ಕಲಾಕ್ಷೇತ್ರದಲ್ಲಿ ಪುಷ್ಪ ಸಿಂಧೂರಿ-ವಜ್ರಮಹೋತ್ಸವದ ಪ್ರದರ್ಶನ
ಬೆಂಗಳೂರು, ಜುಲೈ 26:ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಮಣೂರು ವಾಸುದೇವ ಮಯ್ಯರ ರಚನೆಯ ಎರಡನೆಯ ಯಕ್ಷಗಾನ ಪ್ರಸಂಗ 'ಪುಷ್ಪ ಸಿಂಧೂರಿ' ವಜ್ರ ಮಹೋತ್ಸವ ಸಂಭ್ರಮದಲ್ಲಿದೆ.
'ಪುಷ್ಪ ಸಿಂಧೂರಿ' ಪ್ರಸಂಗ ಹೋದಡೆಯೆಲ್ಲಾ ಜಯಭೇರಿ ಬಾರಿಸಿ ಇದೀಗ ವಜ್ರಮಹೋತ್ಸವದ ಪ್ರದರ್ಶನ ಬೆಂಗಳೂರಿನಲ್ಲಿ (75ನೇ ಅದ್ಧೂರಿ ಪ್ರದರ್ಶನ) ಜುಲೈ 29ರ ಶನಿವಾರ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ಪೆರ್ಡೂರು ಮೇಳ ತಂಡದಿಂದ ರಂಗದಲ್ಲಿ ಮೂಡಿಬರಲಿದೆ.
ಬೆಂಗಳೂರಿನ ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನವು ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನ ವಲಯದಲ್ಲೊಂದು ಸಂಚಲನೆಯ ಹೆಸರು. ತನ್ನ ವೈವಿಧ್ಯತೆ, ಕಲಾತ್ಮಕತೆ, ಸೃಜನಶೀಲತೆ ಮತ್ತು ಅದ್ಧೂರಿತನವನ್ನೊಳಗೊಂಡು ಯಕ್ಷಗಾನದ ಸಮಸ್ತ ಶೈಲಿಗಳಲ್ಲೂ ಕಾರ್ಯ ನಿರ್ವಹಿಸುವ ಅಪರೂಪದ ಸಂಸ್ಥೆಯೂ ಹೌದು.
ಎಲ್ಲಿ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ, ಬೆಂಗಳೂರು.
ಯಾವಾಗ: -ಜುಲೈ 29, ಶನಿವಾರ ರಾತ್ರಿ 10ರಿಂದ,
ಸಂಪರ್ಕ-ಮಹೇಶ ಹೆಗಡೆ-97314 69502, ಸಂತೋಷ್ ಕುಮಾರ್-90367 41626, ಅನಿಲ್ ಚಿನ್ನು-91644 52888
ಪೌರಾಣಿಕ, ಸಾಮಾಜಿಕ ಪ್ರಕಾರಗಳಲ್ಲಿ ಸಮಾನ ಪ್ರಯೋಗಶೀಲತೆಗೆ ಸದಾ ಒತ್ತು ನೀಡುತ್ತಾ ಯಕ್ಷರಸಿಕರ ಪಾಲಿಗೆ ಆಕ್ಷರಶಃ ರಸದೌತಣ ನೀಡುತ್ತಿರುವ ಈ ಸಂಸ್ಥೆಯ ಹಿಂದಿರುವುದು ಮಣೂರು ವಾಸುದೇವ ಮಯ್ಯ ಎಂಬ ಅಪ್ಪಟ ಯಕ್ಷಾಭಿಮಾನಿ.

'ಇಂದ್ರನಾಗ'ದಲ್ಲಿ ಸ್ಥಳ ಪುರಾಣ
'ಇಂದ್ರನಾಗ'ದಲ್ಲಿ ಸ್ಥಳ ಪುರಾಣ ವೊಂದರ ಆಧಾರ ಪಡೆದು ರಚಿಸಿದ ಕಥೆಯಲ್ಲಿ ಹಲವು ಪರಂಪರಾಗತ ರಂಗ ಪ್ರಕ್ರಿಯೆ (ಉದಾ: ರಾಕ್ಷಸ ಪಾತ್ರಗಳ ತೆರೆ ಒಡ್ಡೋಲಗ, ಗುಹನಕುಣಿ, ಕಿರಾತ ನೃತ್ಯ) ಯನ್ನು ಅಳವಡಿಸಿದ್ದ ವಾಸುದೇವ ಮಯ್ಯರು 'ಪುಷ್ಪ ಸಿಂಧೂರಿ'ಯಲ್ಲಿ ಒಂದು ತಾತ್ವಿಕ ಸಂಘರ್ಷವನ್ನು ಹೇಳಿದ್ದಾರೆ. ಇಲ್ಲಿ ಹೆಣ್ಣಿನ ಎರಡು ಮುಖಗಳನ್ನು ತಿಳಿಸುವ ಯತ್ನದ ಜೊತೆಗೆ ಆಕೆಯ ಶ್ರೇಷ್ಠತೆಯನ್ನು ಎತ್ತಿಹಿಡಿವ ಕಥಾ ವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ. ನಳದಮಯಂತಿ ಮಾದರಿಯ ಬಾಹುಕನ ಪಾತ್ರವೊಂದನ್ನು ಮತ್ತೆ ಮಯ್ಯ ರಂಗದ ಮೇಲೆ ತಂದಿದ್ದಾರೆ.

ಸಾಮಾಜಿಕ ಪ್ರಸಂಗ
ಯುವ ಜನತೆಗೆ ಆಕರ್ಷಣೀಯವಾಗುವ ಮತ್ತು ಕಲಾವಿದರ ನಾಟ್ಯಕ್ಕೆ ಅವಕಾಶವಾಗುವ ಶೃಂಗಾರರಸವು ಕಥಾ ಭಾಗದ ಸ್ಥಾಯಿಯಾಗಿ ಆವರಿಸಿಕೊಂಡಿದೆ. ಸಾಮಾಜಿಕ ಪ್ರಸಂಗಗಳ ಮೂಲದ್ರವ್ಯವಾದ ಹಾಸ್ಯರಸವು ಕಥೆಗೆ ಪೂರಕವಾಗಿ ಪ್ರಸಂಗದುದ್ದಕ್ಕೂ ಪ್ರವಹಿಸಲಿದೆ. ನಡುವೆ ಬ್ರಹ್ಮಕಪಾಲದ ಮಾದರಿಯಲ್ಲಿ ತಾತ್ವಿಕ ಜಿಜ್ಞಾಸೆಯ ಅನಾವರಣಗೊಳ್ಳಲಿದೆ.
ಪುಷ್ಪಸಿಂಧೂರಿ
ಇಂಥ ಹದಭರಿತ ಕಥಾ ವಸ್ತುವಿಗೆ ತಕ್ಕ ಪದ್ಯಗಳನ್ನು ಯುವ ಕವಿ ಪ್ರಸಾದ ಮೊಗೆಬೆಟ್ಟು ಬರೆದಿದ್ದಾರೆ. ಅನುಭವಿ ರಂಗನಿರ್ದೇಶಕ ರಮೇಶ್ ಬೇಗಾರ್ ರಂಗರೂಪಾಂತರಗೈದಿದ್ದಾರೆ. ಹೆಸರಾಂತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ರಂಗ ನಿರ್ದೇಶನವನ್ನು 'ಪುಷ್ಪಸಿಂಧೂರಿ' ಒಳಗೊಂಡಿದೆ.
ಬ್ರಹ್ಮೂರು ಶಂಕರ ಭಟ್ ಮತ್ತು ಸುರೇಶ ಕಾರವಾರರ ಸಾಥ್, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ, ಭಾಸ್ಕರ ಭಂಡಾರಿ ಭಟ್ಕಳ, ಚಂಡೆಯಲ್ಲಿ ಜನಾರ್ಧನ ಆಚಾರ್ಯ ಹಳ್ಳಾಡಿ, ಪ್ರಸನ್ನ ಭಟ್ ಹೆಗ್ಗಾರ್, ಸುಜನ್ ಕುಮಾರ್ ಹಾಲಾಡಿಯವರು ಸಹಕರಿಸಲಿದ್ದಾರೆ.
ಯಕ್ಷಾಭಿಮಾನಿಗಳನ್ನು ರಂಜಿಸಲಿದ್ದಾರೆ.
'ಪುಷ್ಪ ಸಿಂಧೂರಿ'ಯಾಗಿ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರ ಮನೋಜ್ಞ ಅಭಿನಯ ಈ ಪ್ರದರ್ಶನದಲ್ಲಿರುವುದು ಒಂದು ವಿಶೇಷ. ಪುರುಷ ಪಾತ್ರದಲ್ಲಿ ಥಂಡಿಮನೆ ಶ್ರೀಪಾದ ಭಟ್, ಉದಯ ಹೆಗಡೆ ಕಡಬಾಳ, ವಿಶ್ವನಾಥ ಆಚಾರ್ಯ ತೊಂಬಟ್ಟು, ಪ್ರಕಾಶ ಮೊಗವೀರ ಕಿರಾಡಿ, ಮಾಗೋಡು ಅಣ್ಣಪ್ಪ ಗೌಡ, ಗಣಪತಿ ಬೈಲಗದ್ದೆ, ಪ್ರಣವ್ ಭಟ್ ಸಿದ್ಧಾಪುರ, ರಮೇಶ ಸೀತೂರು, ಕೆಕ್ಕಾರು ಆನಂದ ಭಟ್, ಆದಿತ್ಯ ಹೆಗಡೆ, ವಿಜಯ ಮುದ್ದುಮನೆ ಮತ್ತು ದ್ವಿತೇಶ್ ಕಾಮತ್, ಸ್ತ್ರೀ ಪಾತ್ರದಲ್ಲಿ ಸಂಜೀವ ಶೆಟ್ಟಿ ಹೆನ್ನಾಬೈಲು, ವಿಜಯ ಗಾಣಿಗ ಬೀಜಮಕ್ಕಿ ಮತ್ತು ಉಮೇಶ ತೋಟಾಡಿ ಶಂಕರನಾರಾಯಣ, ಹಾಸ್ಯದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ ಮತ್ತು ಪುರಂದರ ಮೂಡ್ಕಣಿ ಯಕ್ಷಾಭಿಮಾನಿಗಳನ್ನು ರಂಜಿಸಲಿದ್ದಾರೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications