ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು
ಬೆಂಗಳೂರು, ಜೂನ್ 11: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಮಹಿಳೆಯ ಶವವೊಂದು ಪತ್ತೆಯಾಗಿತ್ತು.
ಮಹಿಳೆ ಸಾವಿಗೆ ಕಾರಣ ತಿಳಿದು ಬಂದಿಲ್ಲ ಆದರೆ ಪೊಲೀಸರು, ಕುಟುಂಬಸ್ಥರು ಕೆಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆಗೆ ಶ್ರವಣದೋಷವಿದ್ದ ಕಾರಣ ಆಕೆ ರೈಲು ಬಂದಿದ್ದೇ ತಿಳಿಯದೆ ರೈಲು ಹರಿದು ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳಿದ್ದರೆ, ಅದು ಸಹಜ ಸಾವಲ್ಲ ಕೊಲೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಹತ್ತು ದಿನಗಳ ಹಿಂದೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ 30 ವರ್ಷ ಆಸುಪಾಸಿನ ಮಹಿಳೆಯೊಂದರ ಶವ ಪತ್ತೆಯಾಗಿತ್ತು. ಇದೀಗ ಪೊಲೀಸರು ಅವರ ಸಂಬಂಧಿಕರನ್ನು ಪತ್ತೆ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮೂಲಕ ಟೀಕಾ ದೇವಿ ಸಹೋದರ ಸಂಬಂಧಿ ಜೊತೆಗೆ ಈಜಿಪುರದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸಿಸುತ್ತಿದ್ದರು. ಟೀಕಾ ದೇವಿ ಮೇ 31ರಂದು ನಾಪತ್ತೆಯಾಗಿದ್ದರು. ಕಾಣೆಯಾಗಿ ಒಂದು ದಿನ ಬಳಿಕ ಕುಟುಂದವರು ಪೊಲೀಸರಿಗೆ ದೂರು ನೀಡಿದ್ದರು.
ಟೀಕಾ ಸಹೋದರಿ ಮುನ್ನಾ ಹೇಳುವ ಪ್ರಕಾರ ಮೇ 31ರಂದು ಸಂಜೆ 4.30ರ ಸುಮಾರಿಗೆ ಅವರು ಮನೆ ಬಿಟ್ಟಿದ್ದರು.ಮುನ್ನ ಮನೆಗೆ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾರೆ. ಅವರ ಬಟ್ಟೆ, ಬ್ರಷ್ ಇನ್ನಿತರೆ ವಸ್ತುಗಳು ಕಾಣೆಯಾಗಿದ್ದವು. ಕೆಲವು ಸಿಸಿ ಕ್ಯಾಮರಾಗಳನ್ನು ವೀಕ್ಷಿಸಿ ಇತರರನ್ನು ವಿಚಾರಿಸಿದಾಗ ಅವರು ಒಬ್ಬರೇ ಬ್ಯಾಂಗ್ ಒಂದನ್ನು ಹಿಡಿದುಕೊಂಡು ಓಡಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಅವರ ಕುಟುಂಬದವರು ಹೇಳುವ ಪ್ರಕಾರ ಅವರು ಯಾವತ್ತೂ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ಅವರಿಗೆ ಬೆಂಗಳೂರಿನಲ್ಲಿ ಯಾವ ಸ್ನೇಹಿತರೂ ಇಲ್ಲ, ಬೆಂಗಳೂರಲ್ಲಿ ಸರಿಯಾಗಿ ಓಡಾಡಿಯೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಹಳಿಯನ್ನು ಕ್ರಾಸ್ ಮಾಡುವ ವೇಳೆ ಅವರ ಮೇಲೆ ರೈಲು ಹರಿದಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರ ಅಭಿಪ್ರಾಯವಾಗಿದೆ.












Click it and Unblock the Notifications