ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು?
ಬೆಂಗಳೂರು, ನವೆಂಬರ್ 10 : ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು? ಎನ್ನುವ ಸಂವಾದ ಕಾರ್ಯಕ್ರಮವನ್ನು ಮುನ್ನೋಟ ಬುಕ್ ಸ್ಟೋರ್ಸ್ ಬೆಂಗಳೂರಿನ ಬಸವನಗುಡಿಯಲ್ಲಿರುವ ತಮ್ಮ ಶಾಖೆಯಲ್ಲಿ ನವೆಂಬರ್ 12ರಂದು, ಭಾನುವಾರ ಆಯೋಜಿಸಿದೆ.
ಪ್ರತಿ ಭಾನುವಾರ ಬೆಳಿಗ್ಗೆ ವಿಭಿನ್ನ ವಸ್ತುವಿನೊಂದಿಗೆ ಕನ್ನಡಿಗರೆದಿರು ಹಾಜರಾಗುವ ಮುನ್ನೋಟ ಪುಸ್ತಕ ಮಳಿಗೆ, ಆ ವಾರ ಆಯ್ದುಕೊಂಡಿರುವುದು ಇತಿಹಾಸದ ವಿದ್ಯಾರ್ಥಿಗಳಿಗೆ, ಇತಿಹಾಸದ ಬಗ್ಗೆ ಕುತೂಹಲ ಇರುವವರಿಗೆ ಹೇಳಿ ಮಾಡಿಸಿದಂಥ ವಿಷಯ.

ಕನ್ನಡ ನಾಡಿನ ಇತಿಹಾಸದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ಗುರುತು ಅಚ್ಚಳಿಯದ್ದು. ಮಹಾರಾಷ್ಟ್ರದಲ್ಲಿರುವ ಅಜಂತಾ, ಎಲ್ಲೋರಾದ ಅದ್ಭುತ ಶಿಲ್ಪಗಳನ್ನು ರೂಪಿಸಿದವರು ರಾಷ್ಟ್ರಕೂಟರು. ಸುಮಾರು 250 ವರ್ಷಗಳ ಕಾಲ ಇಂದಿನ ಮಾಹಾರಾಷ್ಟ್ರದ ಬಹುಭಾಗವನ್ನೂ ಸೇರಿದ ಕನ್ನಡ ನಾಡನ್ನು ಆಳಿದ ರಾಷ್ಟ್ರಕೂಟರು ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮವೂ ಇದಾಗಿದೆ.
ರಾಷ್ಟ್ರಕೂಟರ ಕಾಲದಲ್ಲಿ ನಮ್ಮ ಸಮಾಜ ಹೇಗಿತ್ತು? ಅವರ ಸಾಧನೆಗಳೇನು? ಆಳ್ವಿಕೆ ಹೇಗಿತ್ತು? ಸಾವಿರ ವರ್ಷಗಳ ಹಿಂದಿನ ಕನ್ನಡ ನಾಡಿನ ಇತಿಹಾಸದ ಪ್ರಮುಖ ಘಟ್ಟವೊಂದನ್ನು ಪರಿಚಯಿಸುವ ಮಾತುಕತೆ ಇದು.
ಕಾರ್ಯಕ್ರಮವನ್ನು ನಾಡಿನ ಇತಿಹಾಸ ಅಧ್ಯಯನಕಾರ, ಯುವ ಕನ್ನಡಿಗ ಆದಿತ್ಯ ಕುಲಕರ್ಣಿಯವರು ನಡೆಸಿಕೊಡಲಿದ್ದಾರೆ. ರಾಷ್ಟ್ರಕೂಟರ ಬಗ್ಗೆ ಪಠ್ಯಗಳಲ್ಲಿ ಓದಿರುವುದನ್ನು ಬಿಟ್ಟು ವಿಶೇಷ ಮಾಹಿತಿಗಳು ಜನತೆಯಲ್ಲಿರುವುದಿಲ್ಲ. ಹಾಗಾಗಿ ಈ ವಿಶಿಷ್ಟ ಸಂವಾದದ ಪ್ರಯೋಜನವನ್ನು ಬಳಸಿಕೊಳ್ಳಬಹುದಾಗಿದೆ.
ವಿಷಯ : ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು?
ನಡೆಸಿಕೊಡುವವರು : ಇತಿಹಾಸಕಾರ ಆದಿತ್ಯ ಕುಲಕರ್ಣಿ
ಎಂದು? : 12 ನವೆಂಬರ್, ಭಾನುವಾರ
ಸಮಯ : ಬೆಳಿಗ್ಗೆ 11.30
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications