಿದ್ಯಾಮಾನ ಈ ವರ್ಷ ಏಪ್ರಿಲ್ 25ರಂದು ಕಾಣ ಸಿಗಲಿದೆ ಎಂದು ಖಗೋಳ ಭೌತ ಶಾಸ್ತ್ರಜ್ಞ ದೇಬಿಪ್ರಸೋದ್ ದುರೈ ಹೇಳಿದ್ದಾರೆ. ಇದು ವರ್ಷದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ತಲಾ ಒಂದು ಬಾರಿ ಇದು ನಡೆಯುತ್ತದೆ.
ಏಕೆ ಇದು ಸಂಭವಿಸುತ್ತದೆ?
ಭೂಮಿಯ ಪರಿಭ್ರಮಣ ಅಕ್ಷವು ಸೂರ್ಯನ ಸುತ್ತ ತನ್ನ ಕಕ್ಷೆಗೆ 23.5 ಡಿಗ್ರಿಗಳಷ್ಟು ವಾಲುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಹಗಲಿನಲ್ಲಿ ಸೂರ್ಯನು ಉಚ್ಛ್ರಾಯ ಸ್ಥಿತಿಯಲ್ಲಿರುತ್ತಾನೆ. ಈ ಪರಿಭ್ರಮಣೆಯಿಂದಾಗಿ, ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ನಮ್ಮ ನೆರಳು ನಮಗೆ ಕಾಣುವುದಿಲ್ಲ.

ಶೂನ್ಯ ನೆರಳು ದಿನ ಎಷ್ಟು ಕಾಲ ಇರುತ್ತದೆ?
ಈ ಆಸಕ್ತಿದಾಯಕ ಮತ್ತು ವಿಶಿಷ್ಟ ವಿದ್ಯಮಾನವು ಸ್ವಲ್ಪ ಸಮಯದವರೆಗೆ ಸಂಭವಿಸುತ್ತದೆ. ಇದರ ಸಮಯ ಸುಮಾರು ಒಂದರಿಂದ ಒಂದೂವರೆ ನಿಮಿಷಗಳವರೆಗೆ ಇರುತ್ತದೆ. ಈ ಘಟನೆ ಒಡಿಶಾದ ಭುವನೇಶ್ವರದಲ್ಲಿ 2021 ರಲ್ಲಿ ನಡೆದಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications