ಯಲಹಂಕ, ಕೆ.ಆರ್.ಪುರಂ ರಸ್ತೆಗಳು ಯಮಲೋಕಕ್ಕೆ ದಾರಿ!
ಬೆಂಗಳೂರು, ಜನವರಿ 29: ಯಲಹಂಕ ಮತ್ತು ಕೆ.ಆರ್.ಪುರಂ ರಸ್ತೆಗಳೇ ಬೆಂಗಳೂರಿನಲ್ಲಿ ಅತ್ಯಧಿಕ ರಸ್ತೆ ಅಪಘಾತಗಳನ್ನು ಕಂಡಿರುವ ರಸ್ತೆಗಳು ಎಂದು ವರದಿ ಹೇಳುತ್ತಿದೆ.
ಯಲಹಂಕ ಮತ್ತು ಕೆ.ಆರ್.ಪುರಂ ರಸ್ತೆಯಲ್ಲಿ ಕಳೆದ ಮೂರು ವರ್ಷದಲ್ಲಿ ಬೆಂಗಳೂರಿನ ಇತರ ಭಾಗಗಳಿಗಿಂತಲೂ ಅತಿ ಹೆಚ್ಚು ರಸ್ತೆ ಅಪಘಾತಗಳು ಆಗಿವೆ ಮತ್ತು ಹೆಚ್ಚು ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರಿ ಪೊಲೀಸರ ವರದಿಗಳು ಹೇಳುತ್ತಿವೆ.
2016 ರಲ್ಲಿ ಯಲಹಂಕದಲ್ಲಿ 56 ರಸ್ತೆ ಅಪಘಾತಗಳಾಗಿ 59 ಮಂದಿ ಮೃತರಾಗಿದ್ದಾರೆ. 2017 ರಲ್ಲಿ ಸಹ ಕೆ.ಆರ್.ಪುರಂ ಮೊದಲ ಸ್ಥಾನದಲ್ಲಿದ್ದು, 49 ಅಪಘಾತದಲ್ಲಿ 51 ಮಂದಿ ಮೃತರಾಗಿದ್ದಾರೆ. ಯಲಹಂಕ ದ್ವಿತೀಯ ಸ್ಥಾನದಲ್ಲಿದ್ದು 32 ಅಪಘಾತದಲ್ಲಿ 39 ಜನ ಸತ್ತಿದ್ದಾರೆ.

2018 ರಲ್ಲಿ ಕೆ.ಆರ್.ಪುರಂನಲ್ಲಿ 42 ಅಪಘಾತಗಳು ನಡೆದಿದ್ದು, 43 ಮಂದಿ ಮೃತರಾಗಿದ್ದಾರೆ. ಇದೇ ವರ್ಷ ಯಲಹಂಕದಲ್ಲಿ 46 ಅಪಘಾತಗಳಲ್ಲಿ 48 ಮಂದಿ ಮೃತರಾಗಿದ್ದಾರೆ. 2018 ರಲ್ಲಿ ಕೆ.ಆರ್.ಪುರವನ್ನು ಮೀರಿಸಿ ಯಲಹಂಕ ಮೊದಲ ಸ್ಥಾನಕ್ಕೆ ಏರಿದೆ.
ಹಳೆ ಮದ್ರಾಸ್ ರಸ್ತೆ, ಭಟ್ಟರಹಳ್ಳಿ ಜಂಕ್ಷನ್, ಮಹದೇವಪುರ ಬಿ.ನಾರಾಯಣಪುರ ಬಸ್ ನಿಲ್ದಾಣ, ರಾಮಮೂರ್ತಿ ನಗರದ ಎ.ಎಸ್.ಆರ್ ಕಲ್ಯಾಣ ಮಂಟಪ, ಕೆ.ಆರ್.ಪುರಂ ಬ್ರಿಡ್ಜ್ಗಳಲ್ಲಿ ಅತಿ ಹೆಚ್ಚು ಅಪಘಾತಗಳು ಆಗಿವೆ.
ಯಲಹಂಕದ ಜಕ್ಕೂರು ಏರ್ಡ್ರಂ, ಯಲಹಂಕ ಬೈಪಾಸ್ (ಕಾಫಿ ಡೇ ಬಳಿ), ಏರ್ಫೋರ್ಸ್ ಬಳಿ, ಪಾಲನಹಳ್ಳಿ ಗೇಟ್, ಕನ್ನಮಂಗಲ ಪಾಳ್ಯ ಗೇಟ್ ಬಳಿ ಹೆಚ್ಚು ಅಪಘಾತಗಳು ಸಂಭವಿಸಿವೆ.
ಅತಿ ಹೆಚ್ಚು ಅಪಘಾತವಾಗಿರುವ ಪ್ರದೇಶಗಳ ಪಟ್ಟಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ, ದೇವನಹಳ್ಳಿ, ಚಿಕ್ಕಜಾಲ, ಪೀಣ್ಯ ಸಹ ಇವೆ. ಈ ಪ್ರದೇಶಗಳಲ್ಲಿ ಸಹ ವರ್ಷಕ್ಕೆ 35 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?












Click it and Unblock the Notifications