Bengaluru: ಚಲಿಸುತ್ತಿದ್ದ ಕಾರಿನ ಮುಂದೆ ಬಂದು ಬಿದ್ದ ಮಹಿಳೆ: ಬಳಿಕ ಆಗಿದ್ದೇನು?
ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಕಲಿ ಅಪಘಾತಗಳನ್ನು ಸೃಷ್ಟಿಸುವ ಮೂಲಕ ವಾಹನ ಸವಾರರನ್ನು ದೋಚುವ ದಂಧೆಯೊಂದು ಶುರುವಾಗಿದೆ. ಅನೇಕ ಕಾರು, ಬೈಕು ಓಡಿಸುವವರು ಇಂತಹ ಘಟನೆಗಳಿಂದ ಹಣ ಕಳೆದುಕೊಂಡಿರುವ ಘಟನೆಗಳು ಬಹಳಷ್ಟಿವೆ. ಇದಕ್ಕಾಗಿಯೇ ಇತ್ತೀಚೆಗೆ ಎಲ್ಲಾ ಕಾರುಗಳು ಮಾಲೀಕತು ಡ್ಯಾಷ್ ಕ್ಯಾಮ್ ಅಳವಡಿಸಿಕೊಳ್ಳುತ್ತಿದ್ದಾರೆ. ಚಲಿಸುತ್ತಿದ್ದ ಕಾರಿನ ಮುಂದೆ ಬಂದು ಬಿದ್ದು ಮಹಿಳೆಯೊಬ್ಬರು ಹೈಡ್ರಾಮಾ ಮಾಡಿರುವ ಘಟನೆಯ ವಿಡಿಯೋ ಇದೀಗ ವೈರಲ್ ಅಗುತ್ತಿದೆ.
ಶೋನಿ ಕಪೂರ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಹೀಗೆ ಮೋಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಚಲಿಸುತ್ತಿದ್ದ ಕಾರಿನ ಮುಂದೆ ಮಹಿಳೆ ಏಕಾಏಕಿ ಉದ್ದೇಶಪೂರ್ವಕವಾಗಿ ಬಿದ್ದು ಅಪಘಾತವಾಗಿದೆ ಎನ್ನುವ ನಾಟಕ ಆಡಲು ಪ್ರಯತ್ನಿಸಿದ್ದಾರೆ. ಈ ಘಟನೆ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದೆ.

ಜನನಿಬಿಡ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಮಹಿಳೆ, ಚಲಿಸುತ್ತಿದ್ದ ಕಾರಿನ ಬಾನೆಟ್ಗೆ ತಾನೇ ಬಂದು ಗುದ್ದಿದ್ದಾಳೆ, ಅಪಘಾತ ತಪ್ಪಿಸಲು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಅಪಘಾತ ತಪ್ಪಿಸಲು ಚಾಲಕ ಪ್ರಯತ್ನ ಮಾಡಿದರೂ, ಕಾರಿನ ಮೇಲೆ ಬಿದ್ದ ಮಹಿಳೆ ಕಾರು ಚಾಲಕನ ಮೇಲೆ ಕೂಗಾಡಲು ಶುರುಮಾಡಿದ್ದಾಳೆ.
ಆಕೆ ಕಾರು ಚಾಲಕನನ್ನು ಬೈಯಲು ಮುಂದಾಗುತ್ತಿದ್ದಂತೆ, ಚಾಲಕ ಆಕೆಯನ್ನು ಹೆದರಿಸುವ ಪ್ರಯತ್ನದಲ್ಲಿ ಪೊಲೀಸ್, ಪೊಲೀಸ್ ಎಂದು ಕಿರುಚಿದ್ದಾನೆ. ಆದರೂ ಮಹಿಳೆ ಕಾರಿಗೆ ದಾರಿ ಬಿಡಲು ನಿರಾಕರಿಸಿದರು. ಬಳಿಕ ದಾರಿಯನ್ನು ಬಿಟ್ಟು ದೂರ ಸಾಗಿದ್ದಾಳೆ.
Put a dashcam
— ShoneeKapoor (@ShoneeKapoor) August 28, 2024
You never know when this happens to you.
Especially, when it is a lady. If something happens, people will take her side instantly. pic.twitter.com/H5b2nhUjuF
ಡ್ಯಾಶ್ಕ್ಯಾಮ್ ಹಾಕುವಂತೆ ಮನವಿ
ನಿಮ್ಮ ಕಾರುಗಳಿಗೆ ಡ್ಯಾಶ್ಕ್ಯಾಮ್ ಹಾಕಿ, ಯಾವಾಗ ಬೇಕಾದರೂ ಇಂತಹ ಘಟನೆ ನಡೆಯುತ್ತದೆ ಎಂದು ಕಪೂರ್ ತಮ್ಮ ಪೋಸ್ಟ್ನಲ್ಲಿ ಚಾಲಕರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಹಲವು ಮಂದಿ ಸಹಮತ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದು, "ಭಾರತದಲ್ಲಿ ಕಾರುಗಳಿಗೆ ಡ್ಯಾಶ್ಕ್ಯಾಮ್ ಅನಿವಾರ್ಯ. ನೀವು ರಸ್ತೆಗಳಲ್ಲಿ ಯಾವ ರೀತಿಯ ವ್ಯಕ್ತಿಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿದ್ದು ಭಾರತದಲ್ಲಿ ಕಾರುಗಳಿಗೆ ಡ್ಯಾಶ್ಕ್ಯಾಮ್ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ರೀತಿಯಲ್ಲಿ ಬೇರೆಯವರು ಉದ್ದೇಶಪೂರ್ವಕವಾಗಿ ಅಪಘಾತದ ಸನ್ನಿವೇಶ ಸೃಷ್ಟಿಸಿದಾಗ. ರಸ್ತೆಯಲ್ಲಿ ಗಲಾಟೆಗಳಾದಾಗ ಡ್ಯಾಶ್ಕ್ಯಾಮ್ಗಳು ಸಾಕ್ಷಿಗಳಾಗುತ್ತವೆ. ಇದರಿಂದ ವಂಚನೆಗಳನ್ನು, ಜಗಳಗಳನ್ನು ತಪ್ಪಿಸಬಹುದಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಕೆಲಸ ಮಾಡುವ ಗುಂಪು ಸಕ್ರಿಯವಾಗಿದ್ದು ಪೊಲೀಸರು ಕೂಡ ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications