Bengaluru: ಚಲಿಸುತ್ತಿದ್ದ ಕಾರಿನ ಮುಂದೆ ಬಂದು ಬಿದ್ದ ಮಹಿಳೆ: ಬಳಿಕ ಆಗಿದ್ದೇನು?
ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಕಲಿ ಅಪಘಾತಗಳನ್ನು ಸೃಷ್ಟಿಸುವ ಮೂಲಕ ವಾಹನ ಸವಾರರನ್ನು ದೋಚುವ ದಂಧೆಯೊಂದು ಶುರುವಾಗಿದೆ. ಅನೇಕ ಕಾರು, ಬೈಕು ಓಡಿಸುವವರು ಇಂತಹ ಘಟನೆಗಳಿಂದ ಹಣ ಕಳೆದುಕೊಂಡಿರುವ ಘಟನೆಗಳು ಬಹಳಷ್ಟಿವೆ. ಇದಕ್ಕಾಗಿಯೇ ಇತ್ತೀಚೆಗೆ ಎಲ್ಲಾ ಕಾರುಗಳು ಮಾಲೀಕತು ಡ್ಯಾಷ್ ಕ್ಯಾಮ್ ಅಳವಡಿಸಿಕೊಳ್ಳುತ್ತಿದ್ದಾರೆ. ಚಲಿಸುತ್ತಿದ್ದ ಕಾರಿನ ಮುಂದೆ ಬಂದು ಬಿದ್ದು ಮಹಿಳೆಯೊಬ್ಬರು ಹೈಡ್ರಾಮಾ ಮಾಡಿರುವ ಘಟನೆಯ ವಿಡಿಯೋ ಇದೀಗ ವೈರಲ್ ಅಗುತ್ತಿದೆ.
ಶೋನಿ ಕಪೂರ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಹೀಗೆ ಮೋಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಚಲಿಸುತ್ತಿದ್ದ ಕಾರಿನ ಮುಂದೆ ಮಹಿಳೆ ಏಕಾಏಕಿ ಉದ್ದೇಶಪೂರ್ವಕವಾಗಿ ಬಿದ್ದು ಅಪಘಾತವಾಗಿದೆ ಎನ್ನುವ ನಾಟಕ ಆಡಲು ಪ್ರಯತ್ನಿಸಿದ್ದಾರೆ. ಈ ಘಟನೆ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದೆ.

ಜನನಿಬಿಡ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಮಹಿಳೆ, ಚಲಿಸುತ್ತಿದ್ದ ಕಾರಿನ ಬಾನೆಟ್ಗೆ ತಾನೇ ಬಂದು ಗುದ್ದಿದ್ದಾಳೆ, ಅಪಘಾತ ತಪ್ಪಿಸಲು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಅಪಘಾತ ತಪ್ಪಿಸಲು ಚಾಲಕ ಪ್ರಯತ್ನ ಮಾಡಿದರೂ, ಕಾರಿನ ಮೇಲೆ ಬಿದ್ದ ಮಹಿಳೆ ಕಾರು ಚಾಲಕನ ಮೇಲೆ ಕೂಗಾಡಲು ಶುರುಮಾಡಿದ್ದಾಳೆ.
ಆಕೆ ಕಾರು ಚಾಲಕನನ್ನು ಬೈಯಲು ಮುಂದಾಗುತ್ತಿದ್ದಂತೆ, ಚಾಲಕ ಆಕೆಯನ್ನು ಹೆದರಿಸುವ ಪ್ರಯತ್ನದಲ್ಲಿ ಪೊಲೀಸ್, ಪೊಲೀಸ್ ಎಂದು ಕಿರುಚಿದ್ದಾನೆ. ಆದರೂ ಮಹಿಳೆ ಕಾರಿಗೆ ದಾರಿ ಬಿಡಲು ನಿರಾಕರಿಸಿದರು. ಬಳಿಕ ದಾರಿಯನ್ನು ಬಿಟ್ಟು ದೂರ ಸಾಗಿದ್ದಾಳೆ.
Put a dashcam
— ShoneeKapoor (@ShoneeKapoor) August 28, 2024
You never know when this happens to you.
Especially, when it is a lady. If something happens, people will take her side instantly. pic.twitter.com/H5b2nhUjuF
ಡ್ಯಾಶ್ಕ್ಯಾಮ್ ಹಾಕುವಂತೆ ಮನವಿ
ನಿಮ್ಮ ಕಾರುಗಳಿಗೆ ಡ್ಯಾಶ್ಕ್ಯಾಮ್ ಹಾಕಿ, ಯಾವಾಗ ಬೇಕಾದರೂ ಇಂತಹ ಘಟನೆ ನಡೆಯುತ್ತದೆ ಎಂದು ಕಪೂರ್ ತಮ್ಮ ಪೋಸ್ಟ್ನಲ್ಲಿ ಚಾಲಕರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಹಲವು ಮಂದಿ ಸಹಮತ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದು, "ಭಾರತದಲ್ಲಿ ಕಾರುಗಳಿಗೆ ಡ್ಯಾಶ್ಕ್ಯಾಮ್ ಅನಿವಾರ್ಯ. ನೀವು ರಸ್ತೆಗಳಲ್ಲಿ ಯಾವ ರೀತಿಯ ವ್ಯಕ್ತಿಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿದ್ದು ಭಾರತದಲ್ಲಿ ಕಾರುಗಳಿಗೆ ಡ್ಯಾಶ್ಕ್ಯಾಮ್ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ರೀತಿಯಲ್ಲಿ ಬೇರೆಯವರು ಉದ್ದೇಶಪೂರ್ವಕವಾಗಿ ಅಪಘಾತದ ಸನ್ನಿವೇಶ ಸೃಷ್ಟಿಸಿದಾಗ. ರಸ್ತೆಯಲ್ಲಿ ಗಲಾಟೆಗಳಾದಾಗ ಡ್ಯಾಶ್ಕ್ಯಾಮ್ಗಳು ಸಾಕ್ಷಿಗಳಾಗುತ್ತವೆ. ಇದರಿಂದ ವಂಚನೆಗಳನ್ನು, ಜಗಳಗಳನ್ನು ತಪ್ಪಿಸಬಹುದಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಕೆಲಸ ಮಾಡುವ ಗುಂಪು ಸಕ್ರಿಯವಾಗಿದ್ದು ಪೊಲೀಸರು ಕೂಡ ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications