ದೆವ್ವಕ್ಕೆ ಮಧ್ಯರಾತ್ರಿ ಬಿರಿಯಾನಿ, ಕಬಾಬ್ ಶೇರ್ ಮಾಡಿದ ಯುವಕರು!
ಮೂರು ಜನ ಯುವಕರು ಮಾಡಿರುವ ಕೆಲಸ ನೋಡಗರನ್ನು ದಂಗು ಬಡಿಸಿದೆ. ಆ ಯುವಕ ಹುಚ್ಚಾಟದ ವಿಡಿಯೋ ಇದೀಗ ವೈರಲ್ ಆಗಿದ್ದು, ಇದೆಲ್ಲ ಬೇಕಿತ್ತಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ದೆವ್ವಗಳೊಂದಿಗೆ ಬಿರಿಯಾನಿ, ಕಬಾಬ್ ಶೇರಿಂಗ್ ಮಾಡ್ತೀವಿ ಅಂತ ಹುಡುಗರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ದೃಶ್ಯಗಳನ್ನು ನೋಡಲು ಎಂಟೆದೆ ಗುಂಡಿಗೆ ಬೇಕು.
ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಒಬ್ಬರೇ ಓಡಾಡುವುದಕ್ಕೂ ಜನ ಹೆದರಿಕೊಳ್ಳುವುದಿದೆ. ಇನ್ನು ಸ್ಮಶಾನದ ಮುಂದೆ ಹೋಗಬೇಕಂದರೂ ನೂರಾರು ದೇವರನ್ನು ನೆನಪಿಸಿಕೊಂಡು, ಮನಸ್ಸಿನಲ್ಲೇ ಜೈ ಆಂಜನೇಯ.. ಜೈ ಆಂಜನೇಯ ಎಂದು ಕೊಂಡು ಹೋಗುವುದೇ ಹೆಚ್ಚು. ಸ್ಮಶಾನದ ಒಳಗೆ ಹೋದರು ಹೇಗಿದೆ ಎನ್ನುವ ಸಾಹಸ ಮಾಡಬಹುದಷ್ಟೇ ಆದರೆ, ಯಾರೂ ಸಹ ಸ್ಮಶಾನದಲ್ಲಿ ಬಿರಿಯಾನಿ ತಿನ್ನುವ ಸಾಹಸ ಮಾಡಲ್ಕಿಲ್ಲ. ಈ ಮೂರು ಜನ ಯುವಕರು ಆ ರೀತಿಯ ಸಾಹಸವೊಂದನ್ನು ಮಾಡಿದ್ದಾರೆ.

ಬಿಸಿರಕ್ತದ ಯುವಕರು ಮಾಡುವ ಸಾಹಸಗಳು ಒಂದೆರಡಲ್ಲ. ಹೊಸ ಹೊಸ ಸಾಹಸ, ಅಲ್ಲೇನಿದೆ ನೋಡೇ ಬಿಡೋಣ ಎನ್ನುವ ಹುಮಸ್ಸು ಕೊನೆಗೆ ಎಲ್ಲಿಗೆ ಬೇಕಾದರೂ, ತೆಗೆದುಕೊಂಡು ಹೋಗಿ ಬಿಡುತ್ತದೆ. ಅದೇ ರೀತಿ ಮೂರು ಜನ ಯುವಕರು ಸೇರಿ ಮಧ್ಯರಾತ್ರಿ ಸ್ಮಶಾನಕ್ಕೆ ಹೋಗಿ ಬಿರಿಯಾನಿ, ಮೊಟ್ಟೆ, ಕಬಾಬ್, ಚಿಕನ್ ಹಾಗೂ ಮಟನ್ಗಳನ್ನು ತಿಂದಿದ್ದಾರೆ. ಈ ವಿಡಿಯೋ ವೈರಲ್ ಎಂತವರ ಎದೆಯನ್ನು ನಡುಗಿಸುವಂತಿದೆ.
ಏನಿದು ದೆವ್ವಗಳಿಗೆ ಬಿರಿಯಾನಿ
ಸ್ಮಶಾನದಲ್ಲಿ ಗೋರಿ ಮೇಲೆ ಬಾಡೂಟ ಎನ್ನುವ ಕಾನ್ಸೆಪ್ಟ್ನೊಂದಿಗೆ ಮೂರು ಜನ ಯುವಕರು ಸ್ಮಶಾನವೊಂದರಲ್ಲಿ ಮಧ್ಯರಾತ್ರಿ ಬಾಳೆ ಎಲೆಯ ಮೇಲೆ ವಿವಿಧ ಬಾಡೂಟ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಕಾಸ್ ಗೌಡ ಎನ್ನುವವರ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದೆ. ಮಧ್ಯರಾತ್ರಿ 12 ಗಂಟೆಗೆ ಯುವಕರು ಸ್ಮಶಾನಕ್ಕೆ ಹೋಗಿದ್ದಾರೆ. ಗೋರಿಗಳ ಮೇಲೆ ನಾನ್ವೆಜ್ ಊಟ ಮಾಡುವುದು ಇವರ ಕಾನ್ಸೆಪ್ಟ್. ಆದರೆ, ಊಟ ಶುರುಮಾಡುವ ಮುನ್ನ ಭಯವಾಗಿ ಒಂದು ಬಾಳೆ ಎಲೆಯ ಮೇಲೆ ಬಿರಿಯಾನಿ, ಮೊಟ್ಟೆ, ಕಬಾಬ್ ಸೇರಿದಂತೆ ನಾನ್ ವೆಜ್ ಐಟಂಗಳನ್ನು ಇಟ್ಟಿದ್ದಾರೆ.
ಉದ್ದನೆಯ ಬಾಳೆಯ ಎಲೆಯ ಮೇಲೆ ನಾನ್ವೆಜ್ ಇರಿಸಿಕೊಂಡು ಊಟ ಮಾಡುವಾಗ ಬರುವ ಗಾಳಿ, ಶಬ್ದಕ್ಕೆ ಭಯ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸ್ಮಶಾನದಲ್ಲಿ ಗೋರಿಯ ಮೇಲೆ ಕುಳಿತೇ ಇಬ್ಬರು ಯುವಕರು ನಾನ್ ವೆಜ್ ಊಟ ಮಾಡಿದ್ದಾರೆ. ಸ್ಮಶಾನದಲ್ಲಿ ನಡೆದುಕೊಂಡು ಹೋಗುವಾಗ ಸ್ಮಶಾನದಲ್ಲಿ ಇರುವ ಗೋರಿಗಳು, ಸಮಾಧಿಗಳನ್ನು ತೋರಿಸಲಾಗಿದೆ. ಊಟ ಮಾಡುವಾಗ ಬಾಳೆ ಎಲೆಗಳು ಎಗರುವುದು, ವಿಚಿತ್ರವಾಗಿ ಯಾರೋ ಹಿಂದೆಯಿಂದ ಕರೆದಿದ್ದಾರೆ ಎನ್ನುವಂತಹ ಅನುಭವಗಳು ಆಗಿರುವುದನ್ನು ವಿಡಿಯೋದಲ್ಲಿ ಯುವಕರು ಹೇಳಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. 91 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದು, ಒಂದು ಸಾವಿರಕ್ಕೂ ಈ ವಿಡಿಯೋ ಶೇರ್ ಆಗಿದೆ. ಜನ ಈ ವಿಡಿಯೋವನ್ನು ಕುತೂಹದಿಂದ ನೋಡಿದ್ದಾರೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications